Posts

ಬಹಿರಂತಶ್ಚ ಭೂತಾನಾಂ........

Image
ಬಹಿರಂತಶ್ಚ ಭೂತನಾಮಚರಂ ಚರಮೇವ ಚ | ಸೂಕ್ಷ್ಮತ್ವಾತ್ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್ || ಭಗವದ್ಗೀತೆಯ ಕೆಲವು ಸಾಲುಗಳಿವು. ಈ ಶ್ಲೋಕದ ಅರ್ಥ ದೇವರು ಎಂದರೆ ಯಾರು? ಅವನು ಎಲ್ಲಿದ್ದಾನೆ? ಎಂಬ ನಮ್ಮ ಹುಡುಕಾಟಕ್ಕೆ ಉತ್ತರ. " ಅದು ಜೀವಿಗಳ   ಹೊರಗಿದೆ ;  ಒಳಗೂ ಇದೆ ;  ಆದರೂ ಎಲ್ಲೆಡೆ ಚಲಿಸುತ್ತಿದೆ. ಅದು ಅಣುವಿಗಿಂತ ಅಣು ;  ಅದಕೆಂದೆ   ತಿಳಿವಿಗೆಟುಕದ್ದು. ಅದು ದೂರದಲ್ಲಿದ್ದರೂ ಎಲ್ಲರ ಹತ್ತಿರದಲ್ಲಿದೆ. " ಇದು ಸಾರ. ಈಶೋಪನಿಷದ್ ಮಂತ್ರದಲ್ಲಿ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ವಿವರಿಸಿದ ರೀತಿಯಲ್ಲಿಯೇ ಪ್ರಾಯೋಗಿಕವಾಗಿ ದೇವರನ್ನು ವಿವರಿಸುವ ವೈದಿಕ ಮಂತ್ರವಿದೆ: "ತದ್ ಅಂತರ ಅಸ್ಯ ಸರ್ವಸ್ಯ ತದ್ ಸರ್ವಸ್ಯ ಬಾಹ್ಯಃ" - ಅಂದರೆ, "ಅವನು ಎಲ್ಲದರೊಳಗೆ ಅಸ್ತಿತ್ವದಲ್ಲಿದ್ದಾನೆ, ಆದರೆ ಅವನು ಎಲ್ಲದರ ಹೊರಗಿದ್ದಾನೆ." ನಾವು ಭಗವಂತನಂತೆ ಆಗುವುದಕ್ಕೆ ಸಾಧ್ಯವಾ? ಕೀಳರಿಮೆ ಮತ್ತು ಮೇಲರಿಮೆ ಎರಡರಿಂದಲೂ ಅದು ಸಾಧ್ಯವಿಲ್ಲ. ಆದರೆ, ಸಾಧ್ಯವಿದೆ - ನಮ್ಮ ಶಕ್ತಿಯನ್ನು ನಮ್ಮ ಒಳಹೊರಗು ಇರುವ ಸರ್ವ ಭೂತಗಳಲ್ಲೂ ಕಂಡುಕೊಳ್ಳುವ ಮೂಲಕ ಮಾತ್ರ. ಆ ಶಕ್ತಿ ಸರ್ವಾಂತರ್ಯಾಮಿ. ಅಂದರೆ, ಯಾರೂ ಮೇಲೂ ಅಲ್ಲ. ಯಾರೂ ಕೀಳೂ ಅಲ್ಲ. ನೀವು - ನಾವು ನಮ್ಮ ನಮ್ಮ ಆಳಕ್ಕಿಳಿದು ಪ್ರಶ್ನಿಸಿಕೊಳ್ಳಬೇಕು. ನಮ್ಮ ಊಹೆಗೆ ನಿಲುಕದ, ನಾವು ಕಾಣದ ಹಲವಾರು ವಿಚಾರಗಳು ನಮ್ಮೆಲ್ಲರನ್ನೂ ಬದುಕಿಸುತ್ತಲೇ ಇರುತ್ತವೆ.

ಹಣಕಾಸು ನಿರ್ವಹಣೆ ಹೇಗಿರಬೇಕು?

