ದಿವ್ಯತೆ
ಗಾಳಿ ಬೀಸಿ, ಮಳೆಯಲ್ಲಿ ಮಿಂದು
ಪುಳಕ ಮೈದುಂಬಿದಾಗ
ನೆಲದಲ್ಲಿ ಫಲ ಬೆಳೆದ ಕಳೆ-
ಇಳೆಯ ಸೋಜಿಗ.
ಬಯಲು ವಿಶಾಲವಾಗಿ
ಇನ್ನೂ
ಅಗಾಧ;
ಆಕಾಶದಂತೆ ಭರವಸೆ.
ಹೆಜ್ಜೆ-ಹೆಜ್ಜೆಗೊಂದು ಸಪ್ಪಳ,
ಹೊಸ ಶಬ್ದ;
ಪವಿತ್ರ
ಮೆರವಣಿಗೆ.
ಹಣ್ಣು-ಹೂವುಗಳಲ್ಲಿ
ಅರಳಿದ ಕಣ್ಣು;
ಸೃಷ್ಟಿಯ ಸಡಗರಕ್ಕೆ
ದಿವ್ಯತೆಯ
ರಂಗು.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment