Posts

ದಿನಕರ ಇಂದಾಜೆ ಅವರ 'ಗರುಡಾವತಾರ'

Image
ಹೊಸದಿಗಂತ ನಿರ್ವಾಹಕ ಸಂಪಾದಕ ಶ್ರೀಯುತ ದಿನಕರ ಇಂದಾಜೆ ಒಂದು ಸಂದರ್ಭದಲ್ಲಿ ನನ್ನನ್ನು ಪತ್ರಿಕೆಯ ಉಪಸಂಪಾದಕನನ್ನಾಗಿಸಿ ಮುನ್ನಡೆಸಿದವರು. ಸಾಹಿತಿಯಾಗಿ, ಕಾದಂಬರಿಕಾರರಾಗಿಯ ೂ ಮುಂಚೂಣಿಯಲ್ಲಿದ...

ಅವರವರ ಬದುಕಲ್ಲಿ ಅವರವರು ಹೀರೋಗಳೇ!

Image
ಈ ಲೋಕದಲ್ಲಿ ಅದೆಂಥ ವಿಚಿತ್ರ ಮನುಷ್ಯರಿರುತ್ತಾರಪ್ಪಾ! ಕೆಲವರಿರುತ್ತಾರೆ. ಅವರಿಗೆ ಮತ್ತೊಬ್ಬರಿಗೆ ಬುದ್ಧಿ ಹೇಳುವ ತೆವಲು, ತವಕ. ಒಂದು ಬಗೆಯ ತಿಕ್ಕಲು ಸ್ವಭಾವ. ತಮ್ಮ ಮೂಗಿನ ನೇರಕ್ಕೆ ಮಾತಾಡಿಬಿಡುವ...

ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸುವುದು

Image
'ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು' ಎಂಬಂತೆ ಮೊದಲು ಸಂಸ್ಕಾರ ನೀಡುವವಳು ತಾಯಿ. 'ವಿದ್ಯೆಯಲಿ ತನುಮನವ ತಿದ್ದಿಕೊಳ್ಳಲು ಬೇಕು' ಎಂದು ಕವಿ ಸರ್ವಜ್ಞ ಹೇಳಿದ್ದಾನೆ. ಹಿಂದೆ ಮನೆಗಳಲ್ಲಿ ಕೂಡುಕು...

2016ರ ಕುವೆಂಪು ಜನ್ಮದಿನಾಚರಣೆಯನ್ನು 'ವಿಶ್ವ ಮಾನವ ದಿನ'ವನ್ನಾಗಿ ಆಚರಿಸಿದ ಸಂದರ್ಭದಲ್ಲಿ ಮಾತನಾಡುವ ಅವಕಾಶ.

Image

2017ರಲ್ಲಿ ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡ ಒಂದು ಸಂದರ್ಭ.

Image

ಸುವರ್ಣ ಸಂಭ್ರಮ

Image
ಇದು ಸುವರ್ಣ ಸಂಭ್ರಮ ಹಾಡೋಣ ಸರಿಗಮ ನೋಡಿರಣ್ಣ ಚಂದ ನಮ್ಮ ಶಾಲೆಯಂದ ಕೊಂಡಾಡಿ ಕೀರ್ತಿ ತುಂಬೋಣ ಸ್ಫೂರ್ತಿ ಈ ಬಯಲು ಅಂಗಣ ನಲಿದು ಕಲಿವ ರಿಂಗಣ ಪಾಠ ವಿಷಯ ಜ್ಞಾನ ಹೊಸ ತಂತ್ರಜ್ಞಾನ ತೊಲಗಿಸಿ ಅಜ್ಞಾನ ತೋರಿತು ಸುಜ್ಞಾನ ಮೆರೆದಾಟವ ನೋಡು ಮೆರವಣಿಗೆ ಮಾಡು ನಮ್ಮ ಶಾಲೆಯೊಡಲು ಪ್ರಕೃತಿಯ ಮಡಿಲು ವಿದ್ಯೆಯ ಸಂಪತ್ತು ಸದ್ಬುದ್ಧಿಯನಿತ್ತು ಕಾಪಾಡಿದ ಶಾಲೆಯೇ ಏನು ನಿನ್ನ ಲೀಲೆ! ಶಾಲೆಗೆ ಐವತ್ತು ತುಂಬಿದ ಈ ಹೊತ್ತು ಸ್ವಾಗತಿಸಿದೆ ತೋರಣ ಆನಂದದ ಪ್ರೇರಣ -ಶಿವಕುಮಾರ ಸಾಯ (೧೨.೧೨.೨೦೧೫ರಂದು ಜರಗಿದ ಶಾಲಾ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಅಭಿನಯಿಸಲ್ಪಟ್ಟ ಗೀತೆ.)

ಮತ್ತೆ ಬರೆಯುತ್ತೇನೆ ಕವಿತೆ

Image
ಮತ್ತೆ ಬರೆಯುತ್ತೇನೆ ಕವಿತೆ ದೇವರ ಹೆಸರಿನಲ್ಲಿ; ಬರೆಯುತ್ತೇನೆ ಕವಿತೆ ಒಂದು ನಿಶ್ಚಯಕ್ಕಾಗಿ. ಮುಡಿಪಿನ ಧಾರಣೆಯ ಬಯಸುವ ಬಯಕೆಗಳ ಮಾಲೆಯಂತೆ ಬವಣೆಯ ನೀಗುವ ಭರವಸೆ ಕರುಣೆಯಲಿ ಕರಪಿಡಿದು ಕಾಪಾಡುವುದು. ಪವಾಡಗಳು ನಡೆಯುವವು ಪ್ರಸಿದ್ಧಿಯಂತೆ; ನಿನ್ನ ಆಶೋತ್ತರಗಳಿಲ್ಲಿ ನೆರವೇರುವವು ನಿರ್ಣಯದಂತೆ. ನೀ ಈ ಕ್ಷಣ ಒಮ್ಮೆ ಅಳುತ್ತಿರಬಹುದು, ಮತ್ತೊಮ್ಮೆ ವರ್ತಮಾನದಲ್ಲಿ ಗೆರೆ ಎಳೆದು ಉಸಿರಾಡುತ್ತಿರಬಹುದು, ಮಗದೊಮ್ಮೆ ನಗುನಗುವ ವಿಧಾನ, ತಂತ್ರೋಪಾಯ ಪಾಲಿಸುತ್ತಿರಬಹುದು.... ಯಾವುದೂ ಶಾಶ್ವತವಲ್ಲ- ನಿನ್ನ ದುಗುಡಗಳು ಕೂಡ ನಿಜವಲ್ಲ; ಅಪೂರ್ವ ನಿಲುವಿನಿಂದ ಗೆಲುವಿನ ಕಡೆ ಚಲಿಸುತ್ತಾ ಮತ್ತೆ ಬರೆಯುತ್ತೇನೆ ಕವಿತೆ- ಒಂದು ತದೇಕ ಚಿತ್ತದ ಧ್ಯಾನದಂತೆ, ತಪಸ್ಸಿನಂತೆ, ನಿರ್ವಾಹಕನ ನ್ಯಾಯದಂತೆ ದೇವರ ಹೆಸರಿನಲ್ಲಿ. ✍️ಶಿವಕುಮಾರ ಸಾಯ 'ಅಭಿಜಿತ್'