Posts

ಚೈತನ್ಯದ ಆಂದೋಲನ ನಿರಂತರ - ಇದು ಜೀವ, ಇದೇ ಜೀವನ!

Image
“No man ever steps in the same river twice, for it's not the same river and he's not the same man.” - ಹೀಗೆಂದು ಹೇಳಿದವನು ಹಿರಾಕ್ಲಿಟಸ್. ಬದುಕಿನ ಬಗ್ಗೆ ಆತ ಎಷ್ಟೊಂದು ಅರ್ಥವತ್ತಾಗಿ ಹೇಳಿದ್ದಾನೆ ಅಲ್ಲವೇ? ನದಿ ಹೇಗೆ ಕ್ಷಣ ಕ್ಷಣ ಬದಲಾಗುತ್ತಿರುತ್ತದೆಯೋ ಮನುಷ್ಯ ಕೂಡ ಕ್ಷಣ ಕ್ಷಣ ಬದಲಾಗುತ್ತಾನೆ. ಅಚಲ ಎಂದು ಭಾವಿಸಿದರೆ ಎಲ್ಲವೂ ಅಚಲ, ಸ್ಥಿರ. ಆದರೆ ಪ್ರತಿಕ್ಷಣ ಬದಲಾವಣೆಯೊಂದಿಗೆ ಪ್ರಕೃತಿಯಾಗಿ ತೆರೆದುಕೊಳ್ಳುವುದು ಬ್ರಹ್ಮಾಂಡವೇ. "ಜೀವನ" ಎಂಬ ಪದವನ್ನು ಬದುಕಿಗೆ ಅನ್ವರ್ಥವಾಗಿ ಬಳಸುವಾಗ ಅದರ ನೀರು ಎಂಬರ್ಥವನ್ನು ಗ್ರಹಿಸಬೇಕು. ನೀರು ಎಲ್ಲಾ ಸ್ಥಿತಿಯಲ್ಲೂ ಇರುತ್ತದೆ. ಈ ಅನಂತ, ಅಖಂಡ ವಿಶ್ವವೂ ತನ್ನಷ್ಟಕ್ಕೆ ತಾನೇ ಬಹು ಆಯಾಮಗಳ ಬೃಹತ್ ಬೆಳಕು ಅಂದರೆ ಚೈತನ್ಯ. ಅದು ಅದರಷ್ಟಕ್ಕೇ ಸ್ಥಿರವೂ, ಚಲನಶೀಲವೂ ಹೌದು. ಅದು ಬದಲಾಗುವ ಸ್ವರೂಪ ಹೊಂದಿರುವುದರಿಂದಲೇ ಶಾಶ್ವತ! ಅದಕ್ಕೆ ಒಳಗೆ ಹೊರಗೆ ಎಂಬುದಿಲ್ಲ. ಅದರ ಹೊರಗೆ ಮತ್ತೊಂದು ಎಂಬುದೂ ಇಲ್ಲ. ಜೀವವಿಜ್ಞಾನವು ಉಸಿರಾಟದ ಆಧಾರದಲ್ಲಿ, ಹೃದಯಬಡಿತದ ಆಧಾರದಲ್ಲಿ ಜೀವಂತಿಕೆಯನ್ನು ಗುರುತಿಸುತ್ತದೆ. ದೇಹದ ಕಣಕಣಗಳಲ್ಲಿ ಶಕ್ತಿಯ ಸ್ವೀಕರಣೆಯಾಗುತ್ತದೆ. ಶಕ್ತಿಯ ಪರಿವರ್ತನೆಯಾಗುತ್ತದೆ. ಶಕ್ತಿಯ ಬಿಡುಗಡೆಯಾಗುತ್ತದೆ. ಜೀವಿ ಪರಿಸರಶಾಸ್ತ್ರದಲ್ಲಿ ಜೀವಿಗಳ ಮೂಲ ಉದ್ದೇಶ ಪ್ರತ್ಯುತ್ಪಾದನೆಯಲ್ಲದೆ ಮತ್ತೇನೂ ಅಲ್ಲ ಎನ್ನುತ್ತಾರೆ. ರಸಾಯನಶಾಸ್ತ್ರವು ...

'ತಪಸ್ಸು' ಎಂಬ ಟೆಲಿಪೋರ್ಟೇಶನ್!

Image
ನನ್ನ ನಂಬಿಕೆ ನಿಜಕ್ಕೂ Body consciousnessನ ಬಗ್ಗೆ! ಹಾಗಾಗಿ "ದೇಹೋ ದೇವಾಲಯ ಪ್ರೋಕ್ತಃ ಜೀವೋ ದೇವೋ ಸದಾಶಿವಃ" ಎಂಬ ಸನಾತನ ವಾಣಿ ಸಮ್ಮತ. ತಿಳಿಯಲ್ಪಟ್ಟಂತೆ ಆಂದೋಲನ ಮತ್ತು ಅಚಲತೆ ಎರಡೂ ಸ್ಥಿತಿಗಳೇ! ತಪಸ್ಸನ್ನು, ಧ್ಯಾನವನ್ನು ಉನ್ನತ ಮಟ್ಟದ ಪ್ರಾರ್ಥನೆ ಎನ್ನಲಾಗುತ್ತದೆ. ಧ್ಯಾನಗೈಯುವಾಗ ದೇಹದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನಷ್ಟೇ ಗಮನಿಸಬೇಕೆಂದು ಯೋಗಶಾಸ್ತ್ರ ಹೇಳುತ್ತದೆ. ಏಕೆಂದರೆ ದೇಹವನ್ನು ವಿಶ್ವವೆಂದೇ ಇಲ್ಲಿ ಪರಿಗಣಿಸಲಾಗುತ್ತದೆ. ಈಗ ನಾನು ಬರೆಯುತ್ತಿರುವುದು ಟೆಲಿಪೋರ್ಟೇಶನ್ ಬಗ್ಗೆ! ಆಧುನಿಕ ವಿಜ್ಞಾನದಲ್ಲಿ ಪ್ರಾಯೋಗಿಕವಾಗಿ ಧ್ವನಿ, ಚಿತ್ರ ಇತ್ಯಾದಿ ಟೆಲಿಪೋರ್ಟ್ ಆಗುವಂಥದ್ದು ನಾವು ನೋಡಿದ್ದೇವೆ. ತಪಸ್ಸು ನೀಡುವ ಫಲಗಳನ್ನು ಟೆಲಿಪೋರ್ಟ್ ಎಂಬರ್ಥದಲ್ಲಿ ಗ್ರಹಿಸಲು ಸಾಧ್ಯವಾಗಿರುವ ಅನುಭವ-ಅನುಭಾವಗಳಿಗೆ ವ್ಯಕ್ತ ರೂಪ ನೀಡಲು ಪ್ರಯತ್ನಿಸಿದ್ದೇನೆ. ನಾವು ತಿಳಿದಂತೆ ಟೆಲಿಪೋರ್ಟ್ ಮಾಡುವ ಸಂದರ್ಭದಲ್ಲಿ ಏನನ್ನಾದರೂ ಕೋಡಿಂಗ್ ಮಾಡಬೇಕಾಗುತ್ತದೆ. ಹಾಗೆಯೇ ಮತ್ತೊಂದು ಕಡೆ ಆ ವಸ್ತು ಡೀಕೋಡಿಂಗ್ ಕೂಡಾ ಆಗಬೇಕಾಗುತ್ತದೆ. ಈ ವಿಷಯ ಕ್ವಾಂಟಂ ಫಿಸಿಕ್ಸ್‌ಗೆ ಸಂಬಂಧಿಸಿದೆ. ಕೋಡಿಂಗ್ ಮಾಡಲ್ಪಟ್ಟಾಗ ವಸ್ತು ಅದೃಶ್ಯವಾಗುತ್ತದೆ. ಡೀಕೋಡಿಂಗ್ ಆದಾಗ ಮರಳಿ ವಸ್ತುವಾಗುತ್ತದೆ. ಪ್ರಾರ್ಥನೆ ಅಥವಾ ಧ್ಯಾನದಲ್ಲಿ ಕೋಡಿಂಗ್ - ಡೀಕೋಡಿಂಗ್ ವಿಧಾನ ಅನುಸರಿಸಲ್ಪಡುತ್ತದೆ ಎಂಬುದು ನನ್ನ ಅನುಭವ-ಅನುಭಾವಗಳಿಂದ ಕಂಡುಕೊಂಡ ಅದ್ಭ...

ಕೊಳಲ ದನಿ

Image
ಶ್ರೀಕೃಷ್ಣನ ಮುಕುಟದಲ್ಲಿ ಎಷ್ಟೊಂದು ನವಿಲುಗರಿಗಳು! ಶ್ರೀಹರಿಗೆ ಹಾರವಾದವು ಅದೆಷ್ಟೋ ಮಣಿಗಳು! ನಾರಾಯಣನ ನಂಬಿ ಎನಿತೋ ನರರು ವೀರ ಅರ್ಜುನರಾದರು ವಾಮನ ಬೆಳೆದು ವಿಶ್ವರೂಪವ ತೋರಿ ತ್ರಿವಿಕ್ರಮನಾದನು ನಂದಕುಮಾರನ ವೃಂದಾವನದಲ್ಲಿ ಅರಳಿದವು ನೂರಾರು ಹೂವುಗಳು ಶ್ರೀರಂಗನಿಗೆ ಕೈಮುಗಿದು ನಲಿದರು ಹದಿನಾರು ಸಾವಿರ ಗೋಪಿಕೆಯರು ಕೃಷ್ಣನ ಕೊಳಲ ದನಿ ಕೇಳಿ ಬಂದವು ಗೋಕುಲಕೆ ಹಿಂಡು ಹಿಂಡು ಗೋವುಗಳು. ✍️ ಶಿವಕುಮಾರ ಸಾಯ

ವಿಮರ್ಶೆಯೊಂದು ಪ್ರತಿಕ್ರಿಯೆ

Image
ನನ್ನ ನಿಡುಗಾಲದ ಮಿತ್ರ, ಹಿರಿಯರಾದ ಸನ್ಮಾನ್ಯ ಶ್ರೀಯುತ ಉದಯಕುಮಾರ್ ರೈ ಅವರು ಹಲವು ವರ್ಷಗಳ ಹಿಂದೆ ಮಾತನಾಡುವಾಗ "ಯಾವುದೇ ವಿಚಾರವನ್ನು ಯಾರು ಹೇಳಿದರೂ ಅರ್ಧ ಒಪ್ಪಿಕೊಳ್ಳಬೇಕು. ಉಳಿದ ಅರ್ಧವನ್ನು ಪರೀಕ್ಷೆಗೆ ಹಾಕಬೇಕು" ಎನ್ನುತ್ತಿದ್ದರು. "ನೀರು ಎಂದರೇನು?" ಎಂದು ಕೇಳಿದರೆ ಒಬ್ಬ ಒಂದು ಲೋಟದಲ್ಲೂ, ಮತ್ತೊಬ್ಬ ಚಮಚದಲ್ಲೂ, ಮತ್ತೊಬ್ಬ ಹನಿಯನ್ನೂ, ಇನ್ನೊಬ್ಬ ಸಾಗರವನ್ನೂ ತೋರಿಸಿಯಾನು. ಜಲವೆಂದರೆ ಜೀವನ, ಜೀವನವೆಂದರೆ ಜಲ - ಅದು ಮಾತ್ರ ತಾನು ಅದಲ್ಲ, ಇದಲ್ಲ ಎಂಬಂತೆ ಪ್ರವಹಿಸುತ್ತಲೇ ಇರುತ್ತದೆ. ಪ್ರಕೃತಿ ಸತ್ಯ-ಮಿಥ್ಯೆಗಳ ಸಹಿತ ಹೇಳಿಕೆ! ಕೆಲವರು ಸತ್ಯದ ಭಾಗವನ್ನೂ, ಕೆಲವರು ಸುಳ್ಳಿನ ಭಾಗವನ್ನೂ, ಇನ್ನು ಕೆಲವರು ತಮಗೆ ಬೇಕಾದಂತೆಯೂ ಅರ್ಥೈಸಿಕೊಳ್ಳುತ್ತಾರೆ. ಇಡೀ ಬದುಕು ನಿಂತಿರುವುದೇ ಈ ಗ್ರಹಿಕೆ (perception) ಹಾಗೂ ಪ್ರತಿಕ್ರಿಯೆಗಳ ಆಧಾರದ ಮೇಲೆ. ಪ್ರತಿಯೊಬ್ಬರು ನೀಡುವ ಪ್ರತಿಕ್ರಿಯೆಗಳು ವಿಭಿನ್ನ. ಏಕೆಂದರೆ ಎಲ್ಲರ ನಂಬಿಕೆಗಳು, ಆಲೋಚನೆಗಳು, ಊಹೆಗಳು, ಅವಧಾನ, ಸಾಮರ್ಥ್ಯ, ವಿದ್ಯೆ, ಅರಿವು, ಅನುಭವ ಇವೆಲ್ಲವೂ ಬೇರೆ ಬೇರೆ. ಆದುದರಿಂದ ಅಭಿಪ್ರಾಯಗಳಲ್ಲಿ, ಚಿಂತನೆಗಳಲ್ಲಿ ಸರಿ - ತಪ್ಪು ಎಂಬುದಿಲ್ಲ. ಎಲ್ಲವೂ ಒಂದೊಂದು ದೃಷ್ಟಿಯಿಂದ ಸರಿಯೇ. ಪ್ರತಿಯೊಬ್ಬನೂ ಅವನ ಕಣ್ಣಿನಿಂದಷ್ಟೇ ನೋಡುವುದಕ್ಕೆ ಸಾಧ್ಯ. ಅವನ ಮೆದುಳಿನ ಜೀವರಾಸಾಯನಿಕ ಬದಲಾವಣೆಯಂತೆಯೇ ಯೋಚಿಸುವುದಕ್ಕೆ ಸಾಧ್ಯ, ಹಾಗೆಯೇ ಪ್ರತಿಕ್ರಿಯಿ...

🔶 ತೆರೆದ ಅಧ್ಯಾಯ 🔶

Image
🔶 ತೆರೆದ ಅಧ್ಯಾಯ 🔶 ಇದು ವಿವಿಧ ನಿಯತಕಾಲಿಕಗಳಲ್ಲಿ ಕಳೆದ ಎರಡು ದಶಕಗಳಲ್ಲಿ ಪ್ರಕಟವಾದ ನನ್ನ ಕವನಗಳನ್ನು ಆಯ್ದು ತಯಾರಿಸಿದ ಗುಚ್ಛ. 250 ಪುಟಗಳ ಈ ಪಿಡಿಎಫ್ ಸ್ವರೂಪದ ಕೃತಿಗೆ ಭರ್ಜರಿ ಪ್ರಚಾರ ನೀಡಿದ ಸ್ನೇಹಿತರಿಗೂ, ಮಾಧ್ಯಮಗಳಿಗೂ ಕೃತಜ್ಞತಾರ್ಪಣೆ. ವಂದನೆಗಳು. https://kannada.oneindia.com/news/bengaluru/poem-collections-of-shivakumar-saya-now-available-in-google-144148.html https://news13.in/archives/109732 http://www.suddi9.com/?p=105555 https://drive.google.com/file/d/1o582n0ul3pCBG7-x_4jnCHZzdFvpASd_/view?usp=drivesdk

ಹಿತಮಿತವಾಗಿದ್ದರೆ ಎಲ್ಲವೂ ಉತ್ತಮವೇ!

Image
"ಅತಿರೂಪಾತ್ ಹೃತಾ ಸೀತಾ ಅತಿಗರ್ವಾತ್ ರಾವಣೋ ಹತಃ | ಅತಿದಾನಾತ್ ಬಲಿರ್ಬದ್ಧಃ ಅತಿ ಸರ್ವತ್ರ ವರ್ಜ್ಯಯೇತ್||" - ಸಂಸ್ಕೃತ ಸುಭಾಷಿತಕಾರನೊಬ್ಬ ಲೋಕಸತ್ಯವನ್ನು ಸರಳವಾಗಿ ಹೇಳಿದ್ದು ಹೀಗೆ. ಅತಿ ರೂಪದಿಂದಾಗಿ ಸೀತೆ ಅಪಹರಣಕ್ಕೊಳಗಾದಳು. ಅತಿ ಗರ್ವದಿಂದಾಗಿ ರಾವಣ ಹತನಾದ. ಅತಿ ದಾನಬುದ್ಧಿಯಿಂದಾಗಿ ಬಲಿ ಪಾತಾಳಕ್ಕೆ ತಳ್ಳಲ್ಪಟ್ಟ. ಆದುದರಿಂದ ಸರ್ವತ್ರ ಈ ಅತಿಯನ್ನು ಬಿಟ್ಟುಬಿಡಬೇಕು ಎಂಬುದು ಅವನ ಮಂತ್ರ. "ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ ।ಹಿತವಿರಲಿ ವಚನದಲಿ, ಋತವ ಬಿಡದಿರಲಿ ।।ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ । ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ ।।" ಈ ಮಾತನ್ನು ಕನ್ನಡ ಕವಿ ಡಿ. ವಿ. ಗುಂಡಪ್ಪನವರು ಹೇಳಿದ್ದಾರೆ. ಅತಿಯಾದರೆ ಅಮೃತವೂ ವಿಷವಾಗಿಬಿಡುತ್ತದೆ ಎನ್ನುತ್ತಾರೆ. ಮೌನ ಒಳ್ಳೆಯ ಲಕ್ಷಣ. ಆದರೆ ಅದೇ ಅತಿಯಾದರೆ ಬಂಧನವೇ. ವಿನಯ ಒಳ್ಳೆಯ ಲಕ್ಷಣ. ಹಾಗೆಂದು ಕೇವಲ ನಮ್ರತೆಯೊಂದೇ ಉಳಿದು ಬರೀ ಸಾತ್ವಿಕ ಕ್ರೋಧವೂ ಇಲ್ಲದಿದ್ದರೆ ಅಂತಹವನ ಗತಿಯೇನು? ಪ್ರೀತಿ ಒಳ್ಳೆಯ ಲಕ್ಷಣ. ಹಾಗೆಂದು ಅದು ವ್ಯಾಮೋಹವಾದರೆ ಕಷ್ಟವೇ. ಆಸೆ ಒಳ್ಳೆಯ ಲಕ್ಷಣ. ಆದರೆ ಅಸೆ ಅತಿಯಾದರೆ ಗತಿಗೇಡು. ಅದೇ ರೀತಿ ಬಹುತೇಕ ಪುರಾಣ - ಮಹಾಕಾವ್ಯಗಳಲ್ಲಿ ಪ್ರತಿಯೊಂದು ಪಾತ್ರದ ಕತೆ ಹೇಳಬೇಕಿದ್ದಾಗಲೂ ಒಂದೊಂದು ಗುಣ ಎದುರಿಸಿದ ತಾಕಲಾಟಗಳನ್ನು, ವಿಪರ್ಯಾಸಗಳನ್ನು, ಹಾಗೆಯೇ ಹಿತಮಿತವಾಗಿದ್ದಾಗ ಗುಣಗಳು ವ್ಯಕ್ತಿಗೆ ಪ್ರಾಪ್ತಗೊಳಿ...

ನರಹರಿ ಪರ್ವತಕ್ಕೆ ಚಾರಣ

Image
ನಿನ್ನೆ ನರಹರಿ ಪರ್ವತಕ್ಕೆ ನಮ್ಮ ಪ್ರಯಾಣ...ಈ ಚಾರಣದ ಚಿತ್ರದಲ್ಲಿ ಮಿತ್ರರಾದ ಜಯರಾಮ ನಾವಡ ನಿಟಿಲಾಪುರ, ನವೀನ್ ಜಿ. , ಗಣೇಶ್ ಕೆ. ಆರ್. ಹಾಗೆಯೇ ನಾನೂ ಇದ್ದೇನೆ.