Image
ಸಾಮಾನ್ಯ ಜನರಿಗೆ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೇಗೆ ಉಳಿಸಬೇಕು, ಎಲ್ಲಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗಿ, ಈ ಲೇಖನದಲ್ಲಿ ನಾನು ಹಣಕಾಸು ನಿರ್ವಹಣೆ ಮತ್ತು ಹೂಡಿಕೆ ಬಗ್ಗೆ ಸಾಕಷ್ಟು ಅಧ್ಯಯನ ಮತ್ತು ಅನುಭವಗಳ ಆಧಾರದಲ್ಲಿ ಪ್ರೀತಿಯಿಂದ ಒಂದಷ್ಟು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಈ ಲೇಖನ ತಮಗೆ ಇಷ್ಟವಾದರೆ ಒಂದು ಲೈಕ್, ಕಮೆಂಟ್ ಅಥವಾ ಮೆಸೇಜ್ ಬಾಕ್ಸಿನಲ್ಲಿ ಮೆಚ್ಚುಗೆಯನ್ನು ತಿಳಿಸಿ. ಹಣದುಬ್ಬರ ಎಂಬ ಪದವನ್ನು ನೀವು ಕೇಳಿರಬಹುದು. ಏನಿದು ಹಣದುಬ್ಬರ? ನಮ್ಮ ಕರೆನ್ಸಿ ಪ್ರತಿವರ್ಷ ಅಪಮೌಲ್ಯಕ್ಕೆ ಒಳಗಾಗುತ್ತಲೇ ಇರುತ್ತದೆ. ಹಣದುಬ್ಬರದಿಂದಾಗಿ ಅದರ ಕೊಳ್ಳುವ ಸಾಮರ್ಥ್ಯ(Purchasing power) ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತದೆ. ಪ್ರಸ್ತುತ ಭಾರತದಲ್ಲಿ ಈ ಹಣದುಬ್ಬರದ ದರ 6-7% ಸುಮಾರಿಗೆ ಇದೆ. ಅಂದರೆ, ವರ್ಷದಿಂದ ವರ್ಷಕ್ಕೆ ಹಣದ ಮೌಲ್ಯ ಅಷ್ಟು ಕುಸಿದಿರುತ್ತದೆ ಎಂದರ್ಥ. ಹಾಗಾಗಿ, ನಮ್ಮಲ್ಲಿರುವ ಹಣವು ಈ ಹಣದುಬ್ಬರವನ್ನು ಮೀರಿ ಬೆಳೆಯಬೇಕು. ಹಾಗಿದ್ದರೆ ಮಾತ್ರ ಅದು ಹೂಡಿಕೆಯಾಗುತ್ತದೆ. ಷೇರು ಮಾರುಕಟ್ಟೆಯು ನಿಮ್ಮ ಹಣ ಉತ್ಕೃಷ್ಟ ರೀತಿಯಲ್ಲಿ ಬೆಳೆಯಲು ನೀವು ನೀಡಬಹುದಾದ ಅವಕಾಶವಾಗಿದೆ. ಷೇರುಗಳ ಮೂಲಕ ಅಥವಾ ಇಂಡೆಕ್ಸ್ ಫಂಡ್‌ಗಳ ಮೂಲಕ ದೀರ್ಘ ಅವಧಿಗೆ ನಿಮ್ಮ ಉಳಿತಾಯದ ಒಂದು ಭಾಗವನ್ನು ಹೂಡಿಕೆ ಮಾಡಲು ಪ್ರಯತ್ನಿಸಬಹುದು. ಇದಕ್ಕಾಗಿ ವಿವಿಧ ಎಸೆಟ್ ಮೇನೇಜ್‌ಮೆಂಟ್ ಕಂಪ

ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕದ ವತಿಯಿಂದ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ 17-03-2024ರಂದು ನಡೆದ ಸಾಹಿತ್ಯ ಸಂಭ್ರಮ 2024ರ ಚುಟುಕು ಗೋಷ್ಠಿ - ಹನಿ ಮಿನಿ ಕಥಾ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಸಂದರ್ಭದಲ್ಲಿ....

