ನಿಲುವು

ಗೆಲುವು ನಿನ್ನದಾಗಲು
ಒಲವಿರಬೇಕು
ಬಲವಿರಬೇಕು
ಛಲವೂ ಇರಬೇಕು.

ನಿಯಮ, ನಿಷ್ಪತ್ತಿ ಬೇಕು
ಬದುಕಿ ಬಾಳಲು;
ಕಿವಿಮಾತು ಹೇಳಲು,
ಆಶಯವ ತಾಳಲು.

ವರ್ಣರಂಜಿತ
ಪಾತ್ರ - ಸೂತ್ರಗಳು,
ಬಗೆಬಗೆಯ ಕಲ್ಪನೆಗಳು,
ಹಲವು ಆಯಾಮಗಳು,
ಕೈಚಳಕ.

ಸಲಹುವ ಧರ್ಮ
ಸ್ವತಂತ್ರ;
ಕರ್ಮಭೂಮಿಯೇ
ಸ್ವರ್ಗ-
ದಯೆಯಿಲ್ಲದ
ಧರ್ಮವಿಲ್ಲ

ಈ ನಡುವೆ ನಿರಂತರ-
ಅತ್ತಲೂ ಗೆಲುವು
ಇತ್ತಲೂ ಗೆಲುವು
ಸುತ್ತಲೂ ಗೆಲುವು
ನೀ ಹೊತ್ತ ನಿಲುವು!

✍️ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ನಿಶ್ಶಬ್ದದ ಗರ್ಭ ಮತ್ತು ಸೃಜನಶೀಲತೆಯ ಉದಯ: ಒಂದು ದಾರ್ಶನಿಕ ನೋಟ