Posts

Showing posts from January, 2023

ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ಸಾಹಿತ್ಯ ಕಮ್ಮಟ; ಸಾಹಿತ್ಯದಿಂದ ವ್ಯಕ್ತಿತ್ವದ ವಿಕಾಸ ಹಾಗೂ ಸ್ವಂತಿಕೆಯ ಪ್ರಕಾಶ: ಶಿವಕುಮಾರ್ ಸಾಯ

Image
ಅಡ್ಯನಡ್ಕ: ಅಡ್ಯನಡ್ಕ ಜನತಾ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 'ಶನಿವಾರ ಸಂಭ್ರಮ' ಸರಣಿ ಕಾರ್ಯಕ್ರಮದ ಅಂಗವಾಗಿ ಜನವರಿ 28ರಂದು ಸಾಹಿತ್ಯ ರಚನಾ ಕಮ್ಮಟ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜನತಾ ಪ್ರೌಢಶಾಲೆಯ ಕನ್ನಡ ಅಧ್ಯಾಪಕ, ಕವಿ, ಸಾಹಿತಿ ಶ್ರೀ ಶಿವಕುಮಾರ್ ಸಾಯ ಅವರು ಮಕ್ಕಳಿಗೆ ಸಾಹಿತ್ಯ ಮತ್ತು ಕವನ ರಚನೆಯ ತರಬೇತಿ ಮತ್ತು ಮಾರ್ಗದರ್ಶನ ನೀಡಿದರು. ಅವರು ಮಾತನಾಡುತ್ತಾ, ಮಕ್ಕಳ ಕವನಗಳನ್ನು ಬರೆಯುವಾಗ ಪ್ರಾಸಬದ್ಧತೆ, ಲಯ, ಛಂದಸ್ಸಿನ ಬಳಕೆ ಇದ್ದಾಗ ಬರವಣಿಗೆಯ ಕ್ರಮ ಆಕರ್ಷಕವಾಗುತ್ತದೆ. ವ್ಯಕ್ತಿತ್ವದ ವಿಕಾಸ ಹಾಗೂ ಸ್ವಂತಿಕೆಯ ಪ್ರಕಾಶಕ್ಕೆ ಸಾಹಿತ್ಯ ಪೂರಕ. ಸಾಹಿತಿಯು ತನ್ನ ಪ್ರತಿಭೆಯನ್ನು ಬಳಸಿ ಪದಗಳ ಮೂಲಕ ದೈನಂದಿನ ಜೀವನದಲ್ಲಿ ಕಂಡುಬರುವ ಆಶ್ಚರ್ಯ, ಕುತೂಹಲವನ್ನು ಹೊರಹಾಕುತ್ತಾನೆ. ಕವನ - ಕತೆಗಳನ್ನು ರಚಿಸುವುದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಬಹುದು ಎಂದು ಹೇಳಿದರು. ಸ್ವಂತಿಕೆಯು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನ. ಸುಲಭವಾಗಿ ಅನುಭವಕ್ಕೆ ದಕ್ಕುವ ವಿಷಯಗಳನ್ನು ಸಾಹಿತ್ಯ ರಚನೆಗೆ ಆರಿಸುವುದು ಸೂಕ್ತ. ಬರೆಯುವ ರೀತಿ, ಶೈಲಿ, ವರ್ಣನೆ, ಶಬ್ದ - ಅರ್ಥಾಲಂಕಾರಗಳ ಬಳಕೆ ಇವುಗಳಿಂದ ಪ್ರಬುದ್ಧ ಮತ್ತು ಜನಪ್ರಿಯವಾಗುವಂತೆ ಬರೆಯಬಹುದು. ಓದು ಮತ್ತು ಬರಹ ಎರಡೂ ಜೊತೆಯಾಗಿ ಸಾಗಬೇಕು. ಬರೆಯುತ್ತಾ ಬರೆಯು

ಆ ಒಂಭತ್ತು ಸಂಗತಿಗಳು.......

Image
ಎಲ್ಲರಿಗೂ ನಮಸ್ಕಾರಗಳು. ಈ ಒಂದು ಲೇಖನದಲ್ಲಿ ವಿಜ್ಞಾನದ ದೊಡ್ಡ ಸಿದ್ಧಾಂತಗಳು, ಜ್ಯೋತಿಷ್ಯ - ಮಂತ್ರ - ತಂತ್ರಗಳು, ಸಾಹಿತ್ಯ - ಕಲಾಪ್ರಿಯತೆ, ಅಧ್ಯಾತ್ಮ, ಯೋಗ ಮತ್ತು ಧ್ಯಾನ, ತತ್ತ್ವಶಾಸ್ತ್ರ, ಆನ್ವಯಿಕ ಮನಃಶಾಸ್ತ್ರ ಮುಂತಾದ ವಿಷಯಗಳ ಒಟ್ಟು ಅನುಭವವನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳಬಯಸುತ್ತೇನೆ. ಈ ವಿಷಯಗಳು ನನಗೆ ಬದುಕಿನ ಕೆಲವು ಹಂತಗಳಲ್ಲಿ ಆಸಕ್ತಿ, ಅನಿವಾರ್ಯತೆ ಮತ್ತು ಪ್ರಭಾವ ಬೀರಿದ ವಿಭಾಗಗಳು. ಅನುಭವಗಳು ವಿಕಸಿತವಾದಂತೆ ನನ್ನ ಅಧ್ಯಯನ ಅನಿವಾರ್ಯವಾಗತೊಡಗಿತು. ಇತ್ತೀಚೆಗೆ ನನ್ನ ಜೊತೆ ಮಾತನಾಡುವ ಅನೇಕರು ಈ ರೀತಿಯ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ ಅಥವಾ ನನ್ನ ಚರ್ಚೆಗಳು ಆ ಬಗೆಯಲ್ಲಿ ಸಾಗುತ್ತವೆ ಎಂಬುದು ಹೆಮ್ಮೆಯ ಸಂಗತಿ. ಸಾಹಿತ್ಯ, ಸಂಗೀತ ಮತ್ತು ಇತರ ಕಲೆಗಳು ಲೋಕದ ಜೊತೆಗಿನ ನಮ್ಮ ಅಭಿವ್ಯಕ್ತಿಯ ವಿಧಾನಗಳಾದರೆ, ಅಧ್ಯಾತ್ಮ ನಮ್ಮೊಳಗಿನ ಮೂಲಸ್ವರೂಪದೊಂದಿಗೆ ಒಂದೇ ಆಗುವ ಪ್ರಕ್ರಿಯೆ. ಅಧ್ಯಾತ್ಮ ಒಂದು ಸಿದ್ಧಿ. ವಿವಿಧ ಬಗೆಯ ವ್ಯಕ್ತಿಗಳೊಂದಿಗೆ ವರ್ತಿಸಿದ ಸಂದರ್ಭಗಳಿರಬಹುದು, ಸಂಗೀತ - ಸಾಹಿತ್ಯದ ನನ್ನ ಅಭಿವ್ಯಕ್ತಿಯೊಂದಿಗೆ ಹೆಸರು ಮಾಡುತ್ತಿದ್ದ ಆ ನನ್ನ ಬಾಲ್ಯ - ಹರೆಯದ ದಿನಗಳಿರಬಹುದು, ವಿಭಿನ್ನವಾಗಿ ಸಾಗಿತು. ನಮ್ಮ ಹೊರಗೆ ಅನುಭವಕ್ಕೆ ಬರುತ್ತಿರುವ ವಿಷಯ ನನ್ನ ಒಳಗಿನಿಂದಲೇ ಉತ್ಪ್ರೇಕ್ಷಿತವಾದ ವಿಷಯ ಎಂಬುದು ಜರುಗಿದ ಕೆಲವು ಘಟನೆಗಳಿಂದ ಅರಿವಾಯಿತು. ಹೀಗಾಗಿ ನನ್ನದೇನಿದ್ದರೂ ಜ್ಞಾನಾನುಭವವ