ಇಲ್ಲಿಂದ ಬದಲಾಗಲಿದೆ ಭವಿಷ್ಯ?!
ಪ್ರಿಯ ಓದುಗರೇ, 2024ನೇ ಇಸವಿಯ ಮಧ್ಯಭಾಗದಲ್ಲಿ ನಾನು ಅಪಘಾತದಿಂದ ಗಂಭೀರವಾಗಿ ಗಾಯಗೊಂಡದ್ದು, ವಿದೇಶಿ ಹೂಡಿಕೆದಾರರು (FII) ನಿವ್ವಳ ಮಾರಾಟಗಾರರಾಗಿ ತಿರುಗಿದ್ದು ಮತ್ತು ಮಾರುಕಟ್ಟೆ ಮೌಲ್ಯ ದುಬಾರಿಯಾಗಿದ್ದ ಕಾರಣ ಭಾರತೀಯ ಶೇರುಪೇಟೆ ಕುಸಿಯತೊಡಗಿದ್ದು — ಇವೆಲ್ಲವೂ ಕಾಕತಾಳೀಯವಾಗಿ ಒಂದೇ ಸಮಯದ ಆಸುಪಾಸಿನಲ್ಲಿ ನಡೆದ ಸಂಗತಿಗಳು. ಅಪಘಾತ ನಡೆದದ್ದು ಆಗಸ್ಟ್ 30ರಂದು. ಕೆಪಿ (KP) ನ್ಯೂ ಅಯನಾಂಶದ ಪ್ರಕಾರ, ಅಂದು ನನ್ನ ವಿಂಶೋತ್ತರಿ ದಶೆಯಲ್ಲಿ ಗುರು ಮಹಾದೆಸೆಯಲ್ಲಿ ಬುಧ ಅಂತರ್ದಶೆ, ಶುಕ್ರ ಪ್ರತ್ಯಂತರ ದೆಸೆ, ಗುರು ಸೂಕ್ಷ್ಮ ದೆಸೆ ಹಾಗೂ ಮಂಗಳ ಗ್ರಹದ ಪ್ರಾಣ ದೆಸೆ ಇತ್ತು ಎಂದು ತಿಳಿದುಬರುತ್ತದೆ. ದುರ್ಘಟನೆ ನಡೆದ ಕಾರಣ ಶೇರುಪೇಟೆಯಲ್ಲಿ ನಾನೊಬ್ಬ ನುರಿತ ಅಭ್ಯಾಸಿಯಾಗಿದ್ದರೂ, ಗಾಯಾಳುವಾಗಿದ್ದರಿಂದ ಏನೂ ಮಾಡಲಾಗದೇ ಹೋದ ದುಃಖದಾಯಕ ಸಮಯವದು. ಆ ನಂತರ ಲಾಭವಿರಲಿ, ನಷ್ಟ ಬರಲಿ ನಾನೊಬ್ಬ ಮ್ಯೂಚುವಲ್ ಫಂಡ್ಗಳ ಹೂಡಿಕೆದಾರನಾಗಿ ಬದಲಾದೆ. ಆದರೆ, 2024ರ ಸೆಪ್ಟೆಂಬರ್ - ಅಕ್ಟೋಬರ್ ಸಮಯದಿಂದ ಕುಸಿತ ಕಾಣುತ್ತಿರುವ ನಮ್ಮ ಮಾರುಕಟ್ಟೆ, ಇದುವರೆಗೂ ಅಂದರೆ ಜುಲೈ 10, 2026ರ ತನಕವೂ ತನ್ನ ಗರಿಷ್ಠ ಮಟ್ಟದಿಂದ ಕೆಳಗೆಯೇ ಇರುವುದು ಕಂಡುಬಂದಿದೆ. ಹೂಡಿಕೆಗಳು ನಷ್ಟದಲ್ಲೇ ಉಳಿದದ್ದರಿಂದ, ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಉದ್ಯೋಗಕ್ಕೆ ರಾಜೀನಾಮೆ ನೀಡುವ ಭಾವನಾತ್ಮಕ ನಿರ್ಧಾರವನ್ನು ನಾನು ಕೈಬಿಡುವಂತಾದದ್ದು ದೈವಲೀಲೆಯೇ ಸರಿ. ಆದರ...