ಆಸ್ಟ್ರೋ ವಿಜ್ಞಾನಿ, ಸ್ನೇಹಿತ, ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್ ಅವರು ಫೇಸ್ಬುಕ್ನಲ್ಲಿ ಪರಿಚಯವಾಗಿದ್ದರು. ನನಗೆ ತಿಳಿದಂತೆ ಅವರು ಮುಂಬೈ, ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ. ಸುಮಾರು 40 ಮಂದಿಯ ತಂಡದೊಂದಿಗೆ ಕನ್ಸಲ್ಟೆಂಟ್ ಆಗಿ ಇವರು ಕಾರ್ಯ ನಿರ್ವಹಿಸುತ್ತಿರುವರು. ಪ್ರಾಯಶಃ ಜ್ಯೋತಿಷ್ಯದ ಗುಂಪಿನಲ್ಲಿ ಅವರಿಗೆ ನನ್ನ ಪರಿಚಯವಾಗಿದ್ದಿರಬಹುದು. ಅವರು ನನ್ನ ಅನೇಕ ಯೂಟ್ಯೂಬ್ ವಿಡಿಯೋಗಳನ್ನು ಮೆಚ್ಚಿಕೊಂಡು, ಅವುಗಳಲ್ಲಿ ಇರುವ ಅನ್ವೇಷಣೆಗಳನ್ನು ಅವರು ಅರ್ಥೈಸಿಕೊಂಡು ಅಭಿಪ್ರಾಯ ತಿಳಿಸಿದ್ದರು. ಅವರು ನನ್ನ ಆರೋಗ್ಯದ ಬಗ್ಗೆ ಅಕ್ಟೋಬರ್ 19ರಂದು ವಿಚಾರಿಸಿದಾಗ ಸುಧಾರಣೆಯಾಗುತ್ತಿರುವ ಬಗ್ಗೆ ಹೇಳಿದೆ. ನಿಧಾನವಾಗಿ ನಮ್ಮ ಮಾತುಕತೆ ಜ್ಯೋತಿಷ್ಯದತ್ತ ಸಾಗಿತು. ಸಿದ್ದೇಶ್ವರನ್ ಜ್ಯೋತಿಷ್ಯವನ್ನು ನನ್ನಂತೆ ವಿಶಿಷ್ಟ ರೀತಿಯಲ್ಲಿ ನೋಡುವ ಮನಸ್ಸುಳ್ಳವರು. ಆದ್ದರಿಂದ ಅವರ ಅಭಿಪ್ರಾಯಗಳು ನನಗೆ ಕುತೂಹಲಕಾರಿಯಾಗಿದ್ದವು. ಉದಾಹರಣೆಗೆ, ನಾನು ನನ್ನ ಜಾತಕವನ್ನೇ ಅವರ ಜೊತೆ ಸೇರಿ ವಿಶ್ಲೇಷಣೆ ಮಾಡತೊಡಗಿದೆ. ಅವರು ಕೆಲವು ವಿಚಾರಗಳನ್ನು ಲಗ್ನದಿಂದ ನೋಡಬೇಕು, ಕೆಲವು ವಿಚಾರಗಳನ್ನು ರಾಶಿಯಿಂದ ನೋಡಬೇಕು, ಇನ್ನು ಕೆಲವು ವಿಚಾರಗಳನ್ನು ರವಿಯ ಸ್ಥಾನದಿಂದ ನೋಡಬೇಕು ಎಂದು ಅಭಿಪ್ರಾಯಪಟ್ಟರು. ಸಾಂಪ್ರದಾಯಿಕ ಜ್ಯೋತಿಷ್ಯದಲ್ಲಿ ಹೇಳುವ ಉಚ್ಚ-ನೀಚ ಅಂಶವನ್ನು ಅವರು ಒಪ್ಪಲಿಲ್ಲ. ಆ ವಿಚಾರವು ಅಧಿಕೃತವಾಗಿ ಇಲ್ಲ ಎಂದರು. ಅಷ್ಟೇ ಅಲ್ಲದೆ,...
ಹಿರಿಯ ಕವಿ, ವಿದ್ವಾಂಸ ಡಾ. ವಸಂತಕುಮಾರ ಪೆರ್ಲ ಅವರು ಬರೆದಿರುವ 'ಅಮೃತ ಹಂಚುವ ಕೆಲಸ' ಪುಸ್ತಕವನ್ನು ಪರಿಚಯಿಸಲು ಸಂತೋಷಪಡುತ್ತೇನೆ. ಆಕಾಶವಾಣಿಯಲ್ಲಿ ಕೇಂದ್ರ ನಿರ್ದೇಶಕರಾಗಿದ್ದು ನಿವೃತ್ತರಾಗಿರುವ ಮಾಧ್ಯಮ ತಜ್ಞ, ಕವಿ - ಲೇಖಕ, ಅಂಕಣಕಾರ ಡಾ. ವಸಂತಕುಮಾರ ಪೆರ್ಲ ಅವರು ಸಮೃದ್ಧವಾದ ಭಾಷಾಜ್ಞಾನ, ಪಾಂಡಿತ್ಯವುಳ್ಳವರು. ಇದುವರೆಗೆ 45ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಅವರು ಅಪ್ಪಟ ಹವ್ಯಕ ಭಾಷೆಯಲ್ಲಿ ಬರೆದ ಚಿಂತನಗಳ ಸಂಕಲನವೇ 'ಅಮೃತ ಹಂಚುವ ಕೆಲಸ'. ಹವ್ಯಕ ಸಮಾಜದ ಮನೆಗಳಲ್ಲಿರುವ ವಿಚಾರ ಸಂಪದವನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರಸ್ತುತೀಕರಿಸಿರುವ ಪೆರ್ಲರ ಈ ಕೃತಿಯಲ್ಲಿ ಹವ್ಯಕ ಬ್ರಾಹ್ಮಣರ ಸಾಮಾಜಿಕ ಇತಿಹಾಸವನ್ನೇ ಕಾಣಬಹುದು. ಹವ್ಯಕ ಬ್ರಾಹ್ಮಣರ ಕೃಷಿ, ಆಚಾರ ವಿಚಾರ, ಆಲೋಚನೆಗಳು, ಭಜನೆ - ಆರಾಧನಾ ಪದ್ಧತಿ, ಸಂಸ್ಕಾರ, ಸಂಬಂಧಗಳು, ಮಾತುಕತೆ ಮುಂತಾದ ವಿವಿಧ ಮಗ್ಗುಲುಗಳಲ್ಲಿ ಹಾಸುಹೊಕ್ಕಾಗಿರುವ ಎಲ್ಲ ವಿಚಾರಗಳ ಮಂಥನ ಪ್ರಸ್ತುತ ಕೃತಿಯಲ್ಲಿ ವ್ಯಕ್ತವಾಗಿದೆ. ವಿವಿಧೆಡೆಗಳಲ್ಲಿ ಪ್ರತಿನಿತ್ಯ ಲೇಖಕರು ಬರೆದು ಪ್ರಕಟಿಸುವ ಈ ಲೇಖನಗಳು ಗ್ರಂಥವಾಗಿ ಹೊರಹೊಮ್ಮಿದ್ದು, ಹವ್ಯಕರ ಇತಿಹಾಸವನ್ನು ಬಿಂಬಿಸುವ ಒಂದು ದಾಖಲೀಕರಣ ಇದಾಗಿದೆ. ಹವ್ಯಕ ಭಾಷೆಯಲ್ಲಿ ಚಿಂತನೆಗಳ ಹೊತ್ತಗೆ ಪ್ರಕಟವಾಗಿರುವುದು ವಿರಳ. ಇಂದಿನ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಶೋಧಗಳು, ಒಳನೋಟಗಳು ಅವಶ್ಯ....
"ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿ/ಯುಗ ವಿಪರೀತನ್ ಮಾಧವನೀತನ್ ಪೆರನಲ್ಲ" ಈ ನವೆಂಬರ್ ತಿಂಗಳಲ್ಲಿ ಎಲ್ಲರೂ ಮೈಕೊಡವಿ ಒಮ್ಮೆ ಕನ್ನಡ ಮಾತಾಡತೊಡಗುತ್ತಾರೆ. ಸಮ್ಮೇಳನಗಳು ಆರಂಭವಾಗುತ್ತವೆ. ಪ್ರಚಾರದ ಭರಾಟೆ ಜೋರಾಗುತ್ತದೆ. ನಿನ್ನೆಯ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ನನ್ನ ಕನ್ನಡ ಗುರುಗಳಲ್ಲೊಬ್ಬರಾದ ಡಾ. ಎಚ್. ಜಿ. ಶ್ರೀಧರ ಅವರನ್ನು ಕಾರ್ಯಕ್ಷೇತ್ರ ಅಡ್ಯನಡ್ಕಕ್ಕೆ ಕರೆದಿದ್ದೆ. ಅವರು ನನಗೆ ಪದವಿ ಐಚ್ಛಿಕದಲ್ಲಷ್ಟೇ ಅಲ್ಲದೆ ನಾನು ಪದವಿಪೂರ್ವ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದಾಗಲೂ ಕನ್ನಡ ಪಾಠ ಹೇಳುತ್ತಿದ್ದವರು. ಅಷ್ಟೇ ಅಲ್ಲದೆ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ನನ್ನ ಸಾಹಿತ್ಯ ಮನಸ್ಸನ್ನು ಸಲಹುವ ಕೆಲಸ ಮಾಡಿದ ಒಬ್ಬ ಸಾಚಾ ಮನುಷ್ಯ. ಅನೇಕ ಕಾರ್ಯಕ್ರಮಗಳಲ್ಲಿ ವೇದಿಕೆ ಕೂಡ ಕೊಡಿಸಿದವರು. ಮಾನ್ಯ ಶ್ರೀಧರ್ ಸರ್ ಅವರ ಬಗ್ಗೆ ಅಭಿಮಾನವಿರುವುದಕ್ಕೆ ಹಲವಾರು ಕಾರಣಗಳಿರಬಹುದು. ಪದವಿಯಲ್ಲಿ ಕನ್ನಡ ಐಚ್ಛಿಕಕ್ಕೆ ನಾನು ಸೀಟು ಬಯಸಿದ್ದ ಸಂದರ್ಭ. ಆ ದಿನ ನಾನು 'ವಿಜ್ಞಾನ ವಿದ್ಯಾರ್ಥಿ' ಎಂಬ ಕಾರಣಕ್ಕೆ ಸೀಟು ನಿರಾಕರಿಸಲ್ಪಟ್ಟಿತ್ತು. ಇಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಪೀಟರ್ ವಿಲ್ಸನ್ ಅವರಂತೂ ಕಿರಿಕಿರಿಯೆನಿಸಿ "ಸೀಟು ಕೊಡಲು ಸಾಧ್ಯವೇ ಇಲ್ಲ. ಏನು ಇನ್ಫ್ಲುಯೆನ್ಸ್ ಮಾಡುತ್ತೀಯ ನೀನು"ಎಂದು ಹೇಳಿ ವಾಪಸ್ ಕಳಿಸಿದ್ದರು. ಶ್ರೀ...
ಮಧುರ ಕ್ಷಣಗಳು
ReplyDelete