Image
ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ವತಿಯಿಂದ 'ಸಾಹಿತ್ಯ ಸಂಭ್ರಮ - 2024' ಚುಟುಕು ಗೋಷ್ಠಿ - ಹನಿ ಮಿನಿ ಕಥಾ ಗೋಷ್ಠಿ ವಿಟ್ಲ: ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ವತಿಯಿಂದ ಸಾಹಿತ್ಯ ಸಂಭ್ರಮ 2024ರ ಚುಟುಕು ಗೋಷ್ಠಿ - ಹನಿ ಮಿನಿ ಕಥಾ ಗೋಷ್ಠಿ ಕಾರ್ಯಕ್ರಮವು ಅಡ್ಯನಡ್ಕ ಜನತಾ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಮತ್ತು ಸಾಹಿತಿ ಶಿವಕುಮಾರ್ ಸಾಯ ಅವರ ಅಧ್ಯಕ್ಷತೆಯಲ್ಲಿ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಾರ್ಚ್ 17ರಂದು ನಡೆಯಿತು. ಕನ್ನಡ ಪಯಸ್ವಿನಿ ಪ್ರಶಸ್ತಿ ವಿಜೇತ ಶಿಕ್ಷಕಿ, ಕವಯಿತ್ರಿ ಸೀತಾಲಕ್ಷ್ಮಿ ವರ್ಮ, ವಿಟ್ಲ ಅರಮನೆ ಅವರು ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಚುಟುಕು ಸಾಹಿತ್ಯ ಪರಿಷತ್ತು ದ. ಕ. ಜಿಲ್ಲಾಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಆನಂದ ರೈ ಅಡ್ಕಸ್ಥಳ ಉಪಸ್ಥಿತರಿದ್ದರು. ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷರಾದ ರಾಜಾರಾಮ ವರ್ಮ ವಿಟ್ಲ ಅರಮನೆ ಪ್ರಸ್ತಾವನೆಗೈದರು. ವಿಟ್ಲದಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ ಆಯೋಜನೆಗಾಗಿ ಚ

ನಗ್ನಸತ್ಯ (ಹನಿಗವನ)

Image
ರೀಲುಗಳಿಗೆ ವ್ಯೂ ಸಿಗಲು ಹರಸಾಹಸ, ಹುಡುಗರು ಹಂಚುತ್ತಿದ್ದಾರೆ ಕಾಮಿಡಿ; ಹುಡುಗಿಯರು ಕೊಂಚ ಕೊಂಚ ಬೆತ್ತಲೆಯಾಗುತ್ತಿದ್ದಾರೆ, ತೋರುತ್ತಿದ್ದಾರೆ ತುಂಡುಬಟ್ಟೆಯ ಮಿಡಿ! ✍️ ಶಿವಕುಮಾರ್ ಸಾಯ

ಅಲ್ಪತನ (ಹನಿಗವನ)

Image
ಒಂದು ಕಣ್ಣಿಗೆ ಬೆಣ್ಣೆ; ಒಂದು ಕಣ್ಣಿಗೆ ಸುಣ್ಣ; ತೊಳೆದುಬಿಡಬೇಕು, ಬದಲಾಯಿಸುವ ಬಣ್ಣ! ✍️ ಶಿವಕುಮಾರ್ ಸಾಯ

