Posts

ವಿಜಯದಶಮಿ ದಸರಾ ಆಚರಣೆ

Image
ವಿಜಯದಶಮಿ ದಸರಾ ಪ್ರಯುಕ್ತ ಆಗಮಿಸಿದ ಬಂಧು ಮಿತ್ರರೊಂದಿಗೆ... ... (ಚಿತ್ರದಲ್ಲಿ ಶಿವಕುಮಾರ ಸಾಯ, ಜಯರಾಮ ನಾವಡ ನಿಟಿಲಾಪುರ, ಗಣೇಶ್ ಕೆ. ಆರ್. ಹಾಗೂ ಕಾರ್ತಿಕ್ ಸಾಯ)

ಸತ್ಯ

Image
ಬ್ರಹ್ಮಾಂಡದಲ್ಲಿ ಬೆಳಗಲಾಗದ ಮಂದಿ ಸೂರ್ಯನನ್ನು ಕಟ್ಟಿ ಹಾಕಿದರು ನದಿಯನ್ನು ಮುಟ್ಟಿ ಉದರಕ್ಕೆ ತಿರುಗಿಸಿದರು ಸಮುದ್ರವನ್ನು ಮುಖಕ್ಕೆ ಹಾಯಿಸಿಕೊಂಡು ತಾವೇ ಸಮುದ್ರ ಎಂದರು. ಕುರುಡನ ವರ್ಣನೆಯಂತೆ ಕಿವುಡನ ಮಾತಿನಂತೆ ಆಚೆ ಈಚೆ ನೋಡದೆ ಸತ್ಯಕ್ಕೆ ಬಾಗದೆ ನುಡಿದದ್ದೇ ವೇದ ನಡೆದದ್ದೇ ಹಾದಿಯೆಂದು ಸಾರಿ ಪೀಠಕ್ಕೆ ಹಂಬಲಿಸಿಬಿಟ್ಟರು ತಾವೇ ಪರಬ್ರಹ್ಮ ಎಂದು ದಾಖಲೆಯನ್ನೂ ಕೊಟ್ಟರು. ಆ ರಾಕ್ಷಸರಿಗೆ ಲೋಕವಿಡೀ ನಕ್ಕದ್ದು ತಿಳಿಯಲಿಲ್ಲ ಪ್ರಪಂಚ ಅಣಕಿಸಿದರೂ ಗೊತ್ತಾಗಲಿಲ್ಲ ಸೂರ್ಯ ಬದಲಾಗಲಿಲ್ಲ ನದಿ ಬಯಲಾಗಲಿಲ್ಲ ಸಮುದ್ರ ಮೂತಿಯಾಗಲಿಲ್ಲ ಆ ದುರುಳರು ಮಾತ್ರ ಬರ್ಬರವಾಗಿ ಸತ್ತರು. ✍️ ಶಿವಕುಮಾರ ಸಾಯ 'ಅಭಿಜಿತ್'

ನ್ಯಾಯ

Image
ಆಟ ಆಡಿ ಕುತಂತ್ರದ ಕೂಟ ಹೂಡಿ ತಾನೇ ಮಹಾಬುದ್ಧಿಯೆಂದು ಸಾರಿದ ಕಿಡಿಗೇಡಿ ಮಾನ - ಮರ್ಯಾದೆಯೇ ಇಲ್ಲದೆ ತನ್ನಷ್ಟಕ್ಕೆ ತಾನೇ ಆಗಿದ್ದಾನೆ ಪುಡಿಪುಡಿ ✍️ ಶಿವಕುಮಾರ ಸಾಯ 'ಅಭಿಜಿತ್'

ಪ್ರಶಸ್ತಿ

Image
ಜರುಗಿತು ಗಣ್ಯರಿಗೆ ಪ್ರಶಸ್ತಿ ಪ್ರದಾನ; ಅದರಲ್ಲೂ ಕೆಲವರಿಗೆ ಪ್ರಶಸ್ತಿಗಳೇ ಪ್ರಧಾನ! ✍️ ಶಿವಕುಮಾರ ಸಾಯ 'ಅಭಿಜಿತ್'

ಅಂತರ

Image
ಅಪಾತ್ರರಿಗೂ ಸತ್ಪಾತ್ರರಿಗೂ ಏನು ಅಂತರವೆಂದು ಯೋಚಿಸುತ್ತಿದ್ದೆ... ಅಪಾತ್ರರು ಹಾಗೆಯೇ; ಉಪಕಾರಿಯಂತೆ ನಟಿಸುತ್ತಾರೆ ಅಪಕಾರವನ್ನೇ ಎಸಗುತ್ತಾರೆ. ಕದ್ದು ಕದ್ದು ನೋಡುತ್ತಾರೆ; ಗುಣದಲ್ಲಿ ಮತ್ಸರ ಮಾಡುತ್ತಾರೆ!  ಹೋದಲ್ಲಿ ಬಂದಲ್ಲಿ ಖಂಡನೆ; ಭಟ್ಟಂಗಿಯಂತೆ ಮಂಡನೆ! ಆದರೆ...  ಸತ್ಪಾತ್ರರು ಮಾತ್ರ ಹಾಗಲ್ಲ; ನಿಮ್ಮ ಜೊತೆ ಇರುತ್ತಾರೆ ಭಾರವನ್ನು ಹೊರುತ್ತಾರೆ ಗಂಭೀರತೆಗಳನ್ನು ನಿಜಕ್ಕೂ  ಅರ್ಥೈಸಿಕೊಳ್ಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಿಸುತ್ತಾರೆ ಗೌರವಿಸುತ್ತಾರೆ... ಸತ್ಪಾತ್ರರು ಬದುಕಿಗೆ ಯಾವತ್ತೂ ಸಿಹಿ ಮತ್ತು ಸವಿ ನೀಡುತ್ತಾರೆ ನಿಮ್ಮ ದೌರ್ಬಲ್ಯ ಮತ್ತು ಪ್ರಾಬಲ್ಯ ಎರಡನ್ನೂ ಸ್ವಂತಿಕೆಯ ಭಾಗವಾಗಿ ಒಪ್ಪಿ ಅಪ್ಪಿಕೊಳ್ಳುತ್ತಾರೆ. ಅವರ ಸ್ನೇಹದಲ್ಲೊಂದು ಮಾಧುರ್ಯವಿರುತ್ತದೆ ಮಾರ್ದವತೆಯಿರುತ್ತದೆ...  ನೈಜ ಸ್ನೇಹಕ್ಕೆ ಎಣೆಯಿಲ್ಲ ಕಪಟ ಸ್ನೇಹಕ್ಕೆ ಮಣೆಯಿಲ್ಲ. ✍️ ಶಿವಕುಮಾರ ಸಾಯ 'ಅಭಿಜಿತ್'

ಆನ್‌ಲೈನ್ ಮದುವೆ!

Image
ಆನ್‌ಲೈನ್ ಮದುವೆಗಳು ಆನ್‌ಲೈನ್‌ನಲ್ಲೇ ಸಂಸಾರ ಆನ್‌ಲೈನ್‌ನಲ್ಲಿ ವ್ಯವಹಾರ ಆನ್‌ಲೈನ್‌ನಲ್ಲೇ ಮಕ್ಕಳು?! ಆನ್‌ಲೈನ್‌ನಲ್ಲೇ ಕುದುರುತ್ತದೆ ವ್ಯಾಪಾರ ಸಾಗಾಟ, ಸಂಚಾರ ಬಿಟ್ಟು ನಡೆಯುತ್ತದೆ ಈಗ ಸುಖ-ಸಂತೋಷದ ರಫ್ತು ಕೈಗಾರಿಕೆ, ಕಲೆಗಾರಿಕೆ ಎಲ್ಲ ಆನ್‌ಲೈನ್‌ನಲ್ಲಿ ಏನಿದು ಮೋಡಿ ಆದರಂತೆ ಅವರಿಬ್ಬರು ಜೋಡಿ ಹೇಗೋ ಏನೋ ಒಬ್ಬರನೊಬ್ಬರು ಮೆಚ್ಚಿ ಒಡನಾಡಿ ಆನ್‌ಲೈನ್‌ನಲ್ಲೇ ಒಟ್ಟು ಕೂಡಿ ಮೂಡುತ್ತಿವೆ ಹೊಸ ವಿಚಾರಗಳು ಹೊಸ ಚಿಂತನೆಗಳು ಹೊಸ ಬಯಕೆ ಹಾಗೂ ಹೊಸ ದಿಶೆಗಳು ಬದುಕು ಎಷ್ಟು ವಿಶಾಲವಾಗಿದೆ ಜಗತ್ತು ಎಷ್ಟು ವಿಸ್ತಾರವಾಗಿದೆ ಜ್ಞಾನೋದಯವಾಗುತ್ತಿದೆ ಹಸಿ ಹಸಿ ತಿನ್ನಬಾರದಂತೆ ಬೇಯಿಸಿ ತಿನ್ನೋಣ ಎಲ್ಲವನ್ನೂ; ಕೊರೋನಾ ಬಂದ ಮೇಲೆ ಏನೋ ಶುರುವಾಗಿದೆ ಎದೆಯಲ್ಲೀಗ ಢವಢವ ಎನ್ನುತ್ತಿದೆ. ✍️ ಶಿವಕುಮಾರ ಸಾಯ

ಶಾಂತಿಯುದ್ಧದ ಮತ್ತೊಂದು ಪರಿ... ಸಂತೋಷಕ್ಕಾಗಿ...

Image
ಅಧ್ಯಾತ್ಮ ಮತ್ತು ವಿಜ್ಞಾನಕ್ಕೆ ಹತ್ತಿರದ ನಂಟು ಇದೆ. Strong nuclear force, Weak nuclear force, Electromagnetic force, Gravitational force - ಅಧ್ಯಾತ್ಮದಲ್ಲಿ ಒಮ್ಮೆ ಒಂದು ಕಲ್ಪನೆಯಾಗಿದ್ದದ್ದು ವಿಜ್ಞಾನದಲ್ಲಿ ಮತ್ತೊಂದು ಕಾಲದಲ್ಲಿ ಸಾಧಿಸಲ್ಪಟ್ಟಿದೆ. ಆಧ್ಯಾತ್ಮಿಕವಾಗಿ ಎಲ್ಲದರ ಕಾರ್ಯ, ಕಾರಣ ಸಂಕಲ್ಪ. ಸಂಕಲ್ಪಕ್ಕೆ ಮಿಗಿಲಾದುದು ಯಾವುದೂ ಇಲ್ಲ. ಒಂದು ಬಲಿಷ್ಠವಾದ ಸಂಕಲ್ಪದಿಂದಲೇ ಎಲ್ಲವೂ ನಡೆಯುತ್ತಿದೆ. ಪ್ರಾಯಶಃ ಅದಕ್ಕಾಗಿಯೇ "Spiritual is stronger than any material force, that thoughts rule the world" ಎಂದು ಎಮರ್ಸನ್ ಹೇಳಿದ್ದಾನೆ. ಭಾರತೀಯ ತತ್ತ್ವಶಾಸ್ತ್ರದಲ್ಲೂ ಎಲ್ಲೆಂದರಲ್ಲಿ ಅಂತಹ ಶಕ್ತಿಯ ಬಗ್ಗೆ ಬಣ್ಣನೆಯಾಗಿದೆ. "ಅಹಂ ಬ್ರಹ್ಮಾಸ್ಮಿ" ಎಂಬ ಆದಿ ಶಂಕರಾಚಾರ್ಯರ ಸಿದ್ಧಾಂತವಿರಬಹುದು, "Iam everywhere" ಎಂದೇ ಅಂತಿಮವಾಗಿ ಹೇಳುವ ವಿಜ್ಞಾನದ ಅತ್ಯಂತ ದೊಡ್ಡ ಸಿದ್ಧಾಂತಗಳಾದ "ಜಗತ್ತಿನ ಮಾಯಾಜಾಲ", "ಸರ್ವತತ್ತ್ವ", "ಆಯಾಮಗಳು", "ಬಿಗ್ ಬ್ಯಾಂಗ್" ಮುಂತಾದ ಒಂದಷ್ಟು ಥಿಯರಿಗಳು ಹೊರಗೆಡಹಿದ ಅಂತರಾರ್ಥವಿರಬಹುದು - ಯಾರಿಗಾದರೂ ಈ ಅದ್ಭುತ ಶಕ್ತಿಯ ಬಗ್ಗೆ ಅಚ್ಚರಿ ಮತ್ತು ಕುತೂಹಲ ಮೂಡುತ್ತದೆ. ನಾವು ಯಾವುದೇ ಕಷ್ಟಗಳಿಂದ ಪಾರಾಗಲಿಕ್ಕಾಗಲೀ, ಸರಳರೇಖೆಯಂತೆ ಸಂತೋಷದ ದಿನಗಳೊಂದಿಗೆ ಬಾಳಲಿಕ್ಕಾ...