ಬೆಳಕು

ಜ್ಞಾನದ ಜ್ಯೋತಿಯ ಬೆಳಗೋಣ
ಅಜ್ಞಾನದ ಕೊಳೆ ತೊಳೆಯೋಣ
ಸುಜ್ಞಾನದ ವರ ಪಡೆಯೋಣ
ವಿಜ್ಞಾನದ ಜೊತೆ ನಡೆಯೋಣ

ನಿತ್ಯವಸಂತದ ಹಚ್ಚನೆ ಹಸುರಿನ
ಹೊಸ ಹಾಡುಗಳನು ಹಾಡೋಣ
ವಿದ್ಯೆ ಬುದ್ಧಿಯಲಿ, ಸದ್ಭಾವನೆಯಲಿ
ಸಾರ್ಥಕ ಬಗೆಯಲಿ ಬದುಕೋಣ

ಒಡಲಲಿ ಶಕ್ತಿಯ ಪ್ರೇರಣೆಗೊಳಿಸಿ
ಸ್ಫೂರ್ತಿಯ ತತ್ವವ ಬಿತ್ತೋಣ
ಎಲ್ಲರ ಮನದಲಿ ನಾಳಿನ ಕನಸಿನ
ಬಣ್ಣದ ಕಲ್ಪನೆ ಬೆಳೆಸೋಣ

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಖರತೆ: ಪರಾಶರ ಮತ್ತು ಕೆ.ಪಿ. ಪದ್ಧತಿಗಳ ಅಪೂರ್ವ ಸಮನ್ವಯ