Posts

Showing posts from August, 2019

ಕೃಷ್ಣ + ಅರ್ಜುನ = ಮಹಾಭಾರತದ 'ವ್ಯಾಸವಿಸ್ತಾರ'!

Image
ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಯಾಕೆ ಕೃಷ್ಣನ ಬಗ್ಗೆ ಬರೆಯಬಾರದು ಅನ್ನಿಸಿತು. ನೀನು  ನಿ ನ್ನ ರಕ್ಷಣೆಯ ವಿಷಯದಲ್ಲಾಗಲೀ, ಯುದ್ಧಗಳಲ್ಲಾಗಲೀ ಹಿಂದೆ ಬೀಳುವಂತಿಲ್ಲ ಎಂಬ ಬಗ್ಗೆ ಬೋಧಿಸುವ ಒಂದು ಪವಿತ್ರ ಗ್ರಂಥ ಭಗವದ್ಗೀತೆ. ಆರನೇ ತರಗತಿಯ ಚಿಕ್ಕ ವಯಸ್ಸಿನಲ್ಲೇ ನಾನದನ್ನು ಹತ್ತಾರು ಬಾರಿ ಓದಿ ಮನನ ಮಾಡಿಕೊಂಡಿದ್ದೆ. ಕೃಷ್ಣನ ಮೂಲಕ ಅಲ್ಲಿ ವಿವಿಧ ಯೋಗಗಳು ಪ್ರತಿಪಾದಿಸಲ್ಪಟ್ಟಿದ್ದೂ ಕೂಡ ಇದೆ. ಅರ್ಜುನನಲ್ಲಿ ಎಲ್ಲ ಶಕ್ತಿ ಸಾಮರ್ಥ್ಯ ಇದ್ದು, ಆತ ಯುದ್ಧಗಳಲ್ಲಿ ಹಿಂದೆ ಬೀಳದೆ ತನ್ನೆಲ್ಲ 'ಒಳ್ಳೆಯತನ'ಗಳನ್ನು ಬಳಸಿ ಕೃಷ್ಣನ ಸಾರಥ್ಯದಲ್ಲಿ ವಿಜಯ ಸಾಧಿಸುವ ಸಂದರ್ಭ ನನಗೆ ಅತ್ಯಂತ ಮುಖ್ಯವಾಗುತ್ತದೆ. ವ್ಯಾಸ ವಿರಚಿತವಾದ ಮಹಾಭಾರತ ಹಾಗೂ ಮತ್ತೆ ಅವರಿಂದಲೇ ವಿಸ್ತರಿಸಿ ರಚಿಸಲ್ಪಟ್ಟ ಈ ಭಗವದ್ಗೀತೆಯಿಂದ ನಾನೇನಾದರೂ ಕಲಿಯಬೇಕಾಗಿದ್ದರೆ ಅಲ್ಲಿ ಅರ್ಜುನನ 'ಸಾಚಾತನ' ಮತ್ತು ಶ್ರೀಕೃಷ್ಣನ 'ಅಕಳಂಕ' ಚಾರಿತ್ರ್ಯ ಬಹಳ ಮುಖ್ಯವೆನಿಸುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ವ್ಯಾಸರ ಕಾಲ್ಪನಿಕ ಜಗತ್ತು ಅದ್ಭುತವೆನಿಸುತ್ತದೆ. ಸಂಸ್ಕೃತದ ಪದಧಾತುಗಳ ವ್ಯುತ್ಪತ್ತಿ ಮತ್ತು ಅರ್ಥನಿರ್ಣಯದ ಪ್ರತಿಪಾದನೆಗಳು ಅಗಾಧವೆನಿಸುತ್ತವೆ. ಕೇವಲ ಒಂದು ಕಥೆ ಎನ್ನುವಾಗಲೂ ಕೂಡ ಕಥೆಯೂ ಒಂದು ಸಾಧ್ಯತೆ ಮತ್ತು ಅದು ಸ್ವಯಂಸಿದ್ಧ ಎಂಬ ನನ್ನ ಕಲ್ಪನೆಗೆ ಪುಷ್ಟಿ ಕೊಡುವುದು ವ್ಯಾಸರ ಆಖ್ಯಾನಗಳು. ಏಕೆಂದರೆ ವ್ಯಾಸ ವಿರಚಿತವಾದ  ಕಾವ್ಯ ಜಗತ್ತಿ