ಸುಪ್ತ ಮನಸ್ಸಿನ ಅಪರಿಮಿತ ಶಕ್ತಿ

Image
"ಜಗತ್ತನ್ನೇ ತಿರುಗಿಸುವ ಶಕ್ತಿ ನಿಮ್ಮ ಸುಪ್ತ ಪ್ರಜ್ಞಾ ಮನಸ್ಸಿನಲ್ಲಿದೆ" - ಈ ಮಾತನ್ನು ಹೇಳಿದವನು ತತ್ತ್ವಜ್ಞಾನಿ ವಿಲಿಯಂ ಜೇಮ್ಸ್. ನಾವು ನಂಬಿರುವ ನಂಬಿಕೆಯೇ ನಮ್ಮ ಮನಸ್ಸಿನ ಸುಪ್ತ ಶಕ್ತಿ. "ನಾವು ನಮ್ಮ ಸುಪ್ತ ಮನಸ್ಸಿಗೆ ಏನನ್ನು ಹೇಳಿಕೊಳ್ಳುತ್ತೇವೆಯೋ ಅದೇ ನಡೆಯುತ್ತದೆ" ಎಂದು ಡಾ| ಜೋಸೆಫ್ ಮರ್ಫಿ ಎಂಬ ಐರಿಶ್ ಲೇಖಕ ತನ್ನ ಪ್ರಖ್ಯಾತ ಗ್ರಂಥ 'ದ ಪವರ್ ಆಫ್ ಯುವರ್ ಸಬ್‌ಕಾನ್ಶಿಯಸ್ ಮೈಂಡ್' ಎಂಬುದರಲ್ಲಿ ಪ್ರತಿಪಾದಿಸಿದ್ದು, ಆ ಪುಸ್ತಕವು ಜಗತ್ತಿನಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದೆ. ಹಾಗಿದ್ದರೆ ಬನ್ನಿ, ಸುಪ್ತಮನಸ್ಸು ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ತಿಳಿದುಕೊಳ್ಳೋಣ. ಮನಸ್ಸು ಎಂದರೆ ಪ್ರಜ್ಞೆ, ಗ್ರಹಿಕೆ, ಯೋಚನೆ, ವಿವೇಚನೆ ಮತ್ತು ನೆನಪು ಸೇರಿದಂತೆ ಗ್ರಹಣ ಶಕ್ತಿಗಳ ಸಮೂಹ. ಇದನ್ನು ಸಾಮಾನ್ಯವಾಗಿ ಒಂದು ಜೀವಿಯ ಯೋಚನೆಗಳು ಮತ್ತು ಪ್ರಜ್ಞೆಯ ಸಾಮರ್ಥ್ಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಮನಸ್ಸು ಜಾಗೃತ ಸ್ಥಿತಿಯಲ್ಲಿಯೂ ಇರಬಹುದು ಅಥವಾ ಸುಪ್ತ ಸ್ಥಿತಿಯಲ್ಲಿಯೂ ಇರಬಹುದು. ನಾವು ಏನು ಯೋಚಿಸುತ್ತಿದ್ದೇವೆ ಎಂಬುದರ ಅರಿವಿನೊಂದಿಗೆ ಇರುವುದು ನಮ್ಮ ಮನಸ್ಸಿನ ಜಾಗೃತ ಸ್ಥಿತಿ. ಆದರೆ ನಮಗೆ ಅರಿವಿಲ್ಲದಂತೆ ನಮ್ಮ ಮನಸ್ಸಿನ ಹಲವಾರು ಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಅದುವೇ ಸುಪ್ತ ಸ್ಥಿತಿ. ನಮ್ಮ ಬದುಕಿನ ಸರ್ವಸ್ವವೂ ಸುಪ್ತ ಮನಸ್ಸಿನಲ್ಲಿ ನಮಗೆ ತಿಳಿ

ಪ್ರೀತಿಯ ಪ್ರಪಂಚ

Image
ದಿನದ ಸಂಭ್ರಮಕೆ ಕೊನೆಯೇ ಇರದಂತೆ, ಸಂತಸಕೆ ಎಣೆಯಿಲ್ಲದಂತೆ ನಡೆಯಿತು ನಡುಮನೆಯಲ್ಲಿ ಪ್ರೇಮದ ಮಹೋತ್ಸವ. ಪ್ರಕೃತಿಯ ಮಡಿಲಲ್ಲಿ ಹೂವು ಅರಳಿ ಗಾನವೈಭವ, ಗೋಷ್ಠಿಗಳು ಜರಗಿದವು ಮರಳಿ. ರಾಗ - ಅನುರಾಗ ತೋರಿ ಚೆಲುವು ಸುಸ್ವರವ ತಂತು ಒಲವು. ಎಡಬಲಗಳಲ್ಲಿ ಎಡತಾಕುತಿದ್ದ ಮಡಿವಂತಿಕೆಯ ಇಕ್ಕಿ, ದೃಢವಾಗಿ ಸುಖಿಸಿತು ಭಾವಲೋಕದ ಹಕ್ಕಿ.... ✍️ ಶಿವಕುಮಾರ ಸಾಯ 'ಅಭಿಜಿತ್'