Posts

ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕದ ವತಿಯಿಂದ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ 17-03-2024ರಂದು ನಡೆದ ಸಾಹಿತ್ಯ ಸಂಭ್ರಮ 2024ರ ಚುಟುಕು ಗೋಷ್ಠಿ - ಹನಿ ಮಿನಿ ಕಥಾ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಸಂದರ್ಭದಲ್ಲಿ....

Image
ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ವತಿಯಿಂದ 'ಸಾಹಿತ್ಯ ಸಂಭ್ರಮ - 2024' ಚುಟುಕು ಗೋಷ್ಠಿ - ಹನಿ ಮಿನಿ ಕಥಾ ಗೋಷ್ಠಿ ವಿಟ್ಲ: ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ವತಿಯಿಂದ ಸಾಹಿತ್ಯ ಸಂಭ್ರಮ 2024ರ ಚುಟುಕು ಗೋಷ್ಠಿ - ಹನಿ ಮಿನಿ ಕಥಾ ಗೋಷ್ಠಿ ಕಾರ್ಯಕ್ರಮವು ಅಡ್ಯನಡ್ಕ ಜನತಾ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಮತ್ತು ಸಾಹಿತಿ ಶಿವಕುಮಾರ್ ಸಾಯ ಅವರ ಅಧ್ಯಕ್ಷತೆಯಲ್ಲಿ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಾರ್ಚ್ 17ರಂದು ನಡೆಯಿತು. ಕನ್ನಡ ಪಯಸ್ವಿನಿ ಪ್ರಶಸ್ತಿ ವಿಜೇತ ಶಿಕ್ಷಕಿ, ಕವಯಿತ್ರಿ ಸೀತಾಲಕ್ಷ್ಮಿ ವರ್ಮ, ವಿಟ್ಲ ಅರಮನೆ ಅವರು ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಚುಟುಕು ಸಾಹಿತ್ಯ ಪರಿಷತ್ತು ದ. ಕ. ಜಿಲ್ಲಾಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಆನಂದ ರೈ ಅಡ್ಕಸ್ಥಳ ಉಪಸ್ಥಿತರಿದ್ದರು. ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷರಾದ ರಾಜಾರಾಮ ವರ್ಮ ವಿಟ್ಲ ಅರಮನೆ ಪ್ರಸ್ತಾವನೆಗೈದರು. ವಿಟ್ಲದಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ ಆಯೋಜನೆಗಾಗಿ ಚ

ನಗ್ನಸತ್ಯ (ಹನಿಗವನ)

Image
ರೀಲುಗಳಿಗೆ ವ್ಯೂ ಸಿಗಲು ಹರಸಾಹಸ, ಹುಡುಗರು ಹಂಚುತ್ತಿದ್ದಾರೆ ಕಾಮಿಡಿ; ಹುಡುಗಿಯರು ಕೊಂಚ ಕೊಂಚ ಬೆತ್ತಲೆಯಾಗುತ್ತಿದ್ದಾರೆ, ತೋರುತ್ತಿದ್ದಾರೆ ತುಂಡುಬಟ್ಟೆಯ ಮಿಡಿ! ✍️ ಶಿವಕುಮಾರ್ ಸಾಯ

ಅಲ್ಪತನ (ಹನಿಗವನ)

Image
ಒಂದು ಕಣ್ಣಿಗೆ ಬೆಣ್ಣೆ; ಒಂದು ಕಣ್ಣಿಗೆ ಸುಣ್ಣ; ತೊಳೆದುಬಿಡಬೇಕು, ಬದಲಾಯಿಸುವ ಬಣ್ಣ! ✍️ ಶಿವಕುಮಾರ್ ಸಾಯ

