ವಿಕಸನ

ವಿಶ್ವ ವಿನೋದದ ಚಿಲುಮೆ
ಪ್ರಕೃತಿದೇವಿಯ ಹಿರಿಮೆ
ಮಾಯಾ ಮೋಹಕ ಯಾನ
ಬಾಳು ರಸಾಮೃತ ಗಾನ

ಸಾವಿರ ಸಾವಿರ ಕೋಟೆ ಕೊತ್ತಲ
ಬೆಟ್ಟ ಬಯಲು ಸಾಲು
ಜೀವಿ ವಿಕಾಸದ ಸೃಷ್ಟಿ ಪರಂಪರೆ
ಹುಟ್ಟು ಏಳುಬೀಳು

ದೇಶ ವೇಷ ಆಕಾಶ ಕೋಶ
ಬುದ್ಧಿ ಭಾವ ಬಲವು
ಸುಜ್ಞಾನದಿಂದ ವಿಜ್ಞಾನದಿಂದ
ವಿಸ್ತರಿಸುತಿರಲಿ ಅರಿವು

ತಂಗಾಳಿಯಂತೆ ತಿಲ್ಲಾನದಂತೆ
ಹೊಮ್ಮುತಿಹುದು ನಲಿವು
ಶಿವಕರುಣೆಯಿಂದ ಜಗ ತೋರುತಿಹುದು
ದಿನದಿನವು ಹೊಸತು ಚೆಲುವು

✍️ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ನಿಶ್ಶಬ್ದದ ಗರ್ಭ ಮತ್ತು ಸೃಜನಶೀಲತೆಯ ಉದಯ: ಒಂದು ದಾರ್ಶನಿಕ ನೋಟ