Posts

Showing posts from May, 2019

ವಿಮರ್ಶೆ 🖼️ ಕವಿ ವಿ. ನರಸಿಂಹ ವರ್ಮ ವಿರಚಿತ 'ಆಕಾಶದ ಚಿತ್ರಗಳು'

Image
ವಿಟ್ಲ ರಾಜ ಮನೆತನದ ಶ್ರೀಯುತ ವಿ. ನರಸಿಂಹ ವರ್ಮ ಅವರು ಕಳೆದ ಹಲವಾರು ವರ್ಷಗಳಿಂದ ಕನ್ನಡ ಕಾವ್ಯರಚನೆಯಲ್ಲಿ ಗಂಭೀರವಾಗಿ ತೊಡಗಿಕೊಂಡಿರುವ ಸ್ವಂತಿಕೆಯ ಛಾಪುಳ್ಳ ಕವಿ. 'ಆಕಾಶದ ಚಿತ್ರಗಳು' ಇದು ಸನ್ಮಾನ್ಯ ನರಸಿಂಹ ವರ್ಮರು ಹೊರತರುತ್ತಿರುವ ಚೊಚ್ಚಲ ಕೃತಿ. ವೃತ್ತಿಯಲ್ಲಿ ಉನ್ನತ ಕಾನೂನು ಅಧಿಕಾರಿಯಾಗಿದ್ದು, ಪ್ರವೃತ್ತಿಯಲ್ಲಿ ಅಪ್ಪಟ ಕವಿತ್ವವನ್ನು ಸಾರುತ್ತಿರುವ ಇವರ ಕಾರಯಿತ್ರೀ ಪ್ರತಿಭೆ ಮೆಚ್ಚುವಂಥದ್ದು. ಶ್ರೀಯುತ ನರಸಿಂಹ ವರ್ಮರು ಸತತ ಅಧ್ಯಯನಶೀಲರು. ನನ್ನ ತಿಳಿ ವಳಿಕೆಯಂತೆ ಇವರು ಯಾವುದೇ ಚೌಕಟ್ಟು ಮತ್ತು ಪಂಥಗಳಿಗೆ ಒಳಪಟ್ಟವರಲ್ಲ. ಇವರ ಕವಿತೆಗಳನ್ನು ಓದುತ್ತಿದ್ದಂತೆ ವಿಪುಲವಾದ ಜ್ಞಾನ ಮತ್ತು ಕಾವ್ಯದ ಕಲೆಗಾರಿಕೆ ಎರಡರ ಸಮ್ಮಿಶ್ರಣದಂತೆ ಕವಿತೆಗಳು ಭಾಸವಾಗುತ್ತವೆ. ಆದರೆ ಸ್ವತಂತ್ರವಾದ ಕವಿಯ ಮನೋಧರ್ಮವು ಪರಿಪಕ್ವವಾದ ಕವಿತೆಗಳನ್ನು ಹುಟ್ಟುಹಾಕುವ ಶ್ರೇಯಸ್ಸಿಗೆ ಪಾತ್ರವಾಗಿ ಧನ್ಯವಾಗಿದೆ. ಬದುಕಿನ ಗಹನತೆಯನ್ನು, ಸೂಕ್ಷ್ಮಗಳನ್ನು ಗಮನಿಸಿ ಇವರ ಕವಿತೆ ಅನನ್ಯವಾಗಿ ಹೊಮ್ಮಿದೆ. ಸಾಲುಗಳ ವೇಗ, ಓಘ ಮತ್ತು ಶಿಸ್ತನ್ನು ಹುಲುಸಾಗಿ ಬಳಸಿದ ಅನೇಕ ಕವಿತೆಗಳು ಅಲಂಕಾರಗಳ ಚಮತ್ಕಾರದಿಂದಲೂ ಕೂಡಿವೆ. 'ಆಕಾಶದ ಚಿತ್ರಗಳು' ಈ ಕೃತಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕವನಗಳಿವೆ. ಪ್ರತಿಯೊಂದು ಕವನವು ವಸ್ತು, ವಿಷಯ ಮತ್ತು ಪ್ರಸ್ತುತಿಯಲ್ಲಿ ವಿಭಿನ್ನವೂ ವಿಶಿಷ್ಟವೂ ಆಗಿರುವುದನ್ನು ಕಾಣುತ್ತೇವೆ. ಶ್ರೀಯುತರ ನೂರಾರ

ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಪದಗ್ರಹಣ: ವಿಟ್ಲದಲ್ಲೊಂದು ಸಭ್ಯ ಸಾಹಿತ್ಯ ಸಮ್ಮಿಲನ

Image
ಮೇ 5ರಂದು ವಿಟ್ಲ ವಿಠಲ ಪ್ರೌಢಶಾಲಾ ಸಭಾಂಗಣ ದಲ್ಲಿ ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಪದಗ್ರಹಣ ಕಾರ್ಯಕ್ರಮ ಮೌಲಿಕವಾ ಗಿ ನಡೆದಿದೆ. ಸನ್ಮಾನ್ಯ ಶ್ರೀಯುತ ರಾಜಾರಾಮ ವರ್ಮ ವಿಟ್ಲ ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ದಿನ ಪದಗ್ರಹಣದೊಂದಿಗೆ ಚುಟುಕು ಕವಿಗೋಷ್ಠಿಯೂ ಭರ್ಜರಿಯಾಗಿ ನೆರವೇರಿದೆ. ಸಮಾರಂಭವು ಜರಗುತ್ತಿದ್ದಂತೆ ಒಂದು ಬಗೆಯ ಕಾಳಜಿ ಮತ್ತು ಒತ್ತಾಸೆ ಅಲ್ಲಿ ಸೇರಿದ ಎಲ್ಲ ಸಂಘಟಕರ ಮುಖದಲ್ಲಿ ವ್ಯಕ್ತವಾಗುತ್ತಿತ್ತು. ನನ್ನನ್ನು ಕವಿಗೋಷ್ಠಿಯ ಅಧ್ಯಕ್ಷನನ್ನಾಗಿ ಕರೆಸಿದ ನೂತನ ಅಧ್ಯಕ್ಷರ ನಿರ್ಧಾರವನ್ನು ಗೌರವಿಸಿ, ಒಪ್ಪಿಕೊಂಡು ತೆರಳಿ ಒಂದು ಭಾಷಣ ಸಿದ್ಧಪಡಿಸಿ ಓದಿದಂತೆಯೂ ಆಯಿತು. ಆ ಕಾರ್ಯಕ್ರಮದಲ್ಲಿ ಸುಮಾರು ಹದಿನೇಳು ಮಂದಿ ಕವಿ-ಕವಯಿತ್ರಿಯರು ಚುಟುಕು ಮತ್ತು ಕವಿತೆಗಳನ್ನು ವಾಚಿಸಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿ ಕವಿಗಳಿಗೂ ಅವಕಾಶ ನೀಡಲಾಗಿದೆ. ಎಲೆ ಮರೆಯ ಹೂವಿನಂತಿದ್ದ ಅನೇಕ ಪ್ರತಿಭಾವಂತ ಕವಿಗಳನ್ನು ಮತ್ತೆ ವೇದಿಕೆಗೆ ಕರೆ ತರುವ ಪ್ರಾಮಾಣಿಕ ಪ್ರಯತ್ನವನ್ನು ವರ್ಮರು ಅಲ್ಲಿ ಮಾಡಿದ್ದಾರೆ. ಇದೆಲ್ಲವನ್ನೂ ಮನಸಾರೆ ಶ್ಲಾಘಿಸಲೇ ಬೇಕಾಗಿದೆ. ಗೋಷ್ಠಿಯಲ್ಲಿ ಪಾಲ್ಗೊಂಡ ಎಲ್ಲ ಕವಿಗಳ ಚುಟುಕು-ಕವಿತೆಗಳ ಬಗೆಗೂ ನಾನು ಟಿಪ್ಪಣಿ ಮಾಡಿಕೊಂಡಿದ್ದೆ. ಅಲ್ಲಿ ನೆರೆದ ನಮ್ಮ ಸಾಹಿತ್ಯ ಮಿತ್ರರು ಕಾರ್ಯಕ್ರಮದ ಬಗ್ಗೆ ಅಂತರಾಳದಿಂದ ಮೆಚ್ಚುಗೆ ಪ್ರಕಟಿಸಿರುವುದಕ್ಕೆ ನಾವೆಲ್ಲರೂ ಕೃತಜ್ಞರು. ಹೀಗೆ ಯಾವುದೇ ಅಬ್ಬರ