ಮೆರವಣಿಗೆ

ಕಾಡುತಿಹ ಮೌನದ ಆಚೆ
ಕಾಣಬಹುದೊಂದು ಮಜಲು;
ಆಶಿಸಿದೆ ನನ್ನ ಮನ
ತಪಿಸಿ, ತಡಕಾಡಿ....

ಬೀರುತಿಹ ಬಿಂಕದ ಆಚೆ
ತೋರಬಹುದೊಂದು ಅಮಲು;
ಕಾಯುತಿದೆ ಬಣ್ಣಬಣ್ಣದ
ಖಾಸಗಿ ಮಹಲು.

ದೀಪಗಳು ಬೆಳಗಿವೆ,
ಗಂಟೆಗಳು ಮೊಳಗಿವೆ;
ಪ್ರಣಯದ ಹಾಡಿಗೆ
ಹುಟ್ಟುತಿದೆ ಸಂಗೀತ.

ರಾತ್ರಿಗಳು ನೂರಾರು
ಕಥೆಗಳ ಹೊತ್ತು ತರುತಲಿದೆ;
ಆಕಾಶದಲ್ಲಿ ಬಣ್ಣಗಳ
ಮೆರವಣಿಗೆ ಬರುತಲಿದೆ.

ಸ್ವಾಗತವೂ ವಂದನೆಯೂ
ಸಂತೋಷಕ್ಕಾಗಿ;
ಹೃದಯದ ಮಿಡಿತಕ್ಕೀಗ
ಪದವೊಂದು ಬೇಗ ಮೂಡಲಿ.

ಸಂಕಟವ ಮರೆತ ಸಲ್ಲಾಪ
ನನ್ನ ನಿನ್ನ ಇನಿದನಿ;
ಸಾಂಗತ್ಯದಿಂದ ಹರಿಯಲಿ
ಅಮೃತದ ವಾಹಿನಿ.

✍️ಶಿವಕುಮಾರ ಸಾಯ

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ನಿಶ್ಶಬ್ದದ ಗರ್ಭ ಮತ್ತು ಸೃಜನಶೀಲತೆಯ ಉದಯ: ಒಂದು ದಾರ್ಶನಿಕ ನೋಟ