ಅನುಭವ

ನಗುನಗುತ ಬದುಕಿ ಬಾಳು/ ಓ ಮನುಜ
ಹಸನಾಗಿ ಹರುಷ ತಾಳು//

ಗಾಢನಿದಿರೆಯ ಸೀಳಿ ಸೋಜಿಗವು ಸೆಳೆಯುತಿದೆ
ಮೂಢಮನ ಸುಮ್ಮನಾಗು/
ಖಾಲಿಹೃದಯವಿದಲ್ಲ; ವಾಲಗದ ಶಬ್ದವಿದೆ-
ಖಾಸಗಿಯ ಕನಸ ಕಾಣು/ ಹೊಳೆಹೊಳೆವ
ಖಾಸಗಿಯ ಕನಸ ಕಾಣು//

ಅನ್ಯವೆಂಬುದು ಇಲ್ಲ; ಧನ್ಯವಿರು ಜೀವಿತಕೆ
ಮಾನವನೆ ಮಾನ್ಯನಾಗು/
ನಂಬಿಕೆಯ ನೆಲೆಯಿರಲಿ, ನಲಿವು ಚಿರವಾಗಿರಲಿ
ಮನವೇ ವಿಶಾಲವಾಗು/ ಬೆಳೆಬೆಳೆದು
ಮನವೇ ವಿಶಾಲವಾಗು//

ಹಗಲು ಇದೆ, ರಾತ್ರಿ ಇದೆ; ಮುಗಿಲು-ಮಳೆ-ಋತುವು ಇದೆ
ಸೊಗಸಾಗಿ ಜಗವ ನೋಡು/
ಬೆಚ್ಚನೆಯ ಹಾರೈಕೆ, ಇಚ್ಛೆಗಳ ಪೂರೈಕೆ
ಅನುಭವಿಸಿ ಪಕ್ವವಾಗು/ ನಳನಳಿಸಿ
ಅನುಭವಿಸಿ ಪಕ್ವವಾಗು//

✍️ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ನಿಶ್ಶಬ್ದದ ಗರ್ಭ ಮತ್ತು ಸೃಜನಶೀಲತೆಯ ಉದಯ: ಒಂದು ದಾರ್ಶನಿಕ ನೋಟ