ಕೊಳಲ ದನಿ

ಶ್ರೀಕೃಷ್ಣನ ಮುಕುಟದಲ್ಲಿ
ಎಷ್ಟೊಂದು
ನವಿಲುಗರಿಗಳು!

ಶ್ರೀಹರಿಗೆ
ಹಾರವಾದವು
ಅದೆಷ್ಟೋ ಮಣಿಗಳು!

ನಾರಾಯಣನ ನಂಬಿ
ಎನಿತೋ ನರರು
ವೀರ ಅರ್ಜುನರಾದರು

ವಾಮನ ಬೆಳೆದು
ವಿಶ್ವರೂಪವ ತೋರಿ
ತ್ರಿವಿಕ್ರಮನಾದನು

ನಂದಕುಮಾರನ ವೃಂದಾವನದಲ್ಲಿ
ಅರಳಿದವು
ನೂರಾರು ಹೂವುಗಳು

ಶ್ರೀರಂಗನಿಗೆ ಕೈಮುಗಿದು
ನಲಿದರು
ಹದಿನಾರು ಸಾವಿರ
ಗೋಪಿಕೆಯರು

ಕೃಷ್ಣನ
ಕೊಳಲ ದನಿ ಕೇಳಿ ಬಂದವು
ಗೋಕುಲಕೆ
ಹಿಂಡು ಹಿಂಡು ಗೋವುಗಳು.

✍️ ಶಿವಕುಮಾರ ಸಾಯ

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ನಿಶ್ಶಬ್ದದ ಗರ್ಭ ಮತ್ತು ಸೃಜನಶೀಲತೆಯ ಉದಯ: ಒಂದು ದಾರ್ಶನಿಕ ನೋಟ