ಅಭಯ

ಅಲೆದಾಡದೆ, ಸುಳಿದಾಡದೆ
ಸ್ಥಿರವಾಯಿತು ಮನಸು
ದೇವ, ನಿನ್ನ ಧ್ಯಾನದಿಂದ
ನನಸಾಯಿತು ಕನಸು

ಸರಾಗವಾಗಿ ಹೊಳೆದು ಬಂದು
ಶಾಂತಿ ನೀಡಿದೆ
ಮೋಹ - ಮಂಜು ಮಾಯವಾಗಿ
ಭ್ರಾಂತಿಯಳಿದಿದೆ

ನಾಡ ಜನರ ಒಂದಾಗಿಸಿ
ಧರೆಯನುಳಿಸಿದೆ
ಮೋಡ ಹರಡಿ, ಮಳೆಯ ಸುರಿಸಿ
ಆದರಿಸಿದೆ

ಉಭಯ ನೀಗಿ, ಅಭಯ ತುಂಬಿ
ಮತಿಯ ತೋರಿದೆ
ದೈವದೊಲುಮೆ - ನಿಲುಮೆಯಿಂದ
ಹಿತವುಂಟಾಗಿದೆ

✍️ ಶಿವಕುಮಾರ ಸಾಯ

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಖರತೆ: ಪರಾಶರ ಮತ್ತು ಕೆ.ಪಿ. ಪದ್ಧತಿಗಳ ಅಪೂರ್ವ ಸಮನ್ವಯ