ತಂತ್ರಗಾರಿಕೆ

Image
ನಮ್ಮ ಸುತ್ತಲೂ ಹಲವು ಬಗೆಯ ಜನರು ಇರುತ್ತಾರೆ. ವಿವಿಧ ರಂಗಗಳಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ಮುಂದುವರಿಯಲು ಹಲವಾರು ಚಾಣಾಕ್ಷ ನಡೆಗಳನ್ನು, ತಂತ್ರಗಳನ್ನು ಅನುಸರಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಇಂದು ಇಂತಹ ತಂತ್ರಗಾರಿಕೆ ನಮ್ಮ ಪ್ರಾಪಂಚಿಕತೆಯ ಬಹಳ ಮುಖ್ಯವಾದ ಅನಿವಾರ್ಯತೆಯಾಗಿ ಪರಿಣಮಿಸಿದೆ . ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಉದ್ಯೋಗಿಗಳು ತಂತ್ರಗಾರಿಕೆ ಯನ್ನು ಅನುಸರಿಸುವುದನ್ನು ನೋಡುತ್ತೇವೆ. ಯಾವುದೇ ತಂತ್ರವನ್ನು ಅನುಸರಿಸದಿದ್ದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯವೇ ಇಲ್ಲ ವೇನೋ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ - ಅದನ್ನು ನೀವೇ ಹುಡುಕಿಕೊಳ್ಳಬೇಕು ಎನ್ನುತ್ತಾರೆ. ನಿಮ್ಮ ಚಾಣಾಕ್ಷತೆಯನ್ನು, ತಂತ್ರಗಾರಿಕೆಯನ್ನು ಪ್ರತಿದಿನ ಹೆಚ್ಚಿಸಿಕೊಳ್ಳುತ್ತಲೇ ಇರಬೇಕು. ನಮ್ಮನ್ನು ಮೆಚ್ಚುವ ಒಂದಷ್ಟು ಜನರ ಗುಂಪನ್ನು ನಾವು ಹೊಂದಿರಬೇಕು. ನಮ್ಮ ಕಾರ್ಯಗಳನ್ನು ಅನಿವಾರ್ಯವಾಗಿ ಜಾಹೀರುಪಡಿಸಲೂ ಬೇಕು. ಏಕೆಂದರೆ ವಿನಾಕಾರಣ 100 ಜನರು ದೂಷಿಸುವ ಸಂದರ್ಭದಲ್ಲಿ 900 ಜನರು ನಿಮ್ಮನ್ನು ಅರ್ಥಬದ್ಧವಾಗಿ ಕೊಂಡಾಡುತ್ತಿದ್ದರೆ ದೂಷಣೆಗಳು ಹಿಂದೆ ಸರಿಯುತ್ತವೆ. ನನ್ನ ಸ್ನೇಹಿತರೊಡನೆ ಇಂತಹ ಲೋಕವೃತ್ತಾಂತಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆ. ಸ್ನೇಹಿತರೊಬ್ಬರು ದೊಡ್ಡ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರು ನಮ್ಮ ಮಾತುಕತೆಯ ಮಧ್ಯೆ "ಇವತ್ತು ಎದುರಲ್ಲಿ ರೌಡಿಯಾಗಿರಲು ಸಾಧ್ಯವಿಲ

