ಬಯಕೆ

ಮೂಡುತಿದೆ ಚುಕ್ಕಿ,
ಹಾಡುತಿದೆ ಹಕ್ಕಿ;
ಕಾಡುತಿದೆ ಬಯಕೆ,
ಈಡೇರಲಿ ಹರಕೆ.

ಪಂಚಮದ ಶ್ರುತಿಯಲ್ಲಿ
ಮಿಡಿಯುತಿದೆ ಮನಸು;
ಇಂಚರದ ಹಂಚಿಕೆಗೆ
ಶುರುವಾಯ್ತು ಕನಸು.

ಮಧುವನದ ಸೌಭಾಗ್ಯ
ಮಲ್ಲಿಗೆಯ ತೋಟ;
ಶ್ರೀಹರಿಯ ನಂದನದಿ
ಶೃಂಗಾರದ ಆಟ!

ಹೂವಿಗೂ, ಪಕಳೆಗೂ
ದುಂಬಿಯ ಸ್ಪರ್ಶ;
ಪ್ರಕೃತಿಗೂ, ಪರಿಸರಕೂ
ತುಂಬಿದ ಹರ್ಷ.

ಮೊದಲಿಲ್ಲ ಕಡೆಯಿಲ್ಲ
ಸಾಗುತಿದೆ ಪಯಣ;
ಸೋಜಿಗಕೂ, ಸೊಬಗಿಗೂ
ತೆರೆದಿದೆ ಕರಣ.

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ನಿಶ್ಶಬ್ದದ ಗರ್ಭ ಮತ್ತು ಸೃಜನಶೀಲತೆಯ ಉದಯ: ಒಂದು ದಾರ್ಶನಿಕ ನೋಟ