ಕರ್ನಾಟಕದ ಎಸ್ಎಸ್ಎಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಆಂತರಿಕ ಅಂಕಗಳನ್ನು ಉತ್ತೀರ್ಣತೆಗೆ ಪರಿಗಣಿಸುವ ಮತ್ತು ಮೌಲ್ಯಮಾಪನವನ್ನು ಸುಲಭಗೊಳಿಸುವ ನಿರ್ಧಾರವು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿ ಪರೀಕ್ಷಾ ನಿಯಮದಲ್ಲಿ ಬದಲಾವಣೆ ತಂದ ಬಳಿಕ ಇದೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುತ್ತಿದೆ. ಈ ಬದಲಾವಣೆಯು ಕೇವಲ ಫಲಿತಾಂಶದ ಹೆಚ್ಚಳಕ್ಕಾಗಿ ಮಾತ್ರವಲ್ಲ, ನಮ್ಮ ರಾಜ್ಯದ ಶೈಕ್ಷಣಿಕ ಗುಣಮಟ್ಟವನ್ನು ರಾಷ್ಟ್ರೀಯ ಸರಾಸರಿಯ ಮಟ್ಟಕ್ಕೆ ಏರಿಸಲು ಮತ್ತು ನಮ್ಮ ಶಾಲಾ ವ್ಯವಸ್ಥೆಯನ್ನು ಆರ್ಥಿಕವಾಗಿ ಹಾಗೂ ಆಡಳಿತಾತ್ಮಕವಾಗಿ ರಕ್ಷಿಸಲು ಅತ್ಯಗತ್ಯವಾಗಿತ್ತು. 1. ರಾಷ್ಟ್ರಮಟ್ಟದ ಫಲಿತಾಂಶಗಳ ಅಸಮಾನತೆ (2025ರ ಅಂಕಿ-ಅಂಶಗಳು) ನಮ್ಮ ರಾಜ್ಯದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರೂ, ಮೌಲ್ಯಮಾಪನದ ಅಸಮಾನತೆಯಿಂದಾಗಿ ಇತರ ಶಿಕ್ಷಣ ಮಂಡಳಿಗಳ ವಿದ್ಯಾರ್ಥಿಗಳಿಗಿಂತ ಹಿಂದುಳಿಯುತ್ತಿದ್ದರು. 2025ರ ವಿವಿಧ ಮಂಡಳಿಗಳ ಮೊದಲ ಹಂತದ 10ನೇ ತರಗತಿ ಪರೀಕ್ಷಾ ಫಲಿತಾಂಶದ ತುಲನೆ ಇಲ್ಲಿದೆ: 1 ಕೇರಳ 99.50% 2 ಐಸಿಎಸ್ಇ (ICSE) 99.09% 3 ಗೋವಾ 95.35% 4 ಮಹಾರಾಷ್ಟ್ರ 94.10% 5 ತಮಿಳುನಾಡು 93.80% 6 ಸಿಬಿಎಸ್ಇ (CBSE) 93.66% 7 ತೆಲಂಗಾಣ 92.78% 8 ಕರ್ನಾಟಕ (SSLC) 62.34% ಕೇವಲ 62.34% ಫಲಿತಾಂಶ ದಾಖಲಾಗಲು ನಮ್ಮ ಮಕ್ಕಳ ಅಸಾಮರ್ಥ್ಯ ಕಾರಣವಲ್ಲ, ಶಿಕ್ಷಕರೂ ಕಾರಣರಲ್ಲ. ಬದಲಿಗೆ ಆಂತರಿಕ ಅಂಕಗಳನ್ನು ಪರಿಗಣಿಸದ ಕಠಿಣ ಮೌಲ್ಯಮಾಪನ ಪದ್ಧ...
ಹಿರಿಯ ಕವಿ, ವಿದ್ವಾಂಸ ಡಾ. ವಸಂತಕುಮಾರ ಪೆರ್ಲ ಅವರು ಬರೆದಿರುವ 'ಅಮೃತ ಹಂಚುವ ಕೆಲಸ' ಪುಸ್ತಕವನ್ನು ಪರಿಚಯಿಸಲು ಸಂತೋಷಪಡುತ್ತೇನೆ. ಆಕಾಶವಾಣಿಯಲ್ಲಿ ಕೇಂದ್ರ ನಿರ್ದೇಶಕರಾಗಿದ್ದು ನಿವೃತ್ತರಾಗಿರುವ ಮಾಧ್ಯಮ ತಜ್ಞ, ಕವಿ - ಲೇಖಕ, ಅಂಕಣಕಾರ ಡಾ. ವಸಂತಕುಮಾರ ಪೆರ್ಲ ಅವರು ಸಮೃದ್ಧವಾದ ಭಾಷಾಜ್ಞಾನ, ಪಾಂಡಿತ್ಯವುಳ್ಳವರು. ಇದುವರೆಗೆ 45ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಅವರು ಅಪ್ಪಟ ಹವ್ಯಕ ಭಾಷೆಯಲ್ಲಿ ಬರೆದ ಚಿಂತನಗಳ ಸಂಕಲನವೇ 'ಅಮೃತ ಹಂಚುವ ಕೆಲಸ'. ಹವ್ಯಕ ಸಮಾಜದ ಮನೆಗಳಲ್ಲಿರುವ ವಿಚಾರ ಸಂಪದವನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರಸ್ತುತೀಕರಿಸಿರುವ ಪೆರ್ಲರ ಈ ಕೃತಿಯಲ್ಲಿ ಹವ್ಯಕ ಬ್ರಾಹ್ಮಣರ ಸಾಮಾಜಿಕ ಇತಿಹಾಸವನ್ನೇ ಕಾಣಬಹುದು. ಹವ್ಯಕ ಬ್ರಾಹ್ಮಣರ ಕೃಷಿ, ಆಚಾರ ವಿಚಾರ, ಆಲೋಚನೆಗಳು, ಭಜನೆ - ಆರಾಧನಾ ಪದ್ಧತಿ, ಸಂಸ್ಕಾರ, ಸಂಬಂಧಗಳು, ಮಾತುಕತೆ ಮುಂತಾದ ವಿವಿಧ ಮಗ್ಗುಲುಗಳಲ್ಲಿ ಹಾಸುಹೊಕ್ಕಾಗಿರುವ ಎಲ್ಲ ವಿಚಾರಗಳ ಮಂಥನ ಪ್ರಸ್ತುತ ಕೃತಿಯಲ್ಲಿ ವ್ಯಕ್ತವಾಗಿದೆ. ವಿವಿಧೆಡೆಗಳಲ್ಲಿ ಪ್ರತಿನಿತ್ಯ ಲೇಖಕರು ಬರೆದು ಪ್ರಕಟಿಸುವ ಈ ಲೇಖನಗಳು ಗ್ರಂಥವಾಗಿ ಹೊರಹೊಮ್ಮಿದ್ದು, ಹವ್ಯಕರ ಇತಿಹಾಸವನ್ನು ಬಿಂಬಿಸುವ ಒಂದು ದಾಖಲೀಕರಣ ಇದಾಗಿದೆ. ಹವ್ಯಕ ಭಾಷೆಯಲ್ಲಿ ಚಿಂತನೆಗಳ ಹೊತ್ತಗೆ ಪ್ರಕಟವಾಗಿರುವುದು ವಿರಳ. ಇಂದಿನ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಶೋಧಗಳು, ಒಳನೋಟಗಳು ಅವಶ್ಯ....
ನಾವು ಜೀವಿಸುತ್ತಿರುವ ಈ ಇಪ್ಪತ್ತೊಂದನೇ ಶತಮಾನದ ಪ್ರಪಂಚವು ಅತ್ಯಂತ ಜಟಿಲವಾದುದು. ಇಲ್ಲಿ ಉದಯದಿಂದ ಅಸ್ತಮಾನದವರೆಗೆ ಕಣ್ಣಿಗೆ ಬೀಳುವುದು ಮಾನವನ ಧಾವಂತ, ತಲ್ಲಣ ಹಾಗೂ ಲೌಕಿಕ ಹಂಬಲಗಳು ಮಾತ್ರ. ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ವೈಯಕ್ತಿಕ ಬೇಡಿಕೆಗಳ ದೀರ್ಘ ಸರಮಾಲೆಯನ್ನು ಹಿಡಿದು ನಮ್ಮೆದುರು ನಿಲ್ಲುತ್ತಾನೆ; ತಂತಮ್ಮ ನೋವುಗಳು, ಕೊರತೆಗಳು ಮತ್ತು ಆಸೆ-ಆಕಾಂಕ್ಷೆಗಳ ಕುರಿತಾಗಿಯೇ ಗಂಟೆಗಟ್ಟಲೆ ಸಂಭಾಷಿಸುತ್ತಾನೆ. ಆದರೆ, "ನಿನ್ನ ಮನದಾಳದ ಸ್ಥಿತಿಯೇನು? ನಿನ್ನ ಅಂತರಂಗವು ಸುಖವಾಗಿದೆಯೇ?" ಎಂದು ನಮ್ಮ ಒಳಬದುಕನ್ನು ಸ್ಪರ್ಶಿಸಿ, ಒಂದಿನಿತು ನಿಷ್ಕಲ್ಮಷ ಪ್ರೀತಿಯನ್ನು ಧಾರೆ ಎರೆಯುವ ಉದಾತ್ತ ಹೃದಯಗಳು ಇಂದು ತೀರಾ ವಿರಳ. ಸಮಕಾಲೀನ ಜಗತ್ತು ಇಂದು ಕೇವಲ ಲಾಭ-ನಷ್ಟಗಳ ತಳಹದಿಯ ಮೇಲೆ ನಡೆಯುವ ಕೃತಕ ವ್ಯವಹಾರವಾಗಿಬಿಟ್ಟಿದೆ. ಸ್ನೇಹ, ವಾತ್ಸಲ್ಯ ಮತ್ತು ಸಂಬಂಧಗಳೂ ಸಹ ಕೇವಲ ಉಪಯುಕ್ತತೆಯ ತಕ್ಕಡಿಯ ಮೇಲೆ ತೂಗಲ್ಪಡುತ್ತಿವೆ. ಒಣಗಿಹೋಗುತ್ತಿರುವ ಈ ಮರುಭೂಮಿಯಂತಹ ಬದುಕಿನ ನಡುವೆಯೂ, ಯಾರೋ ಕೆಲವು ಅಪರೂಪದ ಸಜ್ಜನರು ನಮ್ಮನ್ನು ಆಳವಾಗಿ ಅರಿತುಕೊಳ್ಳುತ್ತಾರೆ. ನಮ್ಮ ಮೌನಕ್ಕೆ ಧ್ವನಿಯಾಗುತ್ತಾರೆ; ನಮಗೆ ತಿಳಿಯದಂತೆ ನಮ್ಮ ಅಭ್ಯುದಯಕ್ಕಾಗಿ ಅಹರ್ನಿಶಿ ಪ್ರಾರ್ಥಿಸುತ್ತಾರೆ. ಜನ್ಮದಾತರಿಂದ ತೊಡಗಿ, ವಾತ್ಸಲ್ಯಮಯ ಬಂಧು-ಬಳಗದವರು, ನೂರಾರು ಬಾಲ್ಯದ ಸಖ-ಸಖಿಯರು ಮತ್ತು ನಮ್ಮ ಜೀವಯಾತ್ರೆಯ ಕವಲುಹಾದಿಗಳಲ್ಲಿ ಒದಗಿಬಂದ ...
ಮಧುರ ಕ್ಷಣಗಳು
ReplyDelete