Posts

Showing posts from October, 2018

ಹರುಷದಿ ಬಾಳೋಣ

Image
ಹರುಷದಿ ಬಾಳೋಣ/ ಜೀವನ ಆಗಲಿ ಸುಖಪಯಣ// ಸಾರ್ಥಕಗೊಳಿಸೋಣ/ ಬದುಕಲಿ ಸ್ಫೂರ್ತಿಯ ಹರಿಸೋಣ// ತೋರಣ ಕಟ್ಟೋಣ/ ಗೆಲುವಿನ ಕಾರಣ ತಿಳಿಸೋಣ// ಅರ್ತಿಯ ಹಂಚೋಣ/ ಛಲದಲಿ ಕೀರ್ತಿಯ ಮೆರೆಸೋಣ// ಬಾಲ್ಯದ ಆಟೋಟ/ ಗೆಳೆಯರ ಪ್ರೀತಿಯ ತುಂಟಾಟ// ಅಮ್ಮನ ಅಕ್ಕರೆಗೆ/ ಧನ್ಯತೆ ಗುರುಹಿರಿಯರ ಕೃಪೆಗೆ// ನೆನೆದರೆ ಅಭಿಮಾನ/ ಹರೆಯದಿ ಚಿಮ್ಮಿದ ವೀರತನ// ಸಂತಸ - ಸಲ್ಲಾಪ/ ಜೊತೆಯಲಿ ಹೊಮ್ಮಿದ ಆಲಾಪ// ಬಾಳಿನ ಬೆಳವಣಿಗೆ/ ತುಂಬಿದ ಸೌಖ್ಯದ ಮೆರವಣಿಗೆ// ಚಿತ್ರದ ಬರವಣಿಗೆ/ ಸ್ನೇಹದ ಸಖ್ಯದ ರಸಗಳಿಗೆ// ✍️ಶಿವಕುಮಾರ ಸಾಯ 'ಅಭಿಜಿತ್'

ಅಭಿಜಿತ್ ನಕ್ಷತ್ರ! ಬ್ಲಾಗಿಗೇಕೆ ಆ ಹೆಸರು?

Image
ನಮಸ್ಕಾರ. ಅನೇಕರು ನಾನು 'ಅಭಿಜಿತ್' ಎಂಬ ಹೆಸರನ್ನು ಬಳಸುತ್ತಿರುವುದರ ಬಗ್ಗೆ ಕೇಳಿದ್ದಾರೆ. ಇಲ್ಲಿ ನನ್ನ ಬ್ಲಾಗಿಗೆ ಕೂಡ ಅದೇ ಹೆಸರು ಕೊಟ್ಟಿರುವುದು ನೋಡಿ ಕೆಲವರಿಗೆ ಆಶ್ಚರ್ಯವಾಗಿರಬಹುದು. 'ಅಭಿಜಿತ್' ಎಂಬುದು ಮನೆಯಲ್ಲಿ ನನ್ನನ್ನು ಮುದ್ದಿನಿಂದ ಕರೆಯಲು ಇಟ್ಟಿದ್ದ ಹೆಸರಲ್ಲ. ಅವರು ಕರೆಯುವ ಹೆಸರು 'ಭವೇಶ' ಎಂದು. ಅಫಿಶಿಯಲ್ ಆಗಿ ಶಿವಕುಮಾರ್ ಎಂಬ ಹೆಸರು ಬಳಕೆಯಾಗುತ್ತದೆ. ಆದರೆ ಈ 'ಅಭಿಜಿತ್' ಎಂಬ ಹೆಸರನ್ನು ಖಾಸಾ ಎಂಬಂತೆ ಬಳಸುತ್ತಿರುವುದೇಕೆ ಎಂಬುದರ ಕಾರಣದ ಬಗ್ಗೆ ಇಲ್ಲಿ ಖಾಸಗಿಯಾಗಿ ಬರೆಯುತ್ತಿದ್ದೇನೆ. 2016ರ ಆರಂಭದ ವರೆಗೂ ಅಭಿಜಿತ್ ನಕ್ಷತ್ರ ಎಂಬ ಪದವೇ ನನ್ನ ಗಮನಕ್ಕೆ ಬಂದಿರಲಿಲ್ಲ. ಹುಟ್ಟಿದ ದಿನಾಂಕ 11 ನವೆಂಬರ್ 1983 ಅದು ಉತ್ತರಾಷಾಢ 4ನೇ ಪಾದ ಮಕರ ರಾಶಿ ಎಂದು ಬರೆಯಲಾಗಿತ್ತು. 2014ರ ವರ್ಷಾಂತ್ಯದಲ್ಲಿ ನಾನು ತುಂಬಾ ನಿಗೂಢವೆಂದೂ, ನನ್ನನ್ನು ನಾನು ತಿಳಿದುಕೊಂಡಿಲ್ಲವೆಂದೂ, ನನ್ನಲ್ಲಿ ಎರಡು ಹೆಸರಿನಂತೆ ಎರಡು ವ್ಯಕ್ತಿಗಳಿರುವರೆಂದೂ, ಇನ್ನೂ ಏನಕೇನ ಪ್ರಕಾರೇಣ ತಲೆ ಹಾಳು ಮಾಡಿ ಕುಗ್ಗಿಸಲೆತ್ನಿಸಿದ್ದ ಶೂನ್ಯಬುದ್ಧಿಯವರೊಬ್ಬರ ಸ್ವಾರ್ಥದ ನಡತೆ ನನ್ನನ್ನು ಒಮ್ಮೆ ಉತ್ತರವೇ ಇಲ್ಲದೆ ಓಡಿಹೋಗುವ ಪರಿಸ್ಥಿತಿಗೆ ತಂದಿತ್ತು. ಆದರೆ "I survived because the fire inside me burned brighter than the fire around me" ಎಂಬಂತೆ ಭುಗಿಲೇಳುವ ತನಕ ನಾನು ಏನ

ಸ್ನೇಹದ ಪ್ರಪತ್ರ

Image
ಸ್ನೇಹದ ಪ್ರಪತ್ರ ಸ್ನೇಹದ ಬೆಂಬಲಕ್ಕೆ ಸಾವಿರ ನಮನವಿದೆ; ಸಂತಸದ ಕಣ್ಣೀರಲ್ಲಿ ಹೃದಯದ ಪ್ರೇಮವಿದೆ. ಕಾಯುವವರಿವರು, ಕನಿಕರಿಸುವವರು, ಮೈದಡವಿ ಸವಿಯ ನೀಡುವವರು, ಜೀವಪರ ನಿಂತ ಸಂಕಲ್ಪ ಸಂಭೂತ ದೇವದೇವತೆಗಳು. ನಿಮ್ಮ ಕೈಗೆ ಕೈ ನೀಡಿ ಚಪ್ಪಾಳೆ ಹೊಡೆಯುತ್ತೇನೆ ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತೇನೆ ಅನುಭವ-ಅನಿಸಿಕೆ ಹೇಳಿಬಿಡುತ್ತೇನೆ ಪ್ರಾಮಾಣಿಕ ಪ್ರೀತಿ ಪರಿಶುದ್ಧತೆಯ ಪ್ರತೀಕವೆನ್ನುತ್ತಾ ನೀವುಗಳನ್ನು ಸೇವಿಸಿ ಉಸಿರಾಡುತ್ತೇನೆ. ನಿಜದ ಸ್ನೇಹಿತರೆ, ನಿಮ್ಮವರದೊಂದು ಪಟ್ಟಿ ಸಿದ್ಧಪಡಿಸಿ, ಆಗಾಗ ಬಿಡುಗಡೆಗೊಳಿಸಿ, ಸಂಭ್ರಮಿಸಿ, ಸಂಪೂರ್ಣ ಬೆಂಬಲಿಸಿ, ಹಂಬಲಿಸಿ ಕರೆಯುತ್ತೇನೆ. ಸ್ನೇಹವೆಂಬುದು ತಂಪು, ಸ್ನೇಹವೆಂಬುದು ಆತ್ಮೀಯ, ಸ್ನೇಹವೆಂಬುದು ಸ್ವಕೀಯ; ಈ ಜಗವನ್ನು ಸ್ನೇಹಕ್ಕೆ ಸಿದ್ಧಪಡಿಸಿ ನಿಮ್ಮನ್ನು ನಾನೇ ಆಯ್ದುಕೊಂಡಿದ್ದೇನೆ ಸ್ನೇಹಕ್ಕಾಗಿ, ಸಂತೋಷಕ್ಕಾಗಿ, ಸ್ನೇಹದ ರಾಜಗಿರಿಗಾಗಿ. ✍️ಶಿವಕುಮಾರ ಸಾಯ 'ಅಭಿಜಿತ್'