ಪ್ರಯೋಗಶೀಲತೆ

Image
"Winners never quit and quitters never win" - ಇಂದು ಆಂಗ್ಲಭಾಷೆಯಲ್ಲಿರುವ Vince Lombardi ಅವರ ಒಂದು ಉಕ್ತಿ. ಯಾವನು ಕಣಕ್ಕಿಳಿಯುತ್ತಾನೋ ಆತ ಪಣದಲ್ಲಿ ಉಳಿಯುತ್ತಾನೆ. ನಾವು ಬಾಳಿನಲ್ಲಿ ಯಶಸ್ಸು ಗಳಿಸಬೇಕಾದರೆ ಪ್ರಯೋಗಶೀಲರಾಗಿರಬೇಕು. ಪ್ರಯೋಗಶೀಲತೆಯು ಯಾವಾಗಲೂ ಮೆಚ್ಚತಕ್ಕದ್ದಾಗಿದೆ. ಯಾರು ಒಳ್ಳೆಯ ಬಗೆಯಲ್ಲಿ ಪ್ರಯೋಗಗಳನ್ನು ಮಾಡುತ್ತಾರೋ ಅವರೇ ಬದುಕಿನಲ್ಲಿ ಯಶಸ್ವಿಯಾಗಬಲ್ಲರಷ್ಟೇ. ಸಫಲತೆಯು ಪ್ರಯತ್ನಗಳೇ ಇಲ್ಲದೆ ಕೈಗೂಡುವಂಥದ್ದಲ್ಲ. ಎಲ್ಲ ಸಫಲತೆಗಳ ಹಿಂದೆ ಯಾವುದಾದರೂ ಬಗೆಯ ಪ್ರಯತ್ನಗಳಂತೂ ಇದ್ದೇ ಇರುತ್ತವೆ. ಯಾವುದೇ ರೀತಿಯ ಪ್ರಯೋಗಗಳಲ್ಲಿ ಸುಧಾರಣೆಗಳಾಗಬೇಕಾದರೆ ಪ್ರಯೋಗಕ್ಕೆ ಬಳಸುವ ಮೂಲವಸ್ತುಗಳಲ್ಲಿ, ವಿಚಾರಗಳಲ್ಲಿ, ಬಗೆಯಲ್ಲಿ ಬದಲಾವಣೆಗಳಾಗಬೇಕು. ಪ್ರಯೋಗಗಳಿಗೆ ಬಳಸುವ ಮೂಲವಸ್ತುಗಳು - ಅಂದರೆ ಪರಿಕರಗಳು ಎರಡು ಬಗೆಯವು. ಒಂದನೆಯದು, ಸ್ಥಿರವಾದವು - constants. ಇನ್ನೊಂದು ಬಗೆಯ ಮೂಲವಸ್ತುಗಳು ಚರವಾದವು - variables. ಸ್ಥಿರ ಮಾದರಿಯ ಪರಿಕರಗಳನ್ನು ಬದಲಾಯಿಸುವ ಅಗತ್ಯತೆಯೇ ಇರುವುದಿಲ್ಲ. ಆದರೆ ಚರ ಮಾದರಿಯ ಪರಿಕರಗಳನ್ನು ಬದಲಾಯಿಸುತ್ತಿರಬೇಕಾಗುತ್ತದೆ. ಪ್ರಯೋಗಶೀಲನಾದ ವ್ಯಕ್ತಿಯು ತನ್ನ ಅನುಭವ, ತಿಳಿವಳಿಕೆಯನ್ನು ಹೆಚ್ಚಿಸಿಕೊಂಡು ಈ constants ಮತ್ತು variablesಗಳನ್ನು ವಿವೇಚನೆಯಿಂದ ನಿರ್ಧರಿಸಿಕೊಂಡು ಪ್ರಯೋಗಗಳಿಗೆ ಹಚ್ಚಬೇಕಾಗುತ್ತದೆ. ಅದ್ಭುತವಾದದ್ದನ್ನು ಕಂಡುಹಿಡಿಯುವ ಜೀನಿಯಸ

ನಗುವ ವಸಂತ

Image
ನಿನ್ನನೆ ನೋಡಿ ನಗುವ ವಸಂತ ಯಾರಿವನು? ವಿಳಾಸವಿಲ್ಲದೆ, ವಿಲಾಸ ತೋರುವ ಚೆನ್ನಿಗನು! ಕನಸಿನ ಊರಿನ ಕಥೆಯ ಹೇಳುವ ಜೊತೆಗಾರ; ಕ್ರೌರ್ಯದ ಮುಂದೆ ಶೌರ್ಯವ ಸಾರುವ ಸರದಾರ! ಕಡಲಿನ ಮುತ್ತು, ಸೋಜಿಗವಿತ್ತು ಸಲಹುವನು; ಗುಟ್ಟನು ಹೇಳಿ ಚಂದ್ರನ ಲೋಕಕೆ ಕರೆಯುವನು. ಒಲವಿನ ಉಡುಗೊರೆ, ಪ್ರೇಮದ ಕಾಣಿಕೆ ಮೆಚ್ಚುವನು; ಸರಸದಿ ಮೋಹಕ ಮಾತಿನ ವರಸೆಯ ಬಿಚ್ಚುವನು. ✍️ಶಿವಕುಮಾರ ಸಾಯ

ಅಭಯ

Image
ಅಲೆದಾಡದೆ, ಸುಳಿದಾಡದೆ ಸ್ಥಿರವಾಯಿತು ಮನಸು ದೇವ, ನಿನ್ನ ಧ್ಯಾನದಿಂದ ನನಸಾಯಿತು ಕನಸು ಸರಾಗವಾಗಿ ಹೊಳೆದು ಬಂದು ಶಾಂತಿ ನೀಡಿದೆ ಮೋಹ - ಮಂಜು ಮಾಯವಾಗಿ ಭ್ರಾಂತಿಯಳಿದಿದೆ ನಾಡ ಜನರ ಒಂದಾಗಿಸಿ ಧರೆಯನುಳಿಸಿದೆ ಮೋಡ ಹರಡಿ, ಮಳೆಯ ಸುರಿಸಿ ಆದರಿಸಿದೆ ಉಭಯ ನೀಗಿ, ಅಭಯ ತುಂಬಿ ಮತಿಯ ತೋರಿದೆ ದೈವದೊಲುಮೆ - ನಿಲುಮೆಯಿಂದ ಹಿತವುಂಟಾಗಿದೆ ✍️ ಶಿವಕುಮಾರ ಸಾಯ