ಸುಪ್ತ ಮನಸ್ಸಿನ ಅಪರಿಮಿತ ಶಕ್ತಿ

Image
"ಜಗತ್ತನ್ನೇ ತಿರುಗಿಸುವ ಶಕ್ತಿ ನಿಮ್ಮ ಸುಪ್ತ ಪ್ರಜ್ಞಾ ಮನಸ್ಸಿನಲ್ಲಿದೆ" - ಈ ಮಾತನ್ನು ಹೇಳಿದವನು ತತ್ತ್ವಜ್ಞಾನಿ ವಿಲಿಯಂ ಜೇಮ್ಸ್. ನಾವು ನಂಬಿರುವ ನಂಬಿಕೆಯೇ ನಮ್ಮ ಮನಸ್ಸಿನ ಸುಪ್ತ ಶಕ್ತಿ. "ನಾವು ನಮ್ಮ ಸುಪ್ತ ಮನಸ್ಸಿಗೆ ಏನನ್ನು ಹೇಳಿಕೊಳ್ಳುತ್ತೇವೆಯೋ ಅದೇ ನಡೆಯುತ್ತದೆ" ಎಂದು ಡಾ| ಜೋಸೆಫ್ ಮರ್ಫಿ ಎಂಬ ಐರಿಶ್ ಲೇಖಕ ತನ್ನ ಪ್ರಖ್ಯಾತ ಗ್ರಂಥ 'ದ ಪವರ್ ಆಫ್ ಯುವರ್ ಸಬ್‌ಕಾನ್ಶಿಯಸ್ ಮೈಂಡ್' ಎಂಬುದರಲ್ಲಿ ಪ್ರತಿಪಾದಿಸಿದ್ದು, ಆ ಪುಸ್ತಕವು ಜಗತ್ತಿನಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದೆ. ಹಾಗಿದ್ದರೆ ಬನ್ನಿ, ಸುಪ್ತಮನಸ್ಸು ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ತಿಳಿದುಕೊಳ್ಳೋಣ. ಮನಸ್ಸು ಎಂದರೆ ಪ್ರಜ್ಞೆ, ಗ್ರಹಿಕೆ, ಯೋಚನೆ, ವಿವೇಚನೆ ಮತ್ತು ನೆನಪು ಸೇರಿದಂತೆ ಗ್ರಹಣ ಶಕ್ತಿಗಳ ಸಮೂಹ. ಇದನ್ನು ಸಾಮಾನ್ಯವಾಗಿ ಒಂದು ಜೀವಿಯ ಯೋಚನೆಗಳು ಮತ್ತು ಪ್ರಜ್ಞೆಯ ಸಾಮರ್ಥ್ಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಮನಸ್ಸು ಜಾಗೃತ ಸ್ಥಿತಿಯಲ್ಲಿಯೂ ಇರಬಹುದು ಅಥವಾ ಸುಪ್ತ ಸ್ಥಿತಿಯಲ್ಲಿಯೂ ಇರಬಹುದು. ನಾವು ಏನು ಯೋಚಿಸುತ್ತಿದ್ದೇವೆ ಎಂಬುದರ ಅರಿವಿನೊಂದಿಗೆ ಇರುವುದು ನಮ್ಮ ಮನಸ್ಸಿನ ಜಾಗೃತ ಸ್ಥಿತಿ. ಆದರೆ ನಮಗೆ ಅರಿವಿಲ್ಲದಂತೆ ನಮ್ಮ ಮನಸ್ಸಿನ ಹಲವಾರು ಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಅದುವೇ ಸುಪ್ತ ಸ್ಥಿತಿ. ನಮ್ಮ ಬದುಕಿನ ಸರ್ವಸ್ವವೂ ಸುಪ್ತ ಮನಸ್ಸಿನಲ್ಲಿ ನಮಗೆ ತಿಳಿ

ಪ್ರೀತಿಯ ಪ್ರಪಂಚ

Image
ದಿನದ ಸಂಭ್ರಮಕೆ ಕೊನೆಯೇ ಇರದಂತೆ, ಸಂತಸಕೆ ಎಣೆಯಿಲ್ಲದಂತೆ ನಡೆಯಿತು ನಡುಮನೆಯಲ್ಲಿ ಪ್ರೇಮದ ಮಹೋತ್ಸವ. ಪ್ರಕೃತಿಯ ಮಡಿಲಲ್ಲಿ ಹೂವು ಅರಳಿ ಗಾನವೈಭವ, ಗೋಷ್ಠಿಗಳು ಜರಗಿದವು ಮರಳಿ. ರಾಗ - ಅನುರಾಗ ತೋರಿ ಚೆಲುವು ಸುಸ್ವರವ ತಂತು ಒಲವು. ಎಡಬಲಗಳಲ್ಲಿ ಎಡತಾಕುತಿದ್ದ ಮಡಿವಂತಿಕೆಯ ಇಕ್ಕಿ, ದೃಢವಾಗಿ ಸುಖಿಸಿತು ಭಾವಲೋಕದ ಹಕ್ಕಿ.... ✍️ ಶಿವಕುಮಾರ ಸಾಯ 'ಅಭಿಜಿತ್'

ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ಸಾಹಿತ್ಯ ಕಮ್ಮಟ; ಸಾಹಿತ್ಯದಿಂದ ವ್ಯಕ್ತಿತ್ವದ ವಿಕಾಸ ಹಾಗೂ ಸ್ವಂತಿಕೆಯ ಪ್ರಕಾಶ: ಶಿವಕುಮಾರ್ ಸಾಯ

Image
ಅಡ್ಯನಡ್ಕ: ಅಡ್ಯನಡ್ಕ ಜನತಾ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 'ಶನಿವಾರ ಸಂಭ್ರಮ' ಸರಣಿ ಕಾರ್ಯಕ್ರಮದ ಅಂಗವಾಗಿ ಜನವರಿ 28ರಂದು ಸಾಹಿತ್ಯ ರಚನಾ ಕಮ್ಮಟ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜನತಾ ಪ್ರೌಢಶಾಲೆಯ ಕನ್ನಡ ಅಧ್ಯಾಪಕ, ಕವಿ, ಸಾಹಿತಿ ಶ್ರೀ ಶಿವಕುಮಾರ್ ಸಾಯ ಅವರು ಮಕ್ಕಳಿಗೆ ಸಾಹಿತ್ಯ ಮತ್ತು ಕವನ ರಚನೆಯ ತರಬೇತಿ ಮತ್ತು ಮಾರ್ಗದರ್ಶನ ನೀಡಿದರು. ಅವರು ಮಾತನಾಡುತ್ತಾ, ಮಕ್ಕಳ ಕವನಗಳನ್ನು ಬರೆಯುವಾಗ ಪ್ರಾಸಬದ್ಧತೆ, ಲಯ, ಛಂದಸ್ಸಿನ ಬಳಕೆ ಇದ್ದಾಗ ಬರವಣಿಗೆಯ ಕ್ರಮ ಆಕರ್ಷಕವಾಗುತ್ತದೆ. ವ್ಯಕ್ತಿತ್ವದ ವಿಕಾಸ ಹಾಗೂ ಸ್ವಂತಿಕೆಯ ಪ್ರಕಾಶಕ್ಕೆ ಸಾಹಿತ್ಯ ಪೂರಕ. ಸಾಹಿತಿಯು ತನ್ನ ಪ್ರತಿಭೆಯನ್ನು ಬಳಸಿ ಪದಗಳ ಮೂಲಕ ದೈನಂದಿನ ಜೀವನದಲ್ಲಿ ಕಂಡುಬರುವ ಆಶ್ಚರ್ಯ, ಕುತೂಹಲವನ್ನು ಹೊರಹಾಕುತ್ತಾನೆ. ಕವನ - ಕತೆಗಳನ್ನು ರಚಿಸುವುದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಬಹುದು ಎಂದು ಹೇಳಿದರು. ಸ್ವಂತಿಕೆಯು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನ. ಸುಲಭವಾಗಿ ಅನುಭವಕ್ಕೆ ದಕ್ಕುವ ವಿಷಯಗಳನ್ನು ಸಾಹಿತ್ಯ ರಚನೆಗೆ ಆರಿಸುವುದು ಸೂಕ್ತ. ಬರೆಯುವ ರೀತಿ, ಶೈಲಿ, ವರ್ಣನೆ, ಶಬ್ದ - ಅರ್ಥಾಲಂಕಾರಗಳ ಬಳಕೆ ಇವುಗಳಿಂದ ಪ್ರಬುದ್ಧ ಮತ್ತು ಜನಪ್ರಿಯವಾಗುವಂತೆ ಬರೆಯಬಹುದು. ಓದು ಮತ್ತು ಬರಹ ಎರಡೂ ಜೊತೆಯಾಗಿ ಸಾಗಬೇಕು. ಬರೆಯುತ್ತಾ ಬರೆಯು

ಆ ಒಂಭತ್ತು ಸಂಗತಿಗಳು.......

Image
ಎಲ್ಲರಿಗೂ ನಮಸ್ಕಾರಗಳು. ಈ ಒಂದು ಲೇಖನದಲ್ಲಿ ವಿಜ್ಞಾನದ ದೊಡ್ಡ ಸಿದ್ಧಾಂತಗಳು, ಜ್ಯೋತಿಷ್ಯ - ಮಂತ್ರ - ತಂತ್ರಗಳು, ಸಾಹಿತ್ಯ - ಕಲಾಪ್ರಿಯತೆ, ಅಧ್ಯಾತ್ಮ, ಯೋಗ ಮತ್ತು ಧ್ಯಾನ, ತತ್ತ್ವಶಾಸ್ತ್ರ, ಆನ್ವಯಿಕ ಮನಃಶಾಸ್ತ್ರ ಮುಂತಾದ ವಿಷಯಗಳ ಒಟ್ಟು ಅನುಭವವನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳಬಯಸುತ್ತೇನೆ. ಈ ವಿಷಯಗಳು ನನಗೆ ಬದುಕಿನ ಕೆಲವು ಹಂತಗಳಲ್ಲಿ ಆಸಕ್ತಿ, ಅನಿವಾರ್ಯತೆ ಮತ್ತು ಪ್ರಭಾವ ಬೀರಿದ ವಿಭಾಗಗಳು. ಅನುಭವಗಳು ವಿಕಸಿತವಾದಂತೆ ನನ್ನ ಅಧ್ಯಯನ ಅನಿವಾರ್ಯವಾಗತೊಡಗಿತು. ಇತ್ತೀಚೆಗೆ ನನ್ನ ಜೊತೆ ಮಾತನಾಡುವ ಅನೇಕರು ಈ ರೀತಿಯ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ ಅಥವಾ ನನ್ನ ಚರ್ಚೆಗಳು ಆ ಬಗೆಯಲ್ಲಿ ಸಾಗುತ್ತವೆ ಎಂಬುದು ಹೆಮ್ಮೆಯ ಸಂಗತಿ. ಸಾಹಿತ್ಯ, ಸಂಗೀತ ಮತ್ತು ಇತರ ಕಲೆಗಳು ಲೋಕದ ಜೊತೆಗಿನ ನಮ್ಮ ಅಭಿವ್ಯಕ್ತಿಯ ವಿಧಾನಗಳಾದರೆ, ಅಧ್ಯಾತ್ಮ ನಮ್ಮೊಳಗಿನ ಮೂಲಸ್ವರೂಪದೊಂದಿಗೆ ಒಂದೇ ಆಗುವ ಪ್ರಕ್ರಿಯೆ. ಅಧ್ಯಾತ್ಮ ಒಂದು ಸಿದ್ಧಿ. ವಿವಿಧ ಬಗೆಯ ವ್ಯಕ್ತಿಗಳೊಂದಿಗೆ ವರ್ತಿಸಿದ ಸಂದರ್ಭಗಳಿರಬಹುದು, ಸಂಗೀತ - ಸಾಹಿತ್ಯದ ನನ್ನ ಅಭಿವ್ಯಕ್ತಿಯೊಂದಿಗೆ ಹೆಸರು ಮಾಡುತ್ತಿದ್ದ ಆ ನನ್ನ ಬಾಲ್ಯ - ಹರೆಯದ ದಿನಗಳಿರಬಹುದು, ವಿಭಿನ್ನವಾಗಿ ಸಾಗಿತು. ನಮ್ಮ ಹೊರಗೆ ಅನುಭವಕ್ಕೆ ಬರುತ್ತಿರುವ ವಿಷಯ ನನ್ನ ಒಳಗಿನಿಂದಲೇ ಉತ್ಪ್ರೇಕ್ಷಿತವಾದ ವಿಷಯ ಎಂಬುದು ಜರುಗಿದ ಕೆಲವು ಘಟನೆಗಳಿಂದ ಅರಿವಾಯಿತು. ಹೀಗಾಗಿ ನನ್ನದೇನಿದ್ದರೂ ಜ್ಞಾನಾನುಭವವ