ಅಭಯ

ಅಲೆದಾಡದೆ, ಸುಳಿದಾಡದೆ
ಸ್ಥಿರವಾಯಿತು ಮನಸು
ದೇವ, ನಿನ್ನ ಧ್ಯಾನದಿಂದ
ನನಸಾಯಿತು ಕನಸು

ಸರಾಗವಾಗಿ ಹೊಳೆದು ಬಂದು
ಶಾಂತಿ ನೀಡಿದೆ
ಮೋಹ - ಮಂಜು ಮಾಯವಾಗಿ
ಭ್ರಾಂತಿಯಳಿದಿದೆ

ನಾಡ ಜನರ ಒಂದಾಗಿಸಿ
ಧರೆಯನುಳಿಸಿದೆ
ಮೋಡ ಹರಡಿ, ಮಳೆಯ ಸುರಿಸಿ
ಆದರಿಸಿದೆ

ಉಭಯ ನೀಗಿ, ಅಭಯ ತುಂಬಿ
ಮತಿಯ ತೋರಿದೆ
ದೈವದೊಲುಮೆ - ನಿಲುಮೆಯಿಂದ
ಹಿತವುಂಟಾಗಿದೆ

✍️ ಶಿವಕುಮಾರ ಸಾಯ

Comments

Popular posts from this blog

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ರಾಜ್ಯೋತ್ಸವ ಎಂಬ ಸಮಯ-ಸಂದರ್ಭ: ಒಂದು ಕುಶಲೋಪರಿ

🔺ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗಶಾಸ್ತ್ರದ ಜನಪ್ರಿಯತೆಯ ಬಗ್ಗೆ ಮಾತು🔻 ದಿನಾಂಕ 21.06.2019