Posts

Showing posts from July, 2026

ಇಲ್ಲಿಂದ ಬದಲಾಗಲಿದೆ ಭವಿಷ್ಯ?!

ಪ್ರಿಯ ಓದುಗರೇ, 2024ನೇ ಇಸವಿಯ ಮಧ್ಯಭಾಗದಲ್ಲಿ ನಾನು ಅಪಘಾತದಿಂದ ಗಂಭೀರವಾಗಿ ಗಾಯಗೊಂಡದ್ದೂ, ವಿದೇಶಿ ಹೂಡಿಕೆದಾರರು ನಿವ್ವಳ ಮಾರಾಟಗಾರರಾಗಿ ತಿರುಗಿದ್ದು ಮತ್ತು ಮಾರುಕಟ್ಟೆ ಮೌಲ್ಯ ದುಬಾರಿಯಾಗಿದ್ದ ಕಾರಣ ಭಾರತೀಯ ಶೇರುಪೇಟೆ ಕುಸಿಯತೊಡಗಿದ್ದು - ಇವು ಕಾಕತಾಳೀಯವಾಗಿ ಒಂದೇ ಸಮಯದ ಆಸುಪಾಸಿನಲ್ಲಿ ನಡೆದ ಸಂಗತಿಗಳು. ಅಪಘಾತ ನಡೆದದ್ದು ಆಗಸ್ಟ್ 30ರಂದು. ಕೆಪಿ ನ್ಯೂ ಅಯನಾಂಶದಲ್ಲಿ ಅಂದು ನನ್ನ ವಿಂಶೋತ್ತರಿ ದಶಾ ಪ್ರಕಾರ ಗುರು ಮಹಾದೆಸೆಯಲ್ಲಿ ಬುಧ ಅಂತರ್ದಶಾದಲ್ಲಿ ಶುಕ್ರ ಪ್ರತ್ಯಂತರ ದೆಸೆಯಲ್ಲಿ ಗುರು ಸೂಕ್ಷ್ಮ ದೆಸೆಯಲ್ಲಿ ಮಂಗಳ ಗ್ರಹದ ಪ್ರಾಣ ದೆಸೆ ಇತ್ತು ಎಂದು ತಿಳಿದುಬರುತ್ತದೆ. ದುರ್ಘಟನೆ ನಡೆದ ಕಾರಣ ಶೇರುಪೇಟೆಯಲ್ಲಿ ನಾನೊಬ್ಬ ನುರಿತ ಅಭ್ಯಾಸಿಯಾಗಿದ್ದರೂ ಗಾಯಾಳುವಾಗಿದ್ದರಿಂದ ಏನೂ ಮಾಡಲಾಗದೇ ಹೋದ ದುಃಖದಾಯಕ ಸಮಯ ಅದು. ಆ ನಂತರ ಲಾಭವಿರಲಿ, ನಷ್ಟ ಬರಲಿ ನಾನೊಬ್ಬ ಮ್ಯೂಚುವಲ್ ಫಂಡ್‌ಗಳ ನಿವೇಶಕನಾಗಿ ಬದಲಾದೆ. ಆದರೆ ಆ ಪಶ್ಚಾತ್ 2024ರ ಸೆಪ್ಟೆಂಬರ್ ಅಕ್ಟೋಬರ್ ಸಮಯದಿಂದ ಕುಸಿತ ಕಾಣುತ್ತಿರುವ ನಮ್ಮ ಮಾರುಕಟ್ಟೆ ಇದುವರೆಗೂ ಅಂದರೆ ಜುಲೈ 10 2026ರ ತನಕವೂ ತನ್ನ ಮಟ್ಟದಿಂದ ಕೆಳಗೆಯೇ ಇರುವುದು ಕಂಡಿದೆ. ಹೂಡಿಕೆಗಳು ನಷ್ಟದಲ್ಲೇ ಉಳಿದದ್ಧರಿಂದ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಉದ್ಯೋಗಕ್ಕೆ ರಾಜೀನಾಮೆ ನೀಡುವ ಭಾವನಾತ್ಮಕ ನಿರ್ಧಾರವನ್ನು ನಾನು ಕೈಬಿಡುವಂತಾದದ್ಧು ದೈವಲೀಲೆ. ಆದರೆ ಯಾವ ದಶಾ ಅವಧಿಯೂ ಒಂದೇ ರೀತಿ ಯಾರ ಜೀವನದಲ್...