Posts

Showing posts from November, 2020

ಶೋಧನೆ ಎಂದರೆ.....?!

Image
ಶೋಧನೆ ಎಂದರೆ ಹುಡುಕುವುದು. ಶೋಧನೆಯನ್ನು ನಾವು ಎರಡು ರೀತಿಯಲ್ಲಿ ಮಾಡಬಹುದು. ಒಂದು ಬಾಹ್ಯಜಗತ್ತಿನಲ್ಲಿ. ಮತ್ತೊಂದು ಆಂತರಿಕ ಜಗತ್ತಿನಲ್ಲಿ. ಎರಡೂ ಒಗ್ಗೂಡಿದಾಗ ಜ್ಞಾನವು ಹೊಳೆಯುತ್ತದೆ. ಜ್ಞಾನ ಸಾಧನೆಯಾಗುವುದು ಅಂತರಂಗದ ಶೋಧನೆಯಿಂದ. ಬಾಹ್ಯದಲ್ಲಿ ನಮ್ಮ ಇಂದ್ರಿಯಗಳು ಅನುಭವ ಪಡೆಯುತ್ತವೆ. ಅವಕ್ಕೆ ಜಗತ್ತಿನ ಪರಿಸರದಲ್ಲಿ ಬೋಧನೆ, ತರಬೇತಿ ಎಲ್ಲವೂ ಸಿಗುತ್ತಿರುತ್ತದೆ. ಅದರ ಇನ್ನೊಂದು ಮಗ್ಗುಲಲ್ಲಿ ಅಂದರೆ ಅಂತರಂಗದಲ್ಲಿ ಶೋಧನೆಯು ನಡೆಯುತ್ತದೆ. ಬಾಹ್ಯಕ್ಕೆ ತೆರೆದ ದೃಷ್ಟಿ ಮತ್ತು ಅಂತರಂಗಕ್ಕೆ ತೆರೆದ ದೃಷ್ಟಿ ಎರಡರ ಸಂಗಮದಿಂದ ಅಜ್ಞಾತವಾಗಿದ್ದ ಜ್ಞಾನವು ಜ್ಞಾತರೂಪಕ್ಕೆ ಬರುತ್ತದೆ. ನಮ್ಮ ಪೂರ್ವಜ್ಞಾನ ಹೊಸ ವಿಷಯಗಳನ್ನು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ನಮ್ಮ ದೇಹದ ಎಲ್ಲಾ ಅಂಗೋಪಾಂಗಗಳಿಗೂ, ಎಲ್ಲಾ ಜೀವಕಣಗಳಿಗೂ ಅನೂಹ್ಯ, ಅನಂತ, ಬೃಹತ್ ಬ್ರಹ್ಮಾಂಡಗಳ ಚೇತನದ ಚೈತನ್ಯವಿರುತ್ತದೆ ಹಾಗೂ ಅರ್ಥಪೂರ್ಣವಾದ ಸಿದ್ಧಿ, ವಿಶೇಷತರವಾದ ಸ್ಮೃತಿ ಇರುತ್ತದೆ. ಬೋಧನೆಯಿಂದ ಲಭಿಸುವುದು ತರಬೇತಿ. ಆದರೆ ನಾವು ಇಂದ್ರಿಯಗಳ ಮೂಲಕ ಪಡೆಯುವ ಪಾಠ ಏನನ್ನು ಹೇಳುತ್ತದೆ? ಕಣ್ಣಿನ ಆಕಾರವನ್ನೊಮ್ಮೆ ಗಮನಿಸಿ. ಬಹುಕೋನಗಳಲ್ಲಿ ಅದು ವ್ಯಾಪಕವಾದದ್ದನ್ನೆಲ್ಲ ನೋಡುತ್ತಿದೆ! ಎಷ್ಟು ಹೊರಗೆ ತೆರೆದಿದೆಯೋ ಅಷ್ಟೂ ಒಳಗೆ ಗ್ರಹಿಕೆಯಿದೆ. ಅಷ್ಟೊಂದು ತಂತುಗಳಿವೆ, ವ್ಯವಸ್ಥೆಯಿದೆ. ಎಲ್ಲ ಪಂಚೇಂದ್ರಿಯಗಳೂ ಹಾಗೆಯೇ. ಹೊರಪ್ರಪಂಚ ಅರ್ಥವಾಗುವುದು ಒಳಗೆ

