ಆಸ್ಟ್ರೋ ವಿಜ್ಞಾನಿ, ಸ್ನೇಹಿತ, ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್ ಅವರು ಫೇಸ್ಬುಕ್ನಲ್ಲಿ ಪರಿಚಯವಾಗಿದ್ದರು. ನನಗೆ ತಿಳಿದಂತೆ ಅವರು ಮುಂಬೈ, ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ. ಸುಮಾರು 40 ಮಂದಿಯ ತಂಡದೊಂದಿಗೆ ಕನ್ಸಲ್ಟೆಂಟ್ ಆಗಿ ಇವರು ಕಾರ್ಯ ನಿರ್ವಹಿಸುತ್ತಿರುವರು. ಪ್ರಾಯಶಃ ಜ್ಯೋತಿಷ್ಯದ ಗುಂಪಿನಲ್ಲಿ ಅವರಿಗೆ ನನ್ನ ಪರಿಚಯವಾಗಿದ್ದಿರಬಹುದು. ಅವರು ನನ್ನ ಅನೇಕ ಯೂಟ್ಯೂಬ್ ವಿಡಿಯೋಗಳನ್ನು ಮೆಚ್ಚಿಕೊಂಡು, ಅವುಗಳಲ್ಲಿ ಇರುವ ಅನ್ವೇಷಣೆಗಳನ್ನು ಅವರು ಅರ್ಥೈಸಿಕೊಂಡು ಅಭಿಪ್ರಾಯ ತಿಳಿಸಿದ್ದರು. ಅವರು ನನ್ನ ಆರೋಗ್ಯದ ಬಗ್ಗೆ ಅಕ್ಟೋಬರ್ 19ರಂದು ವಿಚಾರಿಸಿದಾಗ ಸುಧಾರಣೆಯಾಗುತ್ತಿರುವ ಬಗ್ಗೆ ಹೇಳಿದೆ. ನಿಧಾನವಾಗಿ ನಮ್ಮ ಮಾತುಕತೆ ಜ್ಯೋತಿಷ್ಯದತ್ತ ಸಾಗಿತು. ಸಿದ್ದೇಶ್ವರನ್ ಜ್ಯೋತಿಷ್ಯವನ್ನು ನನ್ನಂತೆ ವಿಶಿಷ್ಟ ರೀತಿಯಲ್ಲಿ ನೋಡುವ ಮನಸ್ಸುಳ್ಳವರು. ಆದ್ದರಿಂದ ಅವರ ಅಭಿಪ್ರಾಯಗಳು ನನಗೆ ಕುತೂಹಲಕಾರಿಯಾಗಿದ್ದವು. ಉದಾಹರಣೆಗೆ, ನಾನು ನನ್ನ ಜಾತಕವನ್ನೇ ಅವರ ಜೊತೆ ಸೇರಿ ವಿಶ್ಲೇಷಣೆ ಮಾಡತೊಡಗಿದೆ. ಅವರು ಕೆಲವು ವಿಚಾರಗಳನ್ನು ಲಗ್ನದಿಂದ ನೋಡಬೇಕು, ಕೆಲವು ವಿಚಾರಗಳನ್ನು ರಾಶಿಯಿಂದ ನೋಡಬೇಕು, ಇನ್ನು ಕೆಲವು ವಿಚಾರಗಳನ್ನು ರವಿಯ ಸ್ಥಾನದಿಂದ ನೋಡಬೇಕು ಎಂದು ಅಭಿಪ್ರಾಯಪಟ್ಟರು. ಸಾಂಪ್ರದಾಯಿಕ ಜ್ಯೋತಿಷ್ಯದಲ್ಲಿ ಹೇಳುವ ಉಚ್ಚ-ನೀಚ ಅಂಶವನ್ನು ಅವರು ಒಪ್ಪಲಿಲ್ಲ. ಆ ವಿಚಾರವು ಅಧಿಕೃತವಾಗಿ ಇಲ್ಲ ಎಂದರು. ಅಷ್ಟೇ ಅಲ್ಲದೆ,...
ಗಾಯಗೊಂಡ ಸಿಂಹವನ್ನು ಕೆಣಕುವುದು ಅತ್ಯಂತ ಅಪಾಯಕಾರಿ ಗಾಯ ಒಂದೇ ಆಗಲಿ ಹತ್ತೇ ಆಗಲಿ ಗುಣವಾಗಲು ಬೇಕಾದ ಸಮಯ ಒಂದೇ ಸ್ಟಾಕ್ ಮಾರ್ಕೆಟ್ನಲ್ಲಿ ಎಂಟು ನಿಮಿಷಕ್ಕೆ ಹನ್ನೆರಡು ಸಾವಿರವಾದ ಅನುಭವದ ಬಳಿಕ ಹಣ ಮಾಡುವುದು ದೊಡ್ಡ ಸಂಗತಿಯೇ ಅಲ್ಲ ಬದುಕಲ್ಲಿ ಆದರೂ ಟ್ರೇಡಿಂಗ್ ಮಾಡಬೇಡ ಮಗೂ ಹೂಡಿಕೆ ಮಾತ್ರ ಮಾಡು ಚಿನ್ನದ ಮೊಟ್ಟೆ ಇಡುತ್ತಿದ್ದ ಕೋಳಿ ಕತೆ ಎರಡು ಸಲ ಕೇಳಿ ಜ್ಞಾನೋದಯವಾದದ್ದು ಮರೆಯಬೇಡ ಐದು ಹದಿನೈದಕ್ಕೆ ಚಂದನದಲ್ಲಿ ಕೇಳಿದ್ದು ಏಂಜೆಲ್ನವನು ಏಳು ಹದಿನೈದಕ್ಕೆ ಹೇಳಿದ್ದು ಎರಡರಲ್ಲೂ ಕತೆ ಒಂದೇ ಉದಾಹರಣೆಗೆ ಬಂದದ್ದು ಗ್ರಹಗತಿ ಬದಲಾಗುವ ವರೆಗೆ ಕಾಯಬೇಕು ಸುಧಾರಣೆ ಆದೀತು ಮಂತ್ರವಾದ ಮೊನ್ನೆಯೇ ಮುಗಿಯಿತು ಗಾಯದಿಂದ ತಾಗಿದವರು ಸುಮ್ಮನೆ ತಾಡಿ ತಾಗಿಸಿಕೊಂಡವರು ಕ್ಷಮಿಸಬೇಕು ಆಗುವುದೆಲ್ಲ ಒಳ್ಳೆಯದಕ್ಕೇ ಆದರೂ ಪ್ರತಿಯೊಂದಕ್ಕೂ ಕಾಲ ಕೂಡಿ ಬರಬೇಕು ಇದೊಂದು ಪ್ರಕಟಣೆ: ಯಾವಾಗ ಯಾವ ಆಟ ಆಡಬೇಕು ಎಲ್ಲವನ್ನೂ ಆಡಲಾಗುತ್ತದೆ ಅಂಗಳದಲ್ಲಿ ಊಹೆಗೆ ನಿಲುಕದಂತೆ ಬೇನಾಮಿ ವ್ಯಕ್ತಿಗಳು ದಿನ ಬೆಳಗಾಗುವುದರೊಳಗೆ ಮೈಲ್ ಮಾಡುತ್ತಾರೆ ಕೇಂದ್ರಕ್ಕೆ ಅವಕಾಶ ಕೊಡುವುದಕ್ಕೆ 'ಅವಕಾಶ ಯಾರೊಬ್ಬರ ಪಿತ್ರಾರ್ಜಿತ ಸೊತ್ತಲ್ಲ' ಎಂದು ಆದೇಶ ಬಂದೀತು ಕೋರ್ಟಿನಿಂದ ಚುಚ್ಚಿ ಮಾತಾಡುವವರು ಬೆಣ್ಣೆ ತೋರಿಸಿ ಬಾಯಿ ಮುಚ್ಚಿಸಿ ಬೇಳೆ ಬೇಯಿಸಿಕೊಂಡವರ ಬಂಡವಾಳ ಹೊರಬಿತ್ತು ಸಕಲ ಮಹಾಜನಕ್ಕೂ ಅದು ಅರ್ಥವಾಯ್ತು. ✍️ ಶಿವಕುಮಾರ್ ಸಾಯ 'ಅಭಿಜಿತ್...
"ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿ/ಯುಗ ವಿಪರೀತನ್ ಮಾಧವನೀತನ್ ಪೆರನಲ್ಲ" ಈ ನವೆಂಬರ್ ತಿಂಗಳಲ್ಲಿ ಎಲ್ಲರೂ ಮೈಕೊಡವಿ ಒಮ್ಮೆ ಕನ್ನಡ ಮಾತಾಡತೊಡಗುತ್ತಾರೆ. ಸಮ್ಮೇಳನಗಳು ಆರಂಭವಾಗುತ್ತವೆ. ಪ್ರಚಾರದ ಭರಾಟೆ ಜೋರಾಗುತ್ತದೆ. ನಿನ್ನೆಯ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ನನ್ನ ಕನ್ನಡ ಗುರುಗಳಲ್ಲೊಬ್ಬರಾದ ಡಾ. ಎಚ್. ಜಿ. ಶ್ರೀಧರ ಅವರನ್ನು ಕಾರ್ಯಕ್ಷೇತ್ರ ಅಡ್ಯನಡ್ಕಕ್ಕೆ ಕರೆದಿದ್ದೆ. ಅವರು ನನಗೆ ಪದವಿ ಐಚ್ಛಿಕದಲ್ಲಷ್ಟೇ ಅಲ್ಲದೆ ನಾನು ಪದವಿಪೂರ್ವ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದಾಗಲೂ ಕನ್ನಡ ಪಾಠ ಹೇಳುತ್ತಿದ್ದವರು. ಅಷ್ಟೇ ಅಲ್ಲದೆ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ನನ್ನ ಸಾಹಿತ್ಯ ಮನಸ್ಸನ್ನು ಸಲಹುವ ಕೆಲಸ ಮಾಡಿದ ಒಬ್ಬ ಸಾಚಾ ಮನುಷ್ಯ. ಅನೇಕ ಕಾರ್ಯಕ್ರಮಗಳಲ್ಲಿ ವೇದಿಕೆ ಕೂಡ ಕೊಡಿಸಿದವರು. ಮಾನ್ಯ ಶ್ರೀಧರ್ ಸರ್ ಅವರ ಬಗ್ಗೆ ಅಭಿಮಾನವಿರುವುದಕ್ಕೆ ಹಲವಾರು ಕಾರಣಗಳಿರಬಹುದು. ಪದವಿಯಲ್ಲಿ ಕನ್ನಡ ಐಚ್ಛಿಕಕ್ಕೆ ನಾನು ಸೀಟು ಬಯಸಿದ್ದ ಸಂದರ್ಭ. ಆ ದಿನ ನಾನು 'ವಿಜ್ಞಾನ ವಿದ್ಯಾರ್ಥಿ' ಎಂಬ ಕಾರಣಕ್ಕೆ ಸೀಟು ನಿರಾಕರಿಸಲ್ಪಟ್ಟಿತ್ತು. ಇಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಪೀಟರ್ ವಿಲ್ಸನ್ ಅವರಂತೂ ಕಿರಿಕಿರಿಯೆನಿಸಿ "ಸೀಟು ಕೊಡಲು ಸಾಧ್ಯವೇ ಇಲ್ಲ. ಏನು ಇನ್ಫ್ಲುಯೆನ್ಸ್ ಮಾಡುತ್ತೀಯ ನೀನು"ಎಂದು ಹೇಳಿ ವಾಪಸ್ ಕಳಿಸಿದ್ದರು. ಶ್ರೀ...
ಮಧುರ ಕ್ಷಣಗಳು
ReplyDelete