Posts

'ಟೆಲಿಪತಿ' ಪ್ರಯೋಗಗಳ ಸುತ್ತಮುತ್ತ

Image
ಸುಮಾರು ವರ್ಷಗಳ ಹಿಂದೊಮ್ಮೆ ದಿಢೀರಾಗಿ ನನ್ನ ಬಾಲ್ಯದ ಗುರುಗಳೂ, ಸ್ನೇಹಿತರೂ ಆದ ಶ್ರೀಯುತ ಶ್ರೀಪತಿ ಭಟ್ ಪದ್ಯಾಣ ಅವರು "Do you know telepathy?" ಎಂದು ಒಂದು ಮೊಬೈಲ್ ಮೆಸೇಜ್ ಕಳಿಸಿದ್ದರು. "Don't know" ಎಂದಷ್ಟೇ ಉತ್ತರಿಸಿದ್ದೆ. ಹಲವಾರು ವರ್ಷಗಳ ನಂತರ ಅಂತಹ ಅರೆವಿಜ್ಞಾನದ ವಿಷಯಗಳು ನನ್ನ ಪರಿಗಣನೆಗೆ ಬಂದಿದ್ದವು. ಅದು 2016ನೇ  ಇಸವಿ . ವಿಶೇಷಾಂಕವೊಂದರಲ್ಲಿ 'ಅತೀಂದ್ರಿಯ ಲೋಕದಲ್ಲಿ' ಎಂಬ ಲೇಖನವನ್ನು ಓದುತ್ತಿದ್ದಾಗ ಕುತೂಹಲ ಕೆರಳಿತು. ಆ ನಂತರ ಟೆಲಿಪತಿ ಎಂಬ ಈ mind to mind  communication  ಬಗ್ಗೆ ಕುತೂಹಲಿಯಾದೆ. ಟೆಲಿಪತಿ ಪ್ರಯೋಗಗಳನ್ನು ಮಾಡಲು ವಿಶೇಷ ಶಕ್ತಿ ಬೇಕಾಗುತ್ತದೆ. ಈ ದಿನಗಳಲ್ಲಿ ನಾವು ಪ್ರಾಪಂಚಿಕ ನೆಟ್‌ವರ್ಕ್‌ಗಳನ್ನು  ಹೆಚ್ಚಿಸಿಕೊಂ ಡಿದ್ದೇವೆ. ಆದರೆ ನಮ್ಮ "inner engineering" ಬಗ್ಗೆ ತಿಳಿದಿಲ್ಲ. ನಿಜವಾಗಿ ಪಿಂಡಾಂಡದಲ್ಲಿ ಬ್ರಹ್ಮಾಂಡ ಅಡಗಿದೆ ಎನ್ನುತ್ತಾರೆ ನೋಡಿ. ನಮ್ಮ ಒಳಗೇನೇ ಎಲ್ಲವೂ ಇದೆಯಂತೆ. ಟೆಲಿಪತಿಕ್ ವ್ಯಕ್ತಿಗಳಲ್ಲಿ ಎರಡು ಬಗೆ. ಕೆಲವರು ಸುಲಭವಾಗಿ ರಿಸೀವ್ ಮಾಡುತ್ತಾರೆ. ಇನ್ನು ಕೆಲವರು ಸುಲಭವಾಗಿ ಸಂದೇಶ ಕಳುಹಿಸುತ್ತಾರೆ. ಮನುಷ್ಯನೆಂದರೆ ಒಂದು ಜೀವರಾಸಾಯನಿಕ ವ್ಯವಸ್ಥೆ ಎಂದು ವೈದ್ಯ ವಿಜ್ಞಾನ ಹೇಳುತ್ತದೆ. ದೇಹದ ಒಳಗೆ ಸಂವೇದನೆಗಳನ್ನು ರವಾನಿಸಬಲ್ಲ ಇಂದ್ರಿಯಗಳೊಂದಿಗಿನ ಆಂತರಿಕ ನೆಟ್‌ವರ್ಕ್ ವ್ಯವಸ್ಥೆ ಇದೆ ತಾನೇ? ಅ...

ತಾಲೂಕು ಚುಸಾಪ ಅಧ್ಯಕ್ಷರಾಗಲಿರುವ ವರ್ಮರು

Image
ನಮ್ಮ ಆಪ್ತರು ಯಾವ ಸಾಧನೆ ಮಾಡಿದರೂ ಅದು ನಮ್ಮದೇ ಸಾಧನೆ ಎಂಬಷ್ಟು ಸಂತೋಷವಾಗುತ್ತದೆ. ಏಕೆಂದರೆ ನಮ್ಮ ಮನಸ್ಸಿಗೆ ಬಾಹ್ಯದ ದೃಢೀಕರಣವೊಂದು ಏನೋ ಒಂದು ಮಹತ್ವ ನೀಡಿದಂತೆನಿಸುತ್ತದೆ. ಅಮೃತವಾಹಿನಿ ಮಾಡುತ್ತಿರುವ ಕೆಲಸಗಳಿಗೆ ಸಿಂಹದ ಬಲ ಸಿಕ್ಕಂತಾಗಿದೆ. ಈ ಹಿಂದೆ ನಾವು ನಿರೀಕ್ಷಿಸಿರುವಂತೆ ನಮ್ಮ ಸ್ನೇಹಿತರು ಸಂಕಲ್ಪದ ಪ್ರಕಾರ ಸಾಹಿತ್ಯಪರ ಚಟುವಟಿಕೆಗಳಲ್ಲಿ ಮುನ್ನಡೆಯುತ್ತಿರುವುದು ಸಂತಸಕರ ಎನ್ನಬೇಕು. ಈಗ ಕಾರಣ ಬೇರೇನಲ್ಲ. ಶ್ರೀಯುತ ರಾಜಾರಾಮ ವರ್ಮ ವಿಟ್ಲ ಅವರು ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂಬುದೇ ಸಂಚಲನ ಮೂಡಿಸುವ ವಿದ್ಯಮಾನವಾಗಿದೆ. ಶ್ರೀಯುತ ರಾಜಾರಾಮ ವರ್ಮ ಅವರು ಮುಖ್ಯವಾಗಿ ಕವಿ. ಸಂಘಟಕ. ನನ್ನ ಅತ್ಯಂತ ಹತ್ತಿರದ ಸ್ನೇಹಿತರು. ಆಡಳಿತಾತ್ಮಕವಾಗಿ ಮತ್ತು ಮಿಕ್ಕೆಲ್ಲಾ ರೀತಿನೀತಿಗಳಿಂದಲೂ ಅಪಾರ ಅನುಭವಿ ಮತ್ತು ಜ್ಞಾನವುಳ್ಳವರು. ವಿದ್ಯಾಸಂಸ್ಥೆಗಳಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿದವರು. ಹಾಗೆಂದು ಯಾವುದೇ ಆಗ್ರಹಗಳನ್ನು ಸಮಗ್ರವಾಗಿ ಪರಿಶೀಲಿಸಿಯೇ ಅವರು ನಿರ್ಣಯಗಳನ್ನು ಎತ್ತಿಕೊಳ್ಳುತ್ತಾರೆ. ಶ್ರೀಯುತ ರಾಜಾರಾಮ ವರ್ಮ ವಿಟ್ಲ ಅವರು ಉತ್ತಮ ಕವಿ. ಕಟ್ಟುನಿಟ್ಟಿನ ವ್ಯಕ್ತಿ. ಇವರ ನಿಲುವುಗಳೆಲ್ಲವೂ ಜೀವಪರ. ಸಮಾಜಶಾಸ್ತ್ರೀಯ ನೆಲೆಗಟ್ಟಿನಲ್ಲಿ ಯಾವುದನ್ನಾದರೂ ಇದಮಿತ್ಥಂ ಎಂಬಂತೆ ವಿಮರ್ಶೆ ಮಾಡಬಲ್ಲ ಪಾಂಡಿತ್ಯವಿದೆ. ಹೀಗಿದ್ದೂ ಮಾತುಗಳಲ್ಲಿ ತೀರ್ಮಾನಗಳನ್ನು ಕೊಡದೇ ಸ್...

Opting happiness and positivity

Image
"Look at the bright side of your life and choose to be happy. Yes, it is a matter of choice. When negative thoughts enter your mind, just refuse to look at them, substitute them with happy thoughts" - when I was reading a web namely raiseyourmind.com I saw these words of the couch. It is a big question, sometimes. In front of me I find several choices. When I going to write or wanting to analyse, I have to follow a super condition. That is, in fact I have to choose the best out of best in it to get better. In things, in people, in subjects and objects. When life forms it is subjected to our thought itself. Because I found patterns in it. Thereby one rule I should follow when I wire inside the mind that considering actions and reactions should be related to positive things itself. Because I want to maximise the positive in my life. So I have to take the positive responsiveness of my mind to activate high with the surrounding positive subjects and experiences rather. It is a ...

ವಿಮರ್ಶೆ 🖼️ ವಿದ್ಯಾರ್ಥಿನಿ ಪಂಚಮಿಕುಮಾರಿ ವಿರಚಿತ 'ಆರಾಧನೆ'

Image
ಕುl ಪಂಚಮಿಕುಮಾರಿ ಬಾಕಿಲಪದವು ನಮ್ಮ ಜನತಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿ. ಈಕೆ ಪ್ರಕಟಿಸುತ್ತಿರುವ ತನ್ನ ಚೊಚ್ಚಲ ಕೃತಿ 'ಆರಾಧನೆ' ಎಂಬ ಕವನ ಸಂಕಲನಕ್ಕೆ ಎರಡು ಮಾತುಗಳ ಮುನ್ನುಡಿಯನ್ನು ಬರೆದುಕೊಡಲು ಅತ್ಯಂತ ಹೆಮ್ಮೆಪಡುತ್ತೇನೆ.  ಕವಿಮನಸ್ಸು ಹೆಚ್ಚು ಸೂಕ್ಷ್ಮಗ್ರಾಹಿಯಾದುದು. ಸುತ್ತಲ ಜಗತ್ತನ್ನು ಬೆರಗಿನಿಂದ ನೋಡುತ್ತಾ, ತನ್ಮಯತೆಯಿಂದ ಅನುಭವಿಸುತ್ತಾ, ಕುತೂಹಲ ತಳೆಯುತ್ತಾ, ಪ್ರತಿಕ್ರಿಯಿಸುತ್ತಾ ಹೋದಂತೆ ಪ್ರಕೃತಿಯ ಮೂಲದ್ರವ್ಯದಿಂದಲೇ ಕೃತಿಯೊಂದು ರಚನೆಯಾಗುತ್ತದೆ. ಅದರಂತೆ ಇಲ್ಲಿ ಪಂಚಮಿಕುಮಾರಿ ತನ್ನ ಸೊಗಸಾದ ಕವನ ಸಂಕಲನವನ್ನು ಬರೆದು ಓದುಗರಿಗೆ ನೀಡಿದ್ದಾಳೆ.  ಭಾವದ ಉತ್ಕಟ ಸ್ಥಿತಿಯಲ್ಲಿ ಕವಿತೆ ಸೃಷ್ಟಿಯಾಗುತ್ತದೆ. ಜಾತ ಸ್ವರೂಪದ ಪ್ರತಿಭೆ ಮತ್ತು ವ್ಯುತ್ಪತ್ತಿಯ ಬಲದಿಂದ ಕವಿತ್ವ ಸಿದ್ಧಿಸುತ್ತದೆ. ತನ್ನ ಹೈಸ್ಕೂಲು ವಿದ್ಯಾಭ್ಯಾಸದ ಆರಂಭದಿಂದಲೇ ಕುl ಪಂಚಮಿ ಓದು ಮತ್ತು ಬರವಣಿಗೆ ಎರಡರಲ್ಲೂ ಮುಂದಿದ್ದು, ಓದಲು ಕೊಟ್ಟ ಪುಸ್ತಕಗಳನ್ನು ಲಗುಬಗೆಯಿಂದ ಜ್ಞಾನಪಿಪಾಸುವಿನಂತೆ ಓದಿ ಮುಗಿಸುತ್ತಿದ್ದಳು. ಶೈಲೀಕರಣದ ಸಮಸ್ಯೆ ಕಾಡದಂತೆ ಲಾಗಾಯ್ತಿನಿಂದಲೂ ಛಂದಸ್ಸು, ವ್ಯಾಕರಣ ಮತ್ತು ಭಾಷೆಯ ಹಿಡಿತವನ್ನು ಸಂಪಾದಿಸಿದ್ದರಿಂದ ಆಕೆಯ ಬರವಣಿಗೆಯ ಪದ್ಧತಿ ಬಲಿಷ್ಠಗೊಳ್ಳುತ್ತಿರುವುದನ್ನು ಗಮನಿಸಬೇಕಾಗಿದೆ.  ಸಂಕಲನದ ಶೀರ್ಷಿಕೆಯಾಗಿರುವ 'ಆರಾಧನೆ' ಪುಸ್ತಕದ ಮೊದಲನೇ ಕವಿ...

ಅಡ್ಯನಡ್ಕಕ್ಕೆ 4ಜಿ ನೆಟ್‌ವರ್ಕ್: ನಾವು ಮಾಡಿದ್ದೇನು?

Image
ಅಡ್ಯನಡ್ಕದಲ್ಲಿ ಇನ್ನೇನು ಜಿಯೋ 4ಜಿ ನೆಟ್‌ವರ್ಕ್ ದೊರೆಯುವ ದಿನಗಳು ಹತ್ತಿರವಾಗಿವೆ. ಆದರೆ ಎರಡು ವರ್ಷಗಳಿಂದ ಕನೆಕ್ಟಿವಿಟಿ ಸಮಸ್ಯೆ ಎದುರಿಸುತ್ತಿರುವ ಈ ಪ್ರದೇಶದಲ್ಲಿ ಮೊತ್ತಮೊದಲು 4ಜಿ ದೊರೆಯುವಂತಾದದ್ದು ವಿಶೇಷ. ಜಿಯೋ ಕಾಲಿಟ್ಟ ಸಂದರ್ಭವದು. 2017ರ ಆರಂಭದಲ್ಲಿ ಹಳೆಯ ನೋಕಿಯಾ X200ನಲ್ಲಿ ಬಿಎಸ್ಎನ್ಎಲ್ ಸಿಮ್ ಇಟ್ಟುಕೊಂಡು ಕಷ್ಟಪಡುತ್ತಿದ್ದೆ. ಆದರೆ ಅದರಲ್ಲೇ ಫೇಸ್‌ಬುಕ್ ಮತ್ತು ವಾಟ್ಸಪ್ 2ಜಿ ಬಿಎಸ್ಎನ್ಎಲ್ ನೆಟ್‌ವರ್ಕ್‌ನಲ್ಲಿ ಬಳಸುತ್ತಿದ್ದೆ. ಇನ್ನೇನು ಕೆಲ ಹಳೆಯ ಮೊಬೈಲ್ ಮೂಲಕ ವಾಟ್ಸಪ್ ಬಳಸಲು ಸಾಧ್ಯವಿಲ್ಲ ಎಂದು ಸೂಚನೆ ಸಿಕ್ಕಿದಾಗ ಅನಿವಾರ್ಯವಾಗಿ ಹೊಸ ಮೊಬೈಲ್ ಖರೀದಿಸಬೇಕಾಗಿ ಬಂತು. ಆಗ ನಾನು ರೆಡ್ಮಿ 4ಜಿ ಮೊಬೈಲ್ ಖರೀದಿಸಿದೆ. ಅಲ್ಲದೆ ಮನೆಯಲ್ಲಿ ಜಿಯೋ ನೆಟ್‌ವರ್ಕ್ ಚೆನ್ನಾಗಿ ಸಿಗುತ್ತಿದ್ದ ಕಾರಣ ನನ್ನ ನಂಬರನ್ನು ಬಿಎಸ್ಎನ್ಎಲ್‌ನಿಂದ ಜಿಯೋಗೆ ಪೋರ್ಟ್ ಮಾಡಿಕೊಂಡೆ. ಆದರೆ ದುರದೃಷ್ಟವಶಾತ್ ಅಡ್ಯನಡ್ಕದಲ್ಲಿ ಜಿಯೋ ನೆಟ್‌ವರ್ಕ್ ಇರಲಿಲ್ಲವಾದ್ದರಿಂದ ಬೇರೊಂದು ಬಿಎಸ್ಎನ್ಎಲ್ ಸಿಮ್ ಅನಿವಾರ್ಯವಾಗಿ ಇಟ್ಟುಕೊಂಡು ಕಾಲಕಳೆಯತೊಡಗಿದ್ದೆ. ಅಡ್ಯನಡ್ಕಕ್ಕೆ ಜಿಯೋ ಸಿಗ್ನಲ್ ಸಿಗುವಂತಾಗಬೇಕೆಂದು ಹಟ ಹೂಡಿ ಕಸ್ಟಮರ್ ಕೇರ್ ಅಧಿಕಾರಿಗಳಿಗೆ ರಿಕ್ವೆಸ್ಟ್‌ಗಳನ್ನು ಮಾಡತೊಡಗಿದೆವು. ಗೆಳೆಯರಾದ ನಿರಂಜನ ಮಳಿ, ಶಿವ ಮತ್ತು ಇತರರು ನನ್ನೊಡನೆ ಸೇರಿಕೊಂಡರು. ಕರ್ನಾಟಕದ ನೆಟ್‌ವರ್ಕ್ ಮುಖ್ಯಸ್ಥರಾಗಿದ್ದ ಜಿಜಿ ವರ್ಗೀಸ್ ಅವರಿಗೆ ಮೈಲ್ ...

ರಾಜ್ಯೋತ್ಸವ ಎಂಬ ಸಮಯ-ಸಂದರ್ಭ: ಒಂದು ಕುಶಲೋಪರಿ

Image
"ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿ/ಯುಗ ವಿಪರೀತನ್ ಮಾಧವನೀತನ್ ಪೆರನಲ್ಲ" ಈ ನವೆಂಬರ್ ತಿಂಗಳಲ್ಲಿ ಎಲ್ಲರೂ ಮೈಕೊಡವಿ ಒಮ್ಮೆ ಕನ್ನಡ ಮಾತಾಡತೊಡಗುತ್ತಾರೆ. ಸಮ್ಮೇಳನಗಳು ಆರಂಭವಾಗುತ್ತವೆ. ಪ್ರಚಾರದ ಭರಾಟೆ ಜೋರಾಗುತ್ತದೆ. ನಿನ್ನೆಯ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ನನ್ನ ಕನ್ನಡ ಗುರುಗಳಲ್ಲೊಬ್ಬರಾದ ಡಾ. ಎಚ್. ಜಿ. ಶ್ರೀಧರ ಅವರನ್ನು ಕಾರ್ಯಕ್ಷೇತ್ರ ಅಡ್ಯನಡ್ಕಕ್ಕೆ ಕರೆದಿದ್ದೆ. ಅವರು ನನಗೆ ಪದವಿ ಐಚ್ಛಿಕದಲ್ಲಷ್ಟೇ ಅಲ್ಲದೆ ನಾನು ಪದವಿಪೂರ್ವ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದಾಗಲೂ ಕನ್ನಡ ಪಾಠ ಹೇಳುತ್ತಿದ್ದವರು. ಅಷ್ಟೇ ಅಲ್ಲದೆ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ನನ್ನ ಸಾಹಿತ್ಯ ಮನಸ್ಸನ್ನು ಸಲಹುವ ಕೆಲಸ ಮಾಡಿದ ಒಬ್ಬ ಸಾಚಾ ಮನುಷ್ಯ. ಅನೇಕ ಕಾರ್ಯಕ್ರಮಗಳಲ್ಲಿ ವೇದಿಕೆ ಕೂಡ ಕೊಡಿಸಿದವರು. ಮಾನ್ಯ ಶ್ರೀಧರ್ ಸರ್ ಅವರ ಬಗ್ಗೆ ಅಭಿಮಾನವಿರುವುದಕ್ಕೆ ಹಲವಾರು ಕಾರಣಗಳಿರಬಹುದು. ಪದವಿಯಲ್ಲಿ ಕನ್ನಡ ಐಚ್ಛಿಕಕ್ಕೆ ನಾನು ಸೀಟು ಬಯಸಿದ್ದ ಸಂದರ್ಭ.  ಆ ದಿನ ನಾನು  'ವಿಜ್ಞಾನ ವಿದ್ಯಾರ್ಥಿ' ಎಂಬ ಕಾರಣಕ್ಕೆ ಸೀಟು ನಿರಾಕರಿಸಲ್ಪಟ್ಟಿತ್ತು. ಇಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಪೀಟರ್ ವಿಲ್ಸನ್ ಅವರಂತೂ ಕಿರಿಕಿರಿಯೆನಿಸಿ "ಸೀಟು ಕೊಡಲು ಸಾಧ್ಯವೇ ಇಲ್ಲ. ಏನು ಇನ್ಫ್ಲುಯೆನ್ಸ್ ಮಾಡುತ್ತೀಯ ನೀನು"ಎಂದು ಹೇಳಿ ವಾಪಸ್ ಕಳಿಸಿದ್ದರು. ಶ್ರೀ...

ಹರುಷದಿ ಬಾಳೋಣ

Image
ಹರುಷದಿ ಬಾಳೋಣ/ ಜೀವನ ಆಗಲಿ ಸುಖಪಯಣ// ಸಾರ್ಥಕಗೊಳಿಸೋಣ/ ಬದುಕಲಿ ಸ್ಫೂರ್ತಿಯ ಹರಿಸೋಣ// ತೋರಣ ಕಟ್ಟೋಣ/ ಗೆಲುವಿನ ಕಾರಣ ತಿಳಿಸೋಣ// ಅರ್ತಿಯ ಹಂಚೋಣ/ ಛಲದಲಿ ಕೀರ್ತಿಯ ಮೆರೆಸೋಣ// ಬಾಲ್ಯದ ಆಟೋಟ/ ಗೆಳೆಯರ ಪ್ರ...