ಬಯಕೆ

Image
ಮೂಡುತಿದೆ ಚುಕ್ಕಿ, ಹಾಡುತಿದೆ ಹಕ್ಕಿ; ಕಾಡುತಿದೆ ಬಯಕೆ, ಈಡೇರಲಿ ಹರಕೆ. ಪಂಚಮದ ಶ್ರುತಿಯಲ್ಲಿ ಮಿಡಿಯುತಿದೆ ಮನಸು; ಇಂಚರದ ಹಂಚಿಕೆಗೆ ಶುರುವಾಯ್ತು ಕನಸು. ಮಧುವನದ ಸೌಭಾಗ್ಯ ಮಲ್ಲಿಗೆಯ ತೋಟ; ಶ್ರೀಹರಿಯ ನಂದನದಿ ಶೃಂಗಾರದ ಆಟ! ಹೂವಿಗೂ, ಪಕಳೆಗೂ ದುಂಬಿಯ ಸ್ಪರ್ಶ; ಪ್ರಕೃತಿಗೂ, ಪರಿಸರಕೂ ತುಂಬಿದ ಹರ್ಷ. ಮೊದಲಿಲ್ಲ ಕಡೆಯಿಲ್ಲ ಸಾಗುತಿದೆ ಪಯಣ; ಸೋಜಿಗಕೂ, ಸೊಬಗಿಗೂ ತೆರೆದಿದೆ ಕರಣ. ✍️ ಶಿವಕುಮಾರ ಸಾಯ 'ಅಭಿಜಿತ್'

ಬೆಳಕಿನ ಸುಜ್ಞಾನ, ವಿಜ್ಞಾನ, ತತ್ತ್ವಜ್ಞಾನ....

