Posts

Showing posts from March, 2019

'ಟೆಲಿಪತಿ' ಪ್ರಯೋಗಗಳ ಸುತ್ತಮುತ್ತ

Image
ಸುಮಾರು ವರ್ಷಗಳ ಹಿಂದೊಮ್ಮೆ ದಿಢೀರಾಗಿ ನನ್ನ ಬಾಲ್ಯದ ಗುರುಗಳೂ, ಸ್ನೇಹಿತರೂ ಆದ ಶ್ರೀಯುತ ಶ್ರೀಪತಿ ಭಟ್ ಪದ್ಯಾಣ ಅವರು "Do you know telepathy?" ಎಂದು ಒಂದು ಮೊಬೈಲ್ ಮೆಸೇಜ್ ಕಳಿಸಿದ್ದರು. "Don't know" ಎಂದಷ್ಟೇ ಉತ್ತರಿಸಿದ್ದೆ. ಹಲವಾರು ವರ್ಷಗಳ ನಂತರ ಅಂತಹ ಅರೆವಿಜ್ಞಾನದ ವಿಷಯಗಳು ನನ್ನ ಪರಿಗಣನೆಗೆ ಬಂದಿದ್ದವು. ಅದು 2016ನೇ  ಇಸವಿ . ವಿಶೇಷಾಂಕವೊಂದರಲ್ಲಿ 'ಅತೀಂದ್ರಿಯ ಲೋಕದಲ್ಲಿ' ಎಂಬ ಲೇಖನವನ್ನು ಓದುತ್ತಿದ್ದಾಗ ಕುತೂಹಲ ಕೆರಳಿತು. ಆ ನಂತರ ಟೆಲಿಪತಿ ಎಂಬ ಈ mind to mind  communication  ಬಗ್ಗೆ ಕುತೂಹಲಿಯಾದೆ. ಟೆಲಿಪತಿ ಪ್ರಯೋಗಗಳನ್ನು ಮಾಡಲು ವಿಶೇಷ ಶಕ್ತಿ ಬೇಕಾಗುತ್ತದೆ. ಈ ದಿನಗಳಲ್ಲಿ ನಾವು ಪ್ರಾಪಂಚಿಕ ನೆಟ್‌ವರ್ಕ್‌ಗಳನ್ನು  ಹೆಚ್ಚಿಸಿಕೊಂ ಡಿದ್ದೇವೆ. ಆದರೆ ನಮ್ಮ "inner engineering" ಬಗ್ಗೆ ತಿಳಿದಿಲ್ಲ. ನಿಜವಾಗಿ ಪಿಂಡಾಂಡದಲ್ಲಿ ಬ್ರಹ್ಮಾಂಡ ಅಡಗಿದೆ ಎನ್ನುತ್ತಾರೆ ನೋಡಿ. ನಮ್ಮ ಒಳಗೇನೇ ಎಲ್ಲವೂ ಇದೆಯಂತೆ. ಟೆಲಿಪತಿಕ್ ವ್ಯಕ್ತಿಗಳಲ್ಲಿ ಎರಡು ಬಗೆ. ಕೆಲವರು ಸುಲಭವಾಗಿ ರಿಸೀವ್ ಮಾಡುತ್ತಾರೆ. ಇನ್ನು ಕೆಲವರು ಸುಲಭವಾಗಿ ಸಂದೇಶ ಕಳುಹಿಸುತ್ತಾರೆ. ಮನುಷ್ಯನೆಂದರೆ ಒಂದು ಜೀವರಾಸಾಯನಿಕ ವ್ಯವಸ್ಥೆ ಎಂದು ವೈದ್ಯ ವಿಜ್ಞಾನ ಹೇಳುತ್ತದೆ. ದೇಹದ ಒಳಗೆ ಸಂವೇದನೆಗಳನ್ನು ರವಾನಿಸಬಲ್ಲ ಇಂದ್ರಿಯಗಳೊಂದಿಗಿನ ಆಂತರಿಕ ನೆಟ್‌ವರ್ಕ್ ವ್ಯವಸ್ಥೆ ಇದೆ ತಾನೇ? ಅ

ತಾಲೂಕು ಚುಸಾಪ ಅಧ್ಯಕ್ಷರಾಗಲಿರುವ ವರ್ಮರು

Image
ನಮ್ಮ ಆಪ್ತರು ಯಾವ ಸಾಧನೆ ಮಾಡಿದರೂ ಅದು ನಮ್ಮದೇ ಸಾಧನೆ ಎಂಬಷ್ಟು ಸಂತೋಷವಾಗುತ್ತದೆ. ಏಕೆಂದರೆ ನಮ್ಮ ಮನಸ್ಸಿಗೆ ಬಾಹ್ಯದ ದೃಢೀಕರಣವೊಂದು ಏನೋ ಒಂದು ಮಹತ್ವ ನೀಡಿದಂತೆನಿಸುತ್ತದೆ. ಅಮೃತವಾಹಿನಿ ಮಾಡುತ್ತಿರುವ ಕೆಲಸಗಳಿಗೆ ಸಿಂಹದ ಬಲ ಸಿಕ್ಕಂತಾಗಿದೆ. ಈ ಹಿಂದೆ ನಾವು ನಿರೀಕ್ಷಿಸಿರುವಂತೆ ನಮ್ಮ ಸ್ನೇಹಿತರು ಸಂಕಲ್ಪದ ಪ್ರಕಾರ ಸಾಹಿತ್ಯಪರ ಚಟುವಟಿಕೆಗಳಲ್ಲಿ ಮುನ್ನಡೆಯುತ್ತಿರುವುದು ಸಂತಸಕರ ಎನ್ನಬೇಕು. ಈಗ ಕಾರಣ ಬೇರೇನಲ್ಲ. ಶ್ರೀಯುತ ರಾಜಾರಾಮ ವರ್ಮ ವಿಟ್ಲ ಅವರು ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂಬುದೇ ಸಂಚಲನ ಮೂಡಿಸುವ ವಿದ್ಯಮಾನವಾಗಿದೆ. ಶ್ರೀಯುತ ರಾಜಾರಾಮ ವರ್ಮ ಅವರು ಮುಖ್ಯವಾಗಿ ಕವಿ. ಸಂಘಟಕ. ನನ್ನ ಅತ್ಯಂತ ಹತ್ತಿರದ ಸ್ನೇಹಿತರು. ಆಡಳಿತಾತ್ಮಕವಾಗಿ ಮತ್ತು ಮಿಕ್ಕೆಲ್ಲಾ ರೀತಿನೀತಿಗಳಿಂದಲೂ ಅಪಾರ ಅನುಭವಿ ಮತ್ತು ಜ್ಞಾನವುಳ್ಳವರು. ವಿದ್ಯಾಸಂಸ್ಥೆಗಳಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿದವರು. ಹಾಗೆಂದು ಯಾವುದೇ ಆಗ್ರಹಗಳನ್ನು ಸಮಗ್ರವಾಗಿ ಪರಿಶೀಲಿಸಿಯೇ ಅವರು ನಿರ್ಣಯಗಳನ್ನು ಎತ್ತಿಕೊಳ್ಳುತ್ತಾರೆ. ಶ್ರೀಯುತ ರಾಜಾರಾಮ ವರ್ಮ ವಿಟ್ಲ ಅವರು ಉತ್ತಮ ಕವಿ. ಕಟ್ಟುನಿಟ್ಟಿನ ವ್ಯಕ್ತಿ. ಇವರ ನಿಲುವುಗಳೆಲ್ಲವೂ ಜೀವಪರ. ಸಮಾಜಶಾಸ್ತ್ರೀಯ ನೆಲೆಗಟ್ಟಿನಲ್ಲಿ ಯಾವುದನ್ನಾದರೂ ಇದಮಿತ್ಥಂ ಎಂಬಂತೆ ವಿಮರ್ಶೆ ಮಾಡಬಲ್ಲ ಪಾಂಡಿತ್ಯವಿದೆ. ಹೀಗಿದ್ದೂ ಮಾತುಗಳಲ್ಲಿ ತೀರ್ಮಾನಗಳನ್ನು ಕೊಡದೇ ಸ್

Opting happiness and positivity

Image
"Look at the bright side of your life and choose to be happy. Yes, it is a matter of choice. When negative thoughts enter your mind, just refuse to look at them, substitute them with happy thoughts" - when I was reading a web namely raiseyourmind.com I saw these words of the couch. It is a big question, sometimes. In front of me I find several choices. When I going to write or wanting to analyse, I have to follow a super condition. That is, in fact I have to choose the best out of best in it to get better. In things, in people, in subjects and objects. When life forms it is subjected to our thought itself. Because I found patterns in it. Thereby one rule I should follow when I wire inside the mind that considering actions and reactions should be related to positive things itself. Because I want to maximise the positive in my life. So I have to take the positive responsiveness of my mind to activate high with the surrounding positive subjects and experiences rather. It is a