ಕೊಳಲ ದನಿ

ಶ್ರೀಕೃಷ್ಣನ ಮುಕುಟದಲ್ಲಿ
ಎಷ್ಟೊಂದು
ನವಿಲುಗರಿಗಳು!

ಶ್ರೀಹರಿಗೆ
ಹಾರವಾದವು
ಅದೆಷ್ಟೋ ಮಣಿಗಳು!

ನಾರಾಯಣನ ನಂಬಿ
ಎನಿತೋ ನರರು
ವೀರ ಅರ್ಜುನರಾದರು

ವಾಮನ ಬೆಳೆದು
ವಿಶ್ವರೂಪವ ತೋರಿ
ತ್ರಿವಿಕ್ರಮನಾದನು

ನಂದಕುಮಾರನ ವೃಂದಾವನದಲ್ಲಿ
ಅರಳಿದವು
ನೂರಾರು ಹೂವುಗಳು

ಶ್ರೀರಂಗನಿಗೆ ಕೈಮುಗಿದು
ನಲಿದರು
ಹದಿನಾರು ಸಾವಿರ
ಗೋಪಿಕೆಯರು

ಕೃಷ್ಣನ
ಕೊಳಲ ದನಿ ಕೇಳಿ ಬಂದವು
ಗೋಕುಲಕೆ
ಹಿಂಡು ಹಿಂಡು ಗೋವುಗಳು.

✍️ ಶಿವಕುಮಾರ ಸಾಯ

Comments

Popular posts from this blog

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

🔺ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗಶಾಸ್ತ್ರದ ಜನಪ್ರಿಯತೆಯ ಬಗ್ಗೆ ಮಾತು🔻 ದಿನಾಂಕ 21.06.2019

ರಾಜ್ಯೋತ್ಸವ ಎಂಬ ಸಮಯ-ಸಂದರ್ಭ: ಒಂದು ಕುಶಲೋಪರಿ