Image
ಎಲ್ಲರಿಗೂ ನಮಸ್ಕಾರ.... ಸ್ನೇಹಿತರೇ, ಗುಣೀಭೂತ ಪ್ರಕೃತಿ ಈ ಅನಂತತೆಯೊಡನೆ ಬೃಹದೀಕರಣವಾಗದಿದ್ದರೆ ಜಗತ್ತು ಅದೆಷ್ಟು ಅಪೂರ್ಣವಾಗುತ್ತಿತ್ತು ಅಲ್ಲವಾ?! ಆದರೆ ಹಾಗಾಗಲು ಸಾಧ್ಯವೇ ಇಲ್ಲವಲ್ಲಾ! ಹೌದು. ಅಪರಿಪೂರ್ಣತೆಯಿಂದಲೇ ನಾವೆಲ್ಲರೂ ಪರಿಪೂರ್ಣರು. ಅದು ಈ ವಿಶ್ವದ ಚಮತ್ಕಾರೀ ಅಂಶ. ಈ ಅನಂತ ಬ್ರಹ್ಮವನ್ನು ಧ್ಯಾನಿಸಬಹುದಷ್ಟೇ. ಈ ದೀಪಾವಳಿಯಲ್ಲಿ ಬೆಳಕಿನ ಶಾಸ್ತ್ರದ(ಜ್ಯೋತಿಷ) ಒಳಹೊಕ್ಕು ಬರೆಯಬೇಕಾಗಿದೆ. ನೂರಾ ಎಂಟು ಕೋನಗಳಲ್ಲಿ ನಾವು ಯಾವುದೋ ಒಂದು ಮಾತ್ರ. ಹಾಗಿದ್ದೂ ನಮ್ಮೊಳಗೆ ಆ ನೂರಾ ಎಂಟು ಕೋನಗಳು ಮತ್ತೆ ಇವೆ. ಅವೆಲ್ಲದರೊಳಗೆ ಮತ್ತೆ ನೂರಾ ಎಂಟು ಗುಣ.. ಅವೆಲ್ಲದರೊಳಗೆ ಮತ್ತೆ ಅದೇ ನೂರಾ ಎಂಟು... ಹೀಗೆಯೇ ಅದು ಒಳಗೆ ಅನಂತ... ಹೊರಗೆ ಕೂಡ ನಮ್ಮಂತೆಯೇ ನೂರಾ ಎಂಟು ನಕ್ಷತ್ರಪಾದಗಳ ಗುಣ. ಅವುಗಳೊಳಗೆ ವರ್ತನೆ.. ಹಾಗೆಯೇ ಬೆಳೆದ ಈ ಸೌರವ್ಯೂಹ, ಅದರಾಚೆ ನೂರಾ ಎಂಟು ವಿಭಿನ್ನ ಸೌರವ್ಯೂಹಗಳು, ಅದರದ್ದೊಂದು ಪುಂಜ, ಅದರಾಚೆ ಅಂಥದ್ದೇ ನೂರಾ ಎಂಟು ಬೆಳಕಿನ ಪುಂಜ.. ಹೀಗೆಯೇ ಒಂದು ಕ್ರಮದಲ್ಲಿ ಈ ಅನಂತ ಬ್ರಹ್ಮಾಂಡದ ಅಸ್ತಿತ್ವ. ಇಲ್ಲಿ ನಾವು ಎಂಬುದೇ ನಾನು ಎಂಬುದಾಗಿ ತೋರ್ಪಡುವುದು. ದೈನಂದಿನ ಬದುಕಿನಲ್ಲಿ ನಮ್ಮ ಪ್ರೀತಿ, ಕೋಪ, ಪ್ರೇಮ, ಕ್ಷಮೆ, ಶಕ್ತಿ, ಮತ್ಸರ ಇಂತಹ ಎಲ್ಲಾ ಗುಣಗಳನ್ನು ವ್ಯಕ್ತಪಡಿಸುತ್ತಾ ಸಾಗುವ ನಾವು ಎಲ್ಲಾ ಗುಣಗಳ ಜೊತೆಗೂ ವಿಭಿನ್ನವಾಗಿ ವರ್ತಿಸುತ್ತಿರುತ್ತೇವೆ. ಅದು ಸಮಯ ಮತ್ತು ಸ್

ಅಂಟು - ನಂಟು

Image
ಪ್ರಾಚೀನ ಕಾಲದ ಜನರು ಮನೆಗಳನ್ನು ಕಟ್ಟಿದರು ಇಟ್ಟಿಗೆಗಳಿಂದ.... ಕಟ್ಟಿದ ಮೇಲೆ ಒಂದೊಂದು ಇಟ್ಟಿಗೆಯೂ ತಾನೇ ಮನೆಯಾಗಿದ್ದೇನೆಂದು ಬೀಗಿತು. ಇಟ್ಟಿಗೆಗಳು ಗರ್ವಪಟ್ಟದ್ದಕ್ಕೆ ದೊಡ್ಡ ಅವಾಂತರವಾಗಿ ಕಟ್ಟಡವೇ ಬಿರಿಯಿತು; ಮನೆಯೇ ಮುರಿಯಿತು. ಲೋಕಕ್ಕೆ ತಿಳಿಯಿತು -  ಪ್ರಾಚೀನ ಕಾಲದ ಜನರು ಮನೆಗಳನ್ನು ಕಟ್ಟಿದ್ದು ಇಟ್ಟಿಗೆಗಳಿಂದಲ್ಲ; ಅಂಟಿನಿಂದ! ಅಂಟು - ನಂಟು ಇಲ್ಲದೆ ಹೋದರೆ ಇಟ್ಟಿಗೆಯೂ ಇಲ್ಲ ಮನೆಯೂ ಇಲ್ಲ. ✍️ ಶಿವಕುಮಾರ ಸಾಯ 'ಅಭಿಜಿತ್'