ವರ್ಣನೆ

ಪದ ಬದಲಾದಾಗ
ಪದ್ಯ ಬದಲಾಗುವುದು;
ವರ್ಣ ಬದಲಾದಾಗ
ವರ್ಣನೆಯು ಬದಲಾಗುವುದು.

ಎಲ್ಲ ಬದಲಾಗುವುದು,
ಜಗವೆ ಪರಿವರ್ತಿಸುವುದು;
ಇಂದಿಗದು ಸರಳ ಎಂದಾಗ,
ರಾಗಕ್ಕೊಂದು ಕೊಳಲು,
ಪ್ರೀತಿಗೊಂದು ಭಾಷೆ ಇರುವಾಗ

ಸಮಯ ಬದಲಾದರೆ
ಸಂಯಮವು ಬದಲಾಗುವುದು,
ಆಯಾಮ ಬೇರಾಗುವುದು;
ಪಾತ್ರ ಬದಲಾದರೆ
ಸೂತ್ರ ಬದಲಾಗುವುದು.

ಆಸೆಗಳು ತವರೂರು;
ತತ್ತ್ವಕ್ಕೆ ಇಳಿದು,
ಮಹತ್ವ ತಿಳಿದು,
ಮುತ್ತುಗಳ ತೊಟ್ಟಾಗ
ಇಂದ್ರನೇ.

ಗುರಿ ಬದಲಾದರೆ
ಗಂಟೆ ಬದಲಾಗುವುದು;
ಅಣು ಬದಲಾದರೆ
ಗುಣ ಬದಲಾಗುವುದು;

ಅವರು ಭಾವನೆಗಳನ್ನು ಕೆಣಕಿದರು,
ಊಹನೆಗಳನ್ನಲ್ಲ!
ಆ ಭಾವನೆಗಳೇ ಬೇರೆ,
ಈ ನಿನ್ನ ಬಗೆಯೇ ಬೇರೆ!

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್