Posts

Showing posts from September, 2022

ಆದರ್ಶ ಗುರು, ಆತ್ಮೀಯ ಸ್ನೇಹಿತ ಶ್ರೀ ಶೀನಪ್ಪ ನಾಯ್ಕ್ ಕುದ್ಕಲ್

Image
ಜೀವನದಲ್ಲಿ ಕೆಲವು ಮಹಾತ್ಮರು ನಮಗೆ ಅಕಸ್ಮಾತ್ ಸಿಗುತ್ತಾರೆ. ತಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ಆದರ್ಶ ನಡೆ-ನುಡಿಗಳಿಂದ ಪ್ರಜ್ವಲಿಸುತ್ತಾರೆ. ಅಂತಹ ಒಬ್ಬರು ಅಪರೂಪದ ಆದರ್ಶ ವ್ಯಕ್ತಿ ಶ್ರೀ ಶೀನಪ್ಪ ನಾಯ್ಕ್ ಕುದ್ಕಲ್. ಶ್ರೀಯುತರು ಒಬ್ಬರು ಆದರ್ಶ ಕನ್ನಡ ಉಪನ್ಯಾಸಕರು ಎಂದು ಮನದುಂಬಿ ನಾನು ನನ್ನ ಖಾಸಗಿ ಬ್ಲಾಗ್‌ನಲ್ಲಿ  ಬರೆದುಕೊಳ್ಳುವಾಗ ನನ್ನ ಕಣ್ಣಾಲಿಗಳೇಕೋ ಭಾವಪೂರ್ಣವಾಗಿ ತೇವವಾಗುತ್ತಿವೆ. ನಾನು ಅಡ್ಯನಡ್ಕ ಜನತಾ ಪ್ರೌಢಶಾಲೆಗೆ ಅಧ್ಯಾಪಕನಾಗಿ ಸೇರಿದ ಸರಿಸುಮಾರು ಒಂದು ವರ್ಷದಲ್ಲಿ ಶ್ರೀಯುತ ಶೀನಪ್ಪ ನಾಯ್ಕರ ಪರಿಚಯವಾಗಿತ್ತು. ಅವರು ಜನತಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹುದ್ದೆಯನ್ನು ಅಲಂಕರಿಸಿದ್ದರು. ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಭಾಷೆಯ ಬೆಳವಣಿಗೆ, ಕನ್ನಡ ಸಂಸ್ಕೃತಿಯ ಉಳಿವು, ವಿದ್ಯಾರ್ಥಿಗಳ ವ್ಯಕ್ತಿತ್ವದ ಸರ್ವತೋಮುಖ ವಿಕಾಸಕ್ಕಾಗಿ ನಿರಂತರ ಪರಿಶ್ರಮಿಸಿದ ಒಬ್ಬರು ಅಪ್ಪಟ ಆದರ್ಶ ವ್ಯಕ್ತಿ ಎಂಬ ಚಾರಿತ್ರ್ಯ ಇವರಿಗಿತ್ತು. ಹಲವಾರು ಸಾಹಿತ್ಯ ಸಮ್ಮೇಳನ, ಫೆಸ್ಟ್‌ಗಳಲ್ಲಿ ಇವರ ನಿರೂಪಣೆ ಆಕರ್ಷಕವಾಗಿರುತ್ತಿತ್ತು. ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಇವರು ಕನ್ನಡ ಉಪನ್ಯಾಸಕರಾದ ಬಳಿಕ, ಸದ್ದಿಲ್ಲದೇ ಕನ್ನಡ ಉಳಿಸುವ ಕೈಂಕರ್ಯವನ್ನು ನಡೆಸುತ್ತಲೇ ಬಂದಿದ್ದಾರೆ. ಕಾಲೇಜಿನ ಯಾವುದೇ ಕಾರ್ಯಕ್ರಮಗಳಲ್ಲಿ ಇವರ ಸರಳ - ಸುಂದರ, ಪಾಂಡಿತ್ಯಪೂರ್ಣ ನಿರೂಪಣೆ ಆಕರ್ಷಕವಾಗ

ಪ್ರಶಾಂತಿ ವಿದ್ಯಾಲಯ ( ಆಶುಕವನ )

Image
ಪ್ರಶಾಂತಿ ವಿದ್ಯಾಲಯ, ಇದು ಜ್ಞಾನದ ದೇವಾಲಯ; ಅರಿವಿನ ಆಗರ, ಮೆರುಗಿನ ಸಾಗರ, ಮಕ್ಕಳ ನೆಚ್ಚಿನ ನಿಲಯ. ವಿಧವಿಧ ವಿದ್ಯೆ, ಕೌಶಲ ಗಳಿಸಿ ಬೆಳೆಯಲು ಸುಂದರ ತಾಣ; ಉಜ್ವಲ ಜೀವನ ರೂಪಿಸಿಕೊಳ್ಳಲು ಅನುಗುಣ ಇಲ್ಲಿಯ ಆವರಣ. ಆಟ - ಪಾಠ, ನಡತೆ - ನಿಯತ್ತು ಕಲಿಯುತ ಕೀರ್ತಿಯ ಪಡೆಯೋಣ; ಗುರುಗಳ ಮಾತು, ಹಿರಿಯರ ಹೊನ್ನುಡಿ ಪಾಲಿಸಿ ಮುನ್ನಡೆಯೋಣ. ಇದು ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಇಲ್ಲಿಗೆ ದಿನಾಂಕ 31-08-2022ರಂದು ಗಣೇಶ ಚತುರ್ಥಿ ಪ್ರಯುಕ್ತ ಮುಖ್ಯ ಅತಿಥಿಯಾಗಿ ತೆರಳಿದ ಸಂದರ್ಭದಲ್ಲಿ ಸ್ಫುರಿಸಿದ ಆಶುಕವನ. ಪ್ರಶಾಂತಿ ವಿದ್ಯಾಕೇಂದ್ರ ಬಾಯಾರು ಇಲ್ಲಿ ನಡೆದ ವಿದ್ಯಾಗಣಪತಿ ಮಹೋತ್ಸವದಲ್ಲಿ ಧಾರ್ಮಿಕ ಉಪನ್ಯಾಸಕ್ಕಾಗಿ ಅಧ್ಯಾಪಕ ಮಿತ್ರರಾದ ಸಹೃದಯಿ, ಸನ್ಮಾನ್ಯ ಶ್ರೀ ರಾಮಕೃಷ್ಣ ಬಲ್ಲಾಳ್ ಅವರು ಆಹ್ವಾನಿಸಿದ್ದರು. ನನ್ನ ಚಿಂತನೆಗಳಿಗೆ ಧಾರ್ಮಿಕ ಉಪನ್ಯಾಸದ ಚೌಕಟ್ಟು ಒದಗಿಸಿ ಪ್ರೋತ್ಸಾಹಿಸಿದ ಅವರಿಗೂ, ಗೌರವಿಸಿದ ಪ್ರಶಾಂತಿ ಸೇವಾ ಟ್ರಸ್ಟ್‌ನ ಅಧ್ಯಕ್ಷರು, ಉಪಾಧ್ಯಕ್ಷರಾದ ಶ್ರೀ ಪೆಲತ್ತಡ್ಕ ರಾಮಕೃಷ್ಣ ಭಟ್, ಸರ್ವ ಸದಸ್ಯರು, ಪ್ರಶಾಂತಿ ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಶ್ರೀ ಅನೂಪ್ ಸರ್, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ, ತಾಂತ್ರಿಕವಾಗಿ ಶ್ರಮಪಟ್ಟು ನಿರ್ವಹಿಸಿದ ಗೌರವಾನ್ವಿತ ಅಧ್ಯಾಪಕ ವೃಂದದವರು ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆಗಳು. ಪ್ರಶಾಂತಿ ವಿದ್ಯಾಕೇಂದ್ರದ ಕ್ಯಾಂಪ