ದರ್ಶನ

ಎಚ್ಚೆತ್ತಾಗ
ಸುತ್ತಮುತ್ತ ಪವಾಡ;
ನಿರಂತರ ಕಾಳಜಿಯ
ಕಳಶವಿಟ್ಟರು
ಅಂತರಂಗದ
ದೇವ-ದೇವಿಯರು!

ಅಚ್ಚರಿ,
ಯಾರು ಪ್ರಜ್ಞೆ ತೋರಿದರು,
ಮುಕ್ತಿಯ ದೃಷ್ಟಿ
ದೊರಕಿಸಿದರು

ನೋಡು
ದೀಪೋತ್ಸವದ ಜ್ಯೋತಿ-
ಜಾಗೃತಿಯ ದರ್ಶನ;
ಸ್ವಾತಂತ್ರ್ಯ-ಸ್ವರ್ಗ,
ಹಾಡು
'ವಿ' ಎಂಬ ಉಪಸರ್ಗ!

ಫಲಿತ ವಿನ್ಯಾಸ
ಕೈಚಳಕ;
ಮೆರೆಸಿ, ಮೇಳೈಸಿ ಪುಳಕ
ಹೊಮ್ಮಿಸಿತು ಹೊಂಬೆಳಕ!!

✍️ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ನಿಶ್ಶಬ್ದದ ಗರ್ಭ ಮತ್ತು ಸೃಜನಶೀಲತೆಯ ಉದಯ: ಒಂದು ದಾರ್ಶನಿಕ